|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಸೇವಾ ಅರ್ಘ್ಯದೊಂದಿಗೆ ಹುಟ್ಟು ಹಬ್ಬದ ಆಚರಣೆ

 

ಪೆರಡಾಲ ವಲಯ ಮೀಸೆ ಬಯಲು ಘಟಕದ ಮಿಂಚಿನಡ್ಕ ರವೀಂದ್ರನಾಥ ಹಾಗೂ ವಿದ್ಯಾ ದಂಪತಿಯರು ಮಗ ಅನಘ ಶರ್ಮಾನ ಹುಟ್ಟು ಹಬ್ಬವನ್ನು  ಗೋವಿಗಾಗಿ ಮೇವು-ಮೇವಿಗಾಗಿ ನಾವು ಸೇವಾ ಅರ್ಘ್ಯದ ನೇತೃತ್ವ ವಹಿಸುವುದರ  ಮೂಲಕ ಆಚರಿಸಿದರು.

ಹುಟ್ಟುಹಬ್ಬದಂದು ಸಾಮಾನ್ಯವಾಗಿ ಮಕ್ಕಳು  ಹೊಸ ಉಡುಗೆ ತೊಟ್ಟು ಸಂಭ್ರಮಿದರೆ ಈ ಹುಡುಗನ ವೇಷವೇ ಬೇರೆ. ಹುಲ್ಲು ಕತ್ತರಿಸುವ ಯಂತ್ರವನ್ನು ಹೆಗಲಿಗೇರಿಸಿ ಸ್ವಯಂ ತಯಾರಿಸಿದ ರಕ್ಷಣಾ ಪೋಷಾಕು!!! ಅನಘ ಶರ್ಮಾನ ಉತ್ಸಾಹವನ್ನು ಬಂದು ಗೋಕಿಂಕರರೆಲ್ಲರೂ ಕೊಂಡಾಡಿದರು.

ನವೆಂಬರ್ 12 ಹಾಗೂ 13ರಂದು ನಡೆದ ಸೇವಾ ಅರ್ಘ್ಯ ದಲ್ಲಿ ಗೋಕಿಂಕರರಾದ ರವೀಂದ್ರನಾಥ, ವಿದ್ಯಾ, ಅನಘ ಶರ್ಮಾ ಮಿಂಚಿನಡ್ಕ,
ಡಾಕ್ಟರ್ ವೈ ವಿ ಕೃಷ್ಣಮೂರ್ತಿ ಬದಿಯಡ್ಕ, ಈಶ್ವರ ಭಟ್ ಬದಿಯಡ್ಕ,  ಶ್ರೀಕೃಷ್ಣ ಮಡಿಪ್ಪು,  ಪುರುಷೋತ್ತಮ ಭಟ್ ಮಿಂಚಿನಡ್ಕ  , ಶ್ಯಾಮ ಶರ್ಮ ಮಿಂಚನಡ್ಕ, ಅಣ್ಣಬೈಲು ವಿಷ್ಣುಶರ್ಮ  , ಮಹೇಶ್ ಭಟ್ ಕುಳಮರ್ವ, ಉದಯಶಂಕರ ಕುಂಟಿಕಾನ,  ಪ್ರಸಾದ್ ಸರಳಿ, ಧನ್ಯಾ ಸರಳಿ,  ಸರೋಜಾ ಕಾನತ್ತಿಲ, ಚಿನ್ಮಯ ಕೃಷ್ಣ ಭಟ್ಟ ಕಾನತ್ತಿಲ, ತೇಜಸ್ವಿ, ಅಭಿನವ, ಅದ್ವೈತ ಬದಿಯಡ್ಕ, ವಿಶೇಷ್ ಬದಿಯಡ್ಕ ಭಾಗವಹಿಸಿದರು.