|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

” ಸ್ವಯಂವರ ” ಕಾದಂಬರಿ ಲೋಕಾರ್ಪಣೆ

 

ಗೋಕರ್ಣ : ಗೋಕರ್ಣದ ಅಶೋಕೆಯಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಕರಕಮಲಗಳಿಂದ ಕಾಸರಗೋಡಿನ ಶ್ರೀಮುಖ ಮಾತೃತ್ವಮ್ ಲೇಖಕಿ‌ ಪ್ರಸನ್ನಾ ವಿ ಚೆಕ್ಕೆಮನೆ ಅವರ ಹವ್ಯಕ ಕಾದಂಬರಿ ” ಸ್ವಯಂವರ ” ಅಕ್ಟೋಬರ್ 1 ರಂದು ಲೋಕಾರ್ಪಣೆಗೊಂಡಿತು.

 

ನವರಾತ್ರಿಯ ಆರನೇ ದಿನ ಬಿಡುಗಡೆಯಾದ ಈ ಕೃತಿಯು ಲೇಖಕಿಯ ಆರನೆಯ ಕೃತಿಯಾಗಿದೆ. ಚಿಕ್ಕಮಗಳೂರಿನ ಅಪರಂಜಿ ಪ್ರಕಾಶನದ ಮೂಲಕ ಪ್ರಕಟವಾದ ಈ ಕಾದಂಬರಿಗೆ ಒಪ್ಪಣ್ಣ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಮಹೇಶ್ ಎಳ್ಯಡ್ಕ ಮುನ್ನುಡಿ ಬರೆದಿದ್ದಾರೆ.