|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಮುಜುಂಗಾವು ವಿದ್ಯಾಪೀಠದ ಮಕ್ಕಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಆಡಳಿತಾಧಿಕಾರಿ ಶ್ಯಾಂಭಟ್

ಮುಜುಂಗಾವು: ಮುಜುಂಗಾವು ವಿದ್ಯಾಪೀಠದ ಆಡಳಿತಾಧಿಕಾರಿಗಳಾದ ಶ್ರೀಯುತ ಶ್ಯಾಂ ಭಟ್ ದರ್ಭೆಮಾರ್ಗರವರು
ದಿನಾಂಕ 19-2-2019 ನೇ ಮಂಗಳವಾರ ತಮ್ಮಹುಟ್ಟಿದ ಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ಮುಜುಂಗಾವು ವಿದ್ಯಾಪೀಠದ ಮಕ್ಕಳಿಗೆ, ಶಿಕ್ಷಕರಿಗೆ, ಹಾಗೂ ಇತರ ಸಿಬ್ಬಂದಿಗಳಿಗೆ ಶ್ರೀಯುತರು ಪಾಯಸ,ಭಕ್ಷ್ಯ ಸಹಿತ ಸಿಹಿಯೂಟ ನೀಡಿದರು.

 

ಇದೇ ದಿನದಂದು ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನವೂ ಆಗಿದೆ. ಭಾರತದ ಇತಿಹಾಸದ ಆ ಮೇರು ಚಕ್ರವರ್ತಿಯನ್ನು ಮಕ್ಕಳಿಗೆ ನೆನಪಿಸಿ ಕೊಟ್ಟ ಶ್ರೀಯುತರು ಮಕ್ಕಳು ಹಾಗೂ ಶಿಕ್ಷಕರಿಗೂ ಪೆನ್ನುಗಳನ್ನು ವಿತರಿಸಿದರು.