|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಶ್ರೀಕರಾರ್ಚಿತ ದೇವರಿಗೆ 81 ಕೆ.ಜಿ ಸಾವಯವ ಅಕ್ಕಿ ಸಮರ್ಪಣೆ

ಬೆಂಗಳೂರು: ಶ್ರೀಕರಾರ್ಚಿತ ದೇವರಿಗೆ ಭಕ್ತವೃಂದ ತಮ್ಮ ಅನುಕೂಲಕ್ಕೆ ತಕ್ಕಂತೆ ಇಲ್ಲವೇ ನಂಬಿಕೊಂಡಂತೆ ಅನೇಕ ಸೇವೆಗಳನ್ನು ಮಾಡುತ್ತಾರೆ. ಅದೇ ರೀತಿ 81 ಕೆ.ಜಿ.ಯಷ್ಟು ಸಾವಯವ ಅಕ್ಕಿ, ಸೇವೆಯ ರೂಪದಲ್ಲಿ ಸಮರ್ಪಣೆಯಾಗಿದೆ.

ಹೊಲ್ಲನಗದ್ದೆ ಶ್ರೀ ಸುದರ್ಶನ ರಾಮ ಹೆಗಡೆಯವರು ಶ್ರೀರಾಮ ದೇವರಿಗೆ ಸೇವೆಯ ರೂಪದಲ್ಲಿ 81 ಕೆ.ಜಿ.ಯಷ್ಟು ಸಾವಯವ ಅಕ್ಕಿ ನೀಡಿ ಶ್ರೀರಾಮ ದೇವರ ಪ್ರೀತಿಗೆ ಪಾತ್ರರಾಗಿದ್ದಾರೆ.