|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ತಪ್ಪು ಮಾಡಿದವ ಯಮನಾದರೂ ಅಷ್ಟೇ!

ಕಾಲವನ್ನು ನಿರೀಕ್ಷಿಸುತ್ತಿದ್ದ ಸತ್ಯವತಿ ಒಂದು ದಿನ ಅಂಬಾಲಿಕೆಯ ಬಳಿ ಹೋದಳು. ಅಂಬಿಕೆಯ ಜೊತೆಗಿನ ಮಾತುಕತೆಯ ಪುನರಾವರ್ತನೆಯಾಯಿತು. ನಿಯೋಗದಿಂದ ಮಗುವನ್ನು ಪಡೆಯುವ ಮಾತು. ಅಂಬಾಲಿಕೆ ಒಪ್ಪಲ್ಲಿಲ್ಲ. ಸತ್ಯವತಿ ಬಿಡಲಿಲ್ಲ. ಧರ್ಮದ ಮಾತುಗಳು, ಹಳೆಯ ನಿದರ್ಶನಗಳು, ತರ್ಕಗಳು ಪರಸ್ಪರ ವಿನಿಮಯಗೊಂಡವು. ಕೊನೆಗೆ ಅಂಬಾಲಿಕೆ ತಲೆಬಾಗಿದಳು. ಸತ್ಯವತಿ ಸಂತಸಗೊಂಡಳು. ವ್ಯಾಸರನ್ನು ಆಹ್ವಾನಿಸಿದಳು.   ವ್ಯಾಸರು ಬಂದರು. ಅಂಬಾಲಿಕೆಯ ಶಯನಮಂದಿರವನ್ನು ಪ್ರವೇಶಿಸಿದರು. ವ್ಯಾಸರನ್ನು ಕಂಡ ಅಂಬಾಲಿಕೆ ಅಂಬಿಕೆಯಂತೆಯೇ ಭಯಗೊಂಡಳು. ನಡುಗಿದಳು, ಶರೀರವು ಬೆವರಿತು, ಬಿಳುಪೇರಿತು, ಬಿಳುಚಿಗೊಂಡಳು. ನಿರ್ವಿಕಾರಚಿತ್ತದಿಂದ ವ್ಯಾಸರು ಮಗುವನ್ನು ಅನುಗ್ರಹಿಸಿದರು. ಮುಂದಾಗುವುದನ್ನು

Read More

ದಣಪೆಯೊಳಗಣ ಅಕ್ಷರಮೋಹ

ದಣಪೆಯೊಳಗಣ ಅಕ್ಷರಮೋ ಅವಳು ಕಲಿತಿದ್ದು ಕೇವಲ ನಾಲ್ಕನೇ ತರಗತಿಯಾದರೂ ಅವಳಿಗೆ ಸಿಕ್ಕಾಪಟ್ಟೆ ಅಕ್ಷರಮೋಹ. ಈಗಿನ ಕಾಲದವರಿಗೆ ಹತ್ತರ ತನಕದ ಮಗ್ಗಿಯನ್ನೇ ಸೀದಾ ಹೇಳಲು ಸರಿಯಾಗಿ ಬರದಿರುವಾಗ, ಇಪ್ಪತ್ತರ ತನಕದ ಉಲ್ಟಾ ಮಗ್ಗಿಯ ಜೊತೆಗೆ ರೇಡಿಯೋದಲ್ಲಿ ಬರುತ್ತಿದ್ದ ಹಿಂದಿ ಹಾಡನ್ನು ಬಾಯಿಪಾಠ ಮಾಡುವ ಜಾಣ್ಮೆಯೂ ಆಕೆಗಿತ್ತು. ಎಳೇಪ್ರಾಯದ ಹೂಪಕಳೆಯಂತಹ ಆ ಮನಸ್ಸಿಗೆ ಮದುವೆಯಾದಾಗ ಹದಿನಾರೂ ತುಂಬಿರಲಿಲ್ಲ. ತುಂಬಿ ತುಳುಕುವ ಕುಟುಂಬಕ್ಕೆ ಸೇರಕ್ಕಿ ಒದ್ದೇ ಬಂದಿದ್ದಳು. ಮದುವೆಯಾಗಿ ನಾಲ್ಕೈದು ವರುಷ ಕಳೆದರೂ ಕಟ್ಟದ ಬಸಿರು, ಮುಸುರೆ ತಿಕ್ಕುವಾಗ ನಿಲ್ಲದ ಬಿಕ್ಕುಸಿರು.

Read More

ನಿಮಗೊಂದು ಕರೆ ಮಾಡಿ

90ರ ದಶಕ ಅದು. ಟೆಲಿಫೋನು ಎಲ್ಲ ಮನೆಗಳಿಗೂ ಬಂದಿರಲಿಲ್ಲ. ಪತ್ರ ಬರೆಯುವುದೇ ಸಂಭ್ರಮ ಅಂದು. ಇಂದು ಬರೆದರೂ ಅಷ್ಟೇ ಪ್ರೀತಿಯಿಂದ ಬರೆಯಬಲ್ಲೆನೇ? ಎಂದು ನನ್ನನ್ನೇ ಪ್ರಶ್ನಿಸಿಕೊಳ್ಳುತ್ತೇನೆ. ಪತ್ರ ಬರೆಯುವುದಕ್ಕೆ ವಿಷಯವಾದರೂ ಎಲ್ಲಿದೆ ಈಗ? ಎಂದು ಕೇಳುತ್ತದೆ ಬುದ್ಧಿ. ಆ ಕ್ಷಣದಲ್ಲಿ ವಾಟ್ಸಾಪ್ ಪಾರಿವಾಳದ ಮೂಲಕ ಹಾರಿಸಿಬಿಡುತ್ತೇವೆಲ್ಲ! ಅಷ್ಟಕ್ಕೂ ಬರೆಯುವುದಕ್ಕೆ ಸಮಯವಾದರೂ ಎಲ್ಲಿದೆ ಇಂದು? ಬರೆಯುವುದಕ್ಕಿರಲಿ, ಬಂದ ಸಂದೇಶಗಳನ್ನು ಓದುವುದಕ್ಕೂ ನಮಗಿಂದು ಸಮಯವಿಲ್ಲ. ಅಂದೂ ಇದ್ದುದು 24 ಗಂಟೆಗಳು. ಇಂದಿರುವುದೂ ಅಷ್ಟೇ. ಗಡಿಯಾರದ ಮುಳ್ಳುಗಳನ್ನು ಮೀರಿಸಿ ನಾವು ಬೆಳೆದಿದ್ದೇವೆ

Read More
ರಾಜಧಾನಿಯ ಅರಮನೆ ಮೈದಾನದಲ್ಲಿ ಹವ್ಯಕತ್ವದ ಅನಾವರಣ!

ಇತಿಹಾಸ: ಸುಮಾರು ಸಾವಿರದ ಏಳುನೂರು ವರ್ಷಗಳಷ್ಟು ಹಿಂದೆ ಕದಂಬವಂಶದ ಶ್ರೇಷ್ಠ ರಾಜ ಮಯೂರವರ್ಮನು ಬನವಾಸಿಯನ್ನು ಆಳುತ್ತಿದ್ದ. ದೇಶವು ಸುಭಿಕ್ಷವಾಗಿ, ಪ್ರಜೆಗಳು ಕ್ಷೇಮವಾಗಿ, ಹಲ-ಫಲಗಳು ಯಥೇಷ್ಟವಾಗಿ ಇರುತ್ತಿದ್ದವು. ಇದಕ್ಕೆ ಕಾರಣವೂ ಇತ್ತು. ಸದಾ ರಾಜ್ಯದ ಒಳಿತಿಗಾಗಿ ಚಿಂತಿಸುತ್ತಿದ್ದ ರಾಜನು ಪ್ರಜಾಕೋಟಿಯ ಯೋಗಕ್ಷೇಮಕ್ಕಾಗಿ ಕಾಲಕಾಲಕ್ಕೆ ಸುಕಾರ್ಯಗಳನ್ನು ಕೈಗೊಳ್ಳುತ್ತಿದ್ದ. ಅದರಲ್ಲೊಂದು, ಪ್ರಜಾಹಿತಕ್ಕಾಗಿ, ಲೋಕಕಲ್ಯಾಣಕ್ಕಾಗಿ ಯಜ್ಞಯಾಗಾದಿಗಳನ್ನು ರಾಜ್ಯವಿಡೀ ನಡೆಸಿದ್ದು. ಪ್ರಜಾಹಿತಕ್ಕಾಗಿ ಯಜ್ಞ ನಡೆಸಲು ಅಷ್ಟೇ ಯೋಗ್ಯ, ನಿಸ್ಸ್ವಾರ್ಥ, ಜ್ಞಾನಿಗಳಾದ ಅಧ್ವರ್ಯುಗಳ ಅಗತ್ಯವನ್ನು ಮನಗಂಡ ಮಯೂರವರ್ಮನು ಉತ್ತರದ ಅಹಿಚ್ಛತ್ರವನ್ನು ಸಂಪರ್ಕಿಸಿದನು. ಅಲ್ಲಿಂದ ನೂರಾರು ಕುಟುಂಬಗಳನ್ನು

Read More
ಭೂತಾಯಿಯ ಸೀಮಂತ

 ಭೂಮಿ ಹುಣ್ಣಿಮೆ ಹಬ್ಬ. ಆಹಾ, ಬಾಲ್ಯದಲ್ಲಿ ಈ ಹಬ್ಬ ಅಂದ್ರೆ ಏನೋ ಸಂಭ್ರಮ. ಆಚರಣೆಯ ಬಗ್ಗೆ ಅರಿವಿಲ್ಲದೆ ಹೋದರೂ ಕಡುಬು ತೋಟದಲ್ಲಿ ತಿನ್ನಬಹುದಲ್ಲ ಅನ್ನೋ ಖುಷಿ.    ಪರಿಸರದಲ್ಲಿ ಆಗೋ ಪ್ರತಿ ಬದಲಾವಣೆಯನ್ನೂ ಗಮನಿಸಿ ನಮ್ಮ ಹಿರಿಯರು ಹಬ್ಬಗಳ ಆಚರಣೆ ತಂದರು. ಈ ಹಬ್ಬ ಬರುವುದು ಭೂಮಿತಾಯಿ ಮೈದುಂಬಿ ಬಸಿರಾದ ಕಾಲದಲ್ಲಿ. ಹೊಲ ಹಸಿರನುಟ್ಟು ಸೀಮಂತಕ್ಕೆ ಸಿಂಗಾರಗೊಂಡ ಕಾಲವದು. ಈ ಹಬ್ಬದ ಆಚರಣೆ ಊರಿಂದ ಊರಿಗೆ ಭಿನ್ನ. ಆದರೇನಂತೆ ಭಾವ ಅದೇ ತಾನೇ. ಭೂಮಿಯನ್ನು ಹೆಣ್ಣಿಗೆ ಹೋಲಿಸಿದ್ದೇವೆ

Read More
ಸಂಸ್ಕಾರ ಸುಮ್ಮನೇ ಬರುವುದಿಲ್ಲ

ಮಠದ ಭಕ್ತರಿಗೆ, ಅನುಯಾಯಿಗಳಿಗೆ ಸಂಸ್ಕಾರವೆನ್ನುವುದರ ವಿಸ್ತೃತ ಅರ್ಥವ್ಯಾಖ್ಯಾನ ಬೇಕಾಗದು. ಏಕೆಂದರೆ ಅದು ಅವರಿಗೆಲ್ಲ ಸಿಕ್ಕಿರುತ್ತದೆ. ಮಠಗಳನ್ನು ಕೇವಲ ಧಾರ್ಮಿಕ ಸ್ಥಳವೆಂದು ನೋಡುವವರಿಗೆ ದೇವಾಲಯ ಮತ್ತು ಮಠ ಪ್ರತ್ಯೇಕವಾಗಿ ಕಾಣದು. ನಮಗೆ ಭಕ್ತಿಯಿದೆ, ಆದರೆ ಮಠಕ್ಕೇ ಏಕೆ ಹೋಗಬೇಕು? ದೇವಸ್ಥಾನಕ್ಕೆ ಹೋಗಿ ಕೈ ಮುಗಿಯುತ್ತೇನೆ ಸಾಕು ಎನ್ನುವವರೂ ನಮ್ಮ ನಡುವೆ ಇದ್ದಾರೆ. ದೇವರೂ ಇಲ್ಲ, ಮಠವೂ ಸುಳ್ಳು ನಾನು ನಾಸ್ತಿಕ ಎನ್ನುವವರೂ ಇದ್ದಾರೆ. ಮನುಷ್ಯನ ಬುದ್ಧಿಗೆ ಇಲ್ಲದ್ದರ ಕುರಿತು ತುಡಿಯ ಹೆಚ್ಚು. ಇತ್ತೀಚೆಗೆ ನಾಸ್ತಿಕನೊಬ್ಬನೊಂದಿಗೆ ಮಾತನಾಡುವಾಗ ತನ್ನ ವೈರಿಗೆ

Read More
ಭಾರತದ ಪ್ರಾಣ ರಕ್ಷಣೆ ~ ನಮ್ಮೆಲ್ಲರ ಹೊಣೆ

ಭಾರತೀಯರು ಬ್ರಿಟೀಷರ ದಾಸ್ಯವನ್ನು ಅನುಭವಿಸುತ್ತಿದ್ದಾಗ ಮೊಟ್ಟ ಮೊದಲು ಬ್ರಿಟೀಷರ ವಿರುದ್ಧ ಸಿಡಿದೇಳುವಂತೆ ಮಾಡಿದ್ದು ಗೋವು. ಅದು ಮೊದಲ ಸ್ವಾತಂತ್ರ್ಯ ಸಂಗ್ರಾಮದ ಕಾಲ,‌ ಹಿಂದೂಗಳನ್ನು ಅವಮಾನಿಸಲು ಕಾಡತೂಸುಗಳಿಗೆ ಗೋವಿನ ಕೊಬ್ಬನ್ನು ಸವರಿ ಕೊಡುತ್ತಿದ್ದ ಬ್ರಿಟೀಷರ ವಿರುದ್ಧ ಮೊದಲಿಗೆ ತಿರುಗಿ ಬಿದಿದ್ದು ಮಂಗಲ್ ಪಾಂಡೆ. ಅದೇ ಬಂದೂಕು ಮೊದಲ ಬಲಿ ಪಡೆದಿದ್ದು ಬ್ರಿಟೀಷರನ್ನೇ. ಹೀಗೆ ಸ್ವಾತಂತ್ರ್ಯದ ಕಿಚ್ಚು ಹೆಚ್ಚಾಗಿ ವ್ಯವಸ್ಥಿತ ಹೋರಾಟ‌ ರೂಪುಗೊಂಡಿತು.   ನಮ್ಮ ದೇಶಕ್ಕೆ ಗೋರಾಷ್ಟ್ರದೇಶ ಎಂದು ಹೇಳುವುದು ಗೋವುಗಳೇ ಭಾರತದ ಸಂಪತ್ತು ಎಂಬ ಕಾರಣದಿಂದಿರಬಹುದು. ಗೋವುಗಳು

Read More
ದಶರೂಪಕ

  ದಶರೂಪ ಅಥವಾ ದಶರೂಪಕವೆಂದು ಕರೆಯಲ್ಪಡುವ ಈ ಗ್ರಂಥವು ನಾಟ್ಯಶಾಸ್ತ್ರದಲ್ಲಿಯೇ ಒಂದು ಮಹತ್ತ್ವಪೂರ್ಣವಾದ, ಭರತಮುನಿ ಕೃತವಾದ ನಾಟ್ಯಶಾಸ್ತ್ರವನ್ನು ಆಧರಿಸಿದ, ಸರ್ವಾಂಗೀಯ ವಿವೇಚನೆಯುಳ್ಳ ಗ್ರಂಥವಾಗಿದೆ. ಇದನ್ನು ರಚಿಸಿದವನು ಧಾರಾನಗರಿಯಲ್ಲಿದ್ದ, ಭೋಜರಾಜನ ಚಿಕ್ಕಪ್ಪನಾಗಿದ್ದ, ಮಾಳವದ ಪರಮಾರ ವಂಶದ, ವಾಕ್ಪತಿ ಮುಂಜರಾಜನ ಆಸ್ಥಾನದಲ್ಲಿದ್ದ ಧನಂಜಯ. ಗ್ರಂಥದ ರಚನಾಕಾಲವು ಕ್ರಿ. ಶ. ಸುಮಾರು 950 ರಿಂದ 1000ರ ವರೆಗೆ.   ಸಂಸ್ಕೃತ ಭಾಷೆಯ ಈ ಗ್ರಂಥವು ಸಂಸ್ಕೃತದಲ್ಲಿ ದೃಶ್ಯಕಾವ್ಯ, ಎಂದರೆ ನಾಟಕದ ಲಕ್ಷಣಗಳನ್ನು ನಿರೂಪಿಸುವುದಾಗಿದ್ದು, ಶಾಸ್ತ್ರಕಾರರರು ಸಂಸ್ಕೃತದಲ್ಲಿ ಮುಖ್ಯವಾಗಿ ಹತ್ತು ರೂಪಕಗಳು, ಹದಿನೆಂಟು

Read More
ಅವರವರ ಭಾವಕ್ಕೆ

ನೋಡುವುದಕ್ಕೂ ಕಾಣುವುದಕ್ಕೂ ಅಂತರವಿದೆ. ನೋಡುವುದೆಲ್ಲವನ್ನೂ ನಮಗೆ ಕಾಣುವುದಕ್ಕೆ ಸಾಧ್ಯವಾಗದು. ಹಾಗೆಯೇ ‘ನಾನು ಕಂಡಿದ್ದೇನೆ’ ಎಂದು ಹೇಳುವುದನ್ನೆಲ್ಲ ನಾವು ನೋಡಿದ್ದೇವೆ ಎಂದೂ ಹೇಳಲಾಗದು. ‘ನೋಡು’ವುದು ಕೇವಲ ಒಂದು ಕ್ರಿಯೆ ಮಾತ್ರವಾದರೆ ‘ಕಾಣು’ವುದು ಒಂದು ಭಾವ ಪ್ರಕ್ರಿಯೆ. ಕಣ್ಣುಮುಚ್ಚಿ ನಮಗೆ ಏನನ್ನೂ ನೋಡಲಾಗದು, ಆದರೆ ಬಹಳಷ್ಟನ್ನು ‘ಕಾಣ’ ಬಹುದು.   ಕಣ್ಣು ಬರೀ ಒಂದು ಕ್ಯಾಮರ ಮಾತ್ರ. ಅದು ತನ್ನ ದೃಷ್ಟಿಯ ವ್ಯಾಪ್ತಿಯಲ್ಲಿ ಬರುವ ದೃಶ್ಯದ ಮೇಲೆ ಬಿದ್ದ ಬೆಳಕು ಪ್ರತಿಫಲಿಸಿ, ಅಕ್ಷಿಪಟಲದ ಮೇಲೆ ಬಿದ್ದಾಗ ಅದನ್ನು ನರಗಳ ಮೂಲಕ

Read More
ಮುಸ್ಸಂಜೆ

ಅದೊಂದು ಕಡಲ ಕಿನಾರೆ. ಎಡೆಬಿಡದೆ ಬೀಸಿ ಬರುವ ತಂಗಾಳಿ, ಆ ಗಾಳಿಯೊಡನೆ ತೇಲಿ ಸಾಗಿ ಬಾನಂಚಿನಲ್ಲಿ ಮರೆಯಾಗುವ ಪಕ್ಷಿಗಳು, ಮೊರೆಯಿಟ್ಟು ದಡಕ್ಕಪ್ಪಳಿಸುವ ಬೆಳ್ನೊರೆಯ ತೆರೆಗಳು. ಇವೆಲ್ಲದರ ನಡುವೆ ಪಡುವಣ ದಿಕ್ಕಿನಲ್ಲಿ ಕೆಂಪಡರಿ ಕಣ್ಮರೆಯಾಗುವ ಸಂಧ್ಯಾ ಸೂರ್ಯನಂತೆ, ನಿತ್ಯವೂ ಅವರೀರ್ವರೂ ಅಲ್ಲಿ ಬಂದೇ ಬರುವರು. ಭೋರಿಡುವ ತೆರೆಗಳಪ್ಪಳಿಸುವ ಕಾರ್ಗಲ್ಲ ಕಿನಾರೆಯಲ್ಲೊಂದು ಪುಟ್ಟ ದೇಗುಲ. ದೇಗುಲದಿಂದ ಅನತಿ ದೂರದಲ್ಲೊಂದು ಸಕಲ ಸೌಲಭ್ಯಗಳಿರುವ ಹೈಟೆಕ್ ವೃದ್ಧಾಶ್ರಮ. ದೇಗುಲದಲ್ಲಿ ಅಪರಾಹ್ನದ ಮೊದಲ ಗಂಟೆ ಬಾರಿಸುವ ಹೊತ್ತು ಅವರೀರ್ವರೂ ಆ ವೃದ್ಧಾಶ್ರಮದಿಂದ ಹೊರಕ್ಕೆ ಅಡಿಯಿಡುವರು.

Read More
ಒರಟು ಬೊಗಸೆಯ ತುಂಬಾ ಆರೆಂಜ್ ಪೆಪ್ಪರ್ಮೆಂಟು

ಸ್ವಂತಕ್ಕಾಗಿ ಏನನ್ನೂ ಬಯಸದೇ ನಿರಂತರ ದುಡಿಯುವ ನಿಸ್ವಾರ್ಥಿಯವನು. ತುಂಬಾ ಓದಬೇಕು, ತುಂಬಾ ಬರೆಯಬೇಕು ಎಂಬ ಆಸೆ ಎದೆಯೊಳಗಿದ್ದರೂ, ಹುದುಗಿಸಿಕೊಂಡು ಸಂಸಾರರಥದ ಹಗ್ಗ ಹಿಡಿದವನು. ತನಗೆಷ್ಟೇ ನೋವಿದ್ದರೂ, ರಾತ್ರಿಯಾದಾಗ ಮಕ್ಕಳ ಪಾದಕ್ಕೆ ಎಣ್ಣೆ ಸವರಿ ನಕ್ಕವನು. ಮಕ್ಕಳ ಶಾಲೆಯಲ್ಲಿ ಕಾರ್ಯಕ್ರಮವಿದ್ದಾಗ, ಕೆಲಸಗಳನ್ನೆಲ್ಲ ಬದಿಗೊತ್ತಿ, ಶ್ರದ್ಧೆಯಿಂದ ಕವನ ಇಲ್ಲವೇ ಭಾಷಣಗಳನ್ನು ಬರೆದುಕೊಟ್ಟವನು. ದೂರದ ಊರಿಗೆ ಓದಲೆಂದು ಹೋಗಿದ್ದಾಗ ಉದ್ದುದ್ದ ಹಾಳೆಗಳಲ್ಲಿ ಪತ್ರ ಬರೆದವನು.ಹಾಸ್ಟೆಲ್ನಿಂದ ರಜೆಗೆಂದು ಮನೆಗೆ ಬಂದಾಗ, ಮಗಳಿಗಿಷ್ಟ ಎಂದು ಡೈರಿಗೆ ಕೊಡದೇ ಹಾಲನ್ನು ತೆಗೆದಿರಿಸುತ್ತಿದ್ದವನು.   ಮಗಳ ಮದುವೆ

Read More
ನಮ್ಮ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳವರು

ಪ್ರಾಯೋಧುನಾ ಶಿಷ್ಯವರ್ಗಃ ಸಂಪದ್ವಿದ್ಯಾದಿಭೂಷಿತಃ | ಭಕ್ತಿಶ್ರದ್ಧಾದ್ಯುಪೇತೋಪಿ ಗುರುಪೀಠೇ ಸಮೃಧ್ಯತಾಮ್ ||   ಈಗಿನ ಶಿಷ್ಯವರ್ಗದವರು ವಿದ್ಯೆ, ಧನಸಂಪತ್ತು, ಉದ್ಯೋಗ, ಅಧಿಕಾರ, ಕೃಷಿ ಇತ್ಯಾದಿ ವಿಚಾರವಾಗಿ ಜೀವನರಂಗದಲ್ಲಿ  ನೆಲೆಯನ್ನೂರಿ ಬೆಳಗುತ್ತಿರುವುದನ್ನು ಹಾಗೂ ಗುರುಪೀಠದ ಬಗ್ಗೆ ಅಪಾರ ಭಕ್ತಿಶ್ರದ್ಧಾಸಂಪನ್ನರಾಗಿ ಬಾಳುತ್ತಿರುವುದನ್ನು ನಮ್ಮ ಪರಮಪೂಜ್ಯ ಶ್ರೀಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರು ಆತ್ಮವಿದ್ಯಾಆಖ್ಯಾಯಿಕಾ ಎಂಬ ತಮ್ಮ ಅತಿ ಪ್ರೀತಿಯ ಆತ್ಮಚರಿತೆಯಲ್ಲಿ ಗುರುತಿಸಿ, ಇವರೆಲ್ಲರೂ ಇನ್ನೂ ವಿಶೇಷವಾಗಿ  ಅಭಿವೃದ್ಧಿ ಹೊಂದಿ ಬಾಳಿ ಬೆಳಗಲಿ ಎಂದು ನಮ್ಮೆಲ್ಲರನ್ನು ಹರಸಿದ್ದಾರೆ. ಅವರ ಆ ದಿವ್ಯ ಹರಕೆಯನ್ನು ನೆನಪಿಸಿಕೊಂಡು ಗುರುಕಾರುಣ್ಯದ ಆ

Read More