|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ದ್ವೀಪದಲ್ಲೊಂದು ದಿವ್ಯತೆ; ಪ್ರಕೃತಿಯ ಅನುಪಮ ರಮ್ಯತೆ; ಶ್ರೀಕ್ಷೇತ್ರ ಹೈಗುಂದ; ಅಪರೂಪ; ಅತಿವಿಶಿಷ್ಟ

ಶಾಂತಗಂಭೀರವಾಗಿ ಹರಿಯುವ ಸುಂದರ ಶರಾವತಿಯ ಮಡಿಲಲ್ಲಿದೆ ಹೈಗುಂದ. ತಾಯಿ ಶ್ರೀದುರ್ಗಾಂಬಿಕೆಯ ಸಾನ್ನಿಧ್ಯದ ಮಹಿಮೆ ಇದರದ್ದು. ಹವ್ಯಕ ಬ್ರಾಹ್ಮಣರ ಮೂಲನೆಲೆ ಈ ಪ್ರಾಚೀನ ಯಾಗಭೂಮಿ. ವರ್ಷಋತುವಿನ ವರ್ಷಾಧಾರೆಯ ತಂಪಿನಲ್ಲೂ, ಗ್ರೀಷ್ಮದ ಸುಡುಬಿಸಿಲಿನ ತಾಪದಲ್ಲೂ ಹಚ್ಚಹಸುರಾಗಿ ತೋರುವದು ಈ ದ್ವೀಪ.   ಸುಮಾರು ೧೫೦೦ ವರ್ಷಗಳ ಹಿಂದೆ ಕದಂಬರ ದೊರೆ ಬನವಾಸಿಯ ರಾಜ ಮಯೂರವರ್ಮ ಯಾಗಕ್ಕಾಗಿ ಆರಿಸಿದ ಸ್ಥಳ ಹೈಗುಂದ. ಯಾಗರಕ್ಷಣೆಗಾಗಿ ನದಿಯನ್ನು ಎರಡು ಭಾಗವಾಗಿಸಿ ಯಾಗಭೂಮಿಯ ಸುತ್ತಲೂ ನೀರು ಹರಿಯುವಂತೆ ಮಾಡಿದ. ಸರಸ್ವತೀ ನದಿಯ ತೀರದಲ್ಲಿರುವ ಅಹಿಚ್ಛತ್ರವೆಂಬ ನಗರದಿಂದ

Read More

ಅಮೃತಧಾರಾ ಗೋಶಾಲೆಯಲ್ಲಿ ಶನಿದೋಷ ನಿವಾರಣೆಗೆ ನಡೆಯಿತು‌ ವಿಶೇಷಪೂಜೆ: ನವೆಂಬರ್ 15 ರವರೆಗೂ ನಡೆಯಲಿದೆ ಪೂಜಾ ಕಾರ್ಯ

ಪೆರ್ಲ: ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವರ್ಧನ ಧರ್ಮಮಂದಿರದಲ್ಲಿ ಶನಿವಾರ ಶನಿದೋಷ ನಿವಾರಣೆಗಾಗಿ ಶ್ರೀ ಆಂಜನೇಯ ಕಲ್ಪೋಕ್ತ ಪೂಜೆ ಹಾಗೂ ಆಂಜನೇಯ ಹೋಮ ನಡೆಯಿತು.   ನೂರಾರು ಭಕ್ತಾದಿಗಳು ಈ ಸಂದರ್ಭದಲ್ಲಿ ಭಕ್ತಭಾವದೊಂದಿಗೆ ಶನಿದೋಷ ನಿವಾರಣೆಗಾಗಿ ಪೂಜೆ ನಡೆಸಿದರು. ಬೆಳಗ್ಗೆ ಮಹಾಗಣಪತಿ ಹೋಮ, ಕಾಮಧೇನು ಹವನ, ಗೋಪೂಜೆಗಳು ನಡೆದವು. ಮಧ್ಯಾಹ್ನ ಪೂರ್ಣಾಹುತಿಯ ಅನಂತರ ವೈದಿಕ ಪ್ರಧಾನ ವೇದಮೂರ್ತಿ ಶ್ರೀ ಕೇಶವ ಪ್ರಸಾದ ಕೂಟೇಲು ಪ್ರಾರ್ಥನೆ‌ ಸಲ್ಲಿಸಿದರು.   ಈ ಸೇವೆಯನ್ನು ಕಾರ್ತಿಕ ಮಾಸದ ಶನಿವಾರದ ದಿನ ಶನಿದೋಷ ನಿವಾರಣೆಗಾಗಿ

Read More

ರಾಮಾಶ್ರಮದಲ್ಲಿ ಕಾರ್ತೀಕ ದೀಪೋತ್ಸವ ಆರಂಭ: ಸರ್ವರಿಗೂ ಹಾರ್ದಿಕ ಸ್ವಾಗತ

ಬೆಂಗಳೂರು: ಬೆಳಕಿನ‌ ಹಬ್ಬ ದೀಪಾವಳಿ ಮುಗಿಯುತ್ತಿದ್ದಂತೆ ಕಾರ್ತೀಕ ದೀಪೋತ್ಸವದ ಸಂಭ್ರಮ ಆರಂಭವಾಗುತ್ತದೆ. ಅಂತೆಯೇ ಬೆಂಗಳೂರಿನಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖಾಮಠದಲ್ಲಿಯೂ ಕಾರ್ತೀಕ ದೀಪೋತ್ಸವ ನವೆಂಬರ್ 8ರಿಂದ ಆರಂಭವಾಗಿದೆ.   ಈಗಾಗಲೇ ಪ್ರತಿದಿನ‌‌ ಸಂಜೆ ಸಪರಿವಾರ ಸಹಿತ ಶ್ರೀರಾಮದೇವರ ಸನ್ನಿಧಿಯಲ್ಲಿ, ಶ್ರೀಸಂಸ್ಥಾನದವರ ದಿವ್ಯ ಉಪಸ್ಥಿತಿಯ ದೀಪೋತ್ಸವ ನಡೆಯುತ್ತಿದ್ದು ಬೆಳಗುವ ದೀಪಗಳ‌ ನಡುವೆ ರಾಮದೇವರು ಹಾಗೂ ಶ್ರೀಸಂಸ್ಥಾನದವರನ್ನು ನೋಡುವುದೇ ಒಂದು ದಿವ್ಯ ಅನುಭವವಾಗಿದೆ.   ಕಾರ್ತಿಕ ದೀಪೋತ್ಸವ ಸೇವೆಯು ಕಾರ್ತಿಕ ಶುದ್ಧ ಪಾಡ್ಯದಿಂದ ಮಾರ್ಗಶಿರ ಶುದ್ಧ ಷಷ್ಠಿಯವರೆಗೆ ಅಂದರೆ ನವೆಂಬರ್ 8

Read More
ಮುಂಬೈನಲ್ಲೂ ನಡೆಯಿತು ಸಂಭ್ರಮದ ಗೋಪೂಜೆ: ನಿಜಾರ್ಥದಲ್ಲಿ ಬೆಳಕಿನ ಹಬ್ಬ ಆಚರಿಸಿದ ಗೋಪ್ರೇಮಿಗಳು

ಮುಂಬೈ: ದೀಪಾವಳಿಗೂ ಗೋಪೂಜೆಗೂ ಅವಿನಾಭಾವ ಸಂಬಂಧವಿದೆ. ಅದರಲ್ಲೂ ಕೃಷಿ ಅವಲಂಬಿತ ಎಲ್ಲ ಭಾಗಗಳಲ್ಲೂ ದೀಪಾವಳಿಯಲ್ಲಿ ಗೋಪೂಜೆ ನಡೆಸುವುದು ವಾಡಿಕೆ. ಆದರೆ ಗೋಪೂಜೆ ಕೇವಲ ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲ ಮಹಾನಗರಗಳಲ್ಲೂ ಇದೆ. ಶ್ರೀರಾಮಚಂದ್ರಾಪುರಮಠ ಹಾಗೂ ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ಮುಂಬಯಿಯ ಕೋಲಾಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಗೋಶಾಲೆಯಲ್ಲಿ, ಯಾವ ಗ್ರಾಮೀಣ ಪ್ರದೇಶಕ್ಕೂ ಕಡಿಮೆ ಇಲ್ಲದಂತೆ ಗೋಪೂಜೆಯೊಂದಿಗೆ ಸಂಭ್ರಮದಿಂದ ದೀಪಾವಳಿ ಆಚರಿಸಲಾಯಿತು.   ನವೆಂಬರ್ 8ರಂದು ನಡೆದ ಗೋಪೂಜೆಯಲ್ಲಿ ಮುಂಬಯಿ ವಲಯ ಅಧ್ಯಕ್ಷ ಶ್ರೀ ಕೃಷ್ಣ ಭಟ್ಟ ಗುಡ್ಡೆಬಾಳ ಪಾಲ್ಗೊಂಡು ಪೂಜೆ‌ ಸಲ್ಲಿಸಿದರು. ಈ

Read More
ಜೇಡ್ಲ ಗೋಶಾಲೆಯಲ್ಲಿ ದೀಪಾವಳಿ : ಗೋಪೂಜೆ- ಕುಂಕುಮಾರ್ಚನೆ

ಸುಳ್ಯ : ಸುಳ್ಯ ಹವ್ಯಕ ವಲಯದ ವತಿಯಿಂದ ಸಂಪಾಜೆಯ ಜೇಡ್ಲದಲ್ಲಿರುವ ಶ್ರೀಮಠದ ಗೋಶಾಲೆಯಲ್ಲಿ ನವೆಂಬರ್ 09ರಂದು ಶೃದ್ಧಾಭಕ್ತಿಯಿಂದ ಗೋಪೂಜೆ‌ ನೆರವೇರಿಸಲಾಯಿತು.   ಗೋಪೂಜೆ ಸಂದರ್ಭದಲ್ಲಿಯೇ ಮಾತೆಯರು ಕುಂಕುಮಾರ್ಚನೆ ಗೈಯ್ದರು. ಅಲ್ಲದೇ ಸುಳ್ಯ ವಲಯ ವೈದಿಕ-ಸಂಸ್ಕಾರ ವಿಭಾಗದ ವತಿಯಿಂದ 114ನೇ ವೇದವಾಹಿನಿ ಪಾರಾಯಣವನ್ನೂ ಕೈಗೊಳ್ಳಲಾಯಿತು. ವೈದಿಕರಾದ ಎತ್ತುಕಲ್ಲು ಶ್ರೀ ನಾರಾಯಣ ಭಟ್, ಅರಂಬೂರು ಶ್ರೀ ಕೃಷ್ಣ ಭಟ್, ಶ್ರೀ ವಿಶ್ವಕೀರ್ತಿ ಜೋಯಿಸರು, ಶ್ರೀ ವೆಂಕಟೇಶ ಶಾಸ್ತ್ರೀ ಪಾರಾಯಣ ಹಾಗೂ‌ ಇತರ ಧಾರ್ಮಿಕ‌ ವಿಧಿವಿಧಾನ ನಡೆಸಿಕೊಟ್ಟರು.   ವಲಯದ ಅಧ್ಯಕ್ಷರಾದ

Read More
ಮಾಲೂರು‌ ಗೋಶಾಲೆಯಲ್ಲಿ ಗೋಪೂಜೆ – ದೀಪೋತ್ಸವ – ಪುಣ್ಯಕಾರ್ಯದಲ್ಲಿ‌ ಪಾಲ್ಗೊಂಡ‌ ಗೋಪ್ರೇಮಿಗಳು

ಮಾಲೂರು: ಮಾಲೂರು ತಾಲೂಕು ಗಂಗಾಪುರದ ಶ್ರೀರಾಘವೇಂದ್ರ ಗೋಆಶ್ರಮದಲ್ಲಿ ದೀಪಾವಳಿ ಅಂಗವಾಗಿ ನವೆಂಬರ್ 8 ರ ಸಂಜೆ ಗೋಪೂಜೆ‌ ನಡೆಯಿತು.   ವೇ. ಮೂ. ಗೋಪಾಲಕೃಷ್ಣ ಭಟ್ ರವರ ಮಾರ್ಗದರ್ಶನದಲ್ಲಿ ಗೋ‌ ಆಶ್ರಮ ನಿರ್ವಹಣಾ ಸಮಿತಿ ಕೋಶಾಧ್ಯಕ್ಷರು ಸೇರಿದ ಸಮಸ್ತರ ಪರವಾಗಿ ಗೋಪೂಜೆ ನಡೆಸಿದರು.   ಅನಂತರ‌ ದೀಪಾವಳಿ ಬೆಳಕನ್ನು ಗೋಶಾಲೆಯಲ್ಲೂ ಮೂಡಿಸುವ ಉದ್ದೇಶದಿಂದ ಗೋಶಾಲೆ‌ ಉದ್ದಕ್ಕೂ‌ ಹಣತೆಯನ್ನು ಹಚ್ಚಿ ದೀಪೋತ್ಸವ ನೆರವೇರಿಸಲಾಯಿತು.   ಇದೇ ಸಂದರ್ಭದಲ್ಲಿ ಸ್ಥಳದಲ್ಲಿರುವ ಶ್ರೀ ಸಿದ್ಧ ಆಂಜನೇಯಸ್ವಾಮಿ ದೇವರಿಗೂ ವಿಶೇಷ ಅಭಿಷೇಕ ಪೂಜೆ

Read More
ಇಂದಿನಿಂದ ಪೆರ್ಲದಲ್ಲಿ ಗೋಮಾತಾಸಪರ್ಯಾ ಹಾಗೂ ಗೋಪಾಷ್ಟಮಿ ಮಹೋತ್ಸವ

ಪೆರ್ಲ: ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವರ್ಧನ ಧರ್ಮಮಂದಿರದಲ್ಲಿ ಇಂದಿನಿಂದ ನವೆಂಬರ 15ರ ತನಕ ಗೋಮಾತಾಸಪರ್ಯಾ ಹಾಗೂ ಗೋಪಾಷ್ಟಮಿ ಮಹೋತ್ಸವ ನಡೆಯಲಿದೆ.   ನವೆಂಬರ್ ೭ ಬುಧವಾರ ಸಂಜೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ದೇವತಾ ಪ್ರಾರ್ಥನೆ, ಸಪ್ತಶುದ್ಧಿ, ಪುಣ್ಯಾಹ, ಮಂಟಪ ಸಂಸ್ಕಾರ, ವಾಸ್ತು ಪೂಜೆ, ರಾಕ್ಷೋಘ್ನ ಹವನ, ನ.8ರಂದು ಬೆಳಗ್ಗೆ 7ರಿಂದ ಗಣಪತಿ ಹವನ, ಕಾಮಧೇನು ಹವನ, ಸಂಜೆ 4.30ರಿಂದ ಭಜನರಾಮಾಯಣ, ವಿಷ್ಣುಸಹಸ್ರನಾಮ ಪಾರಾಯಣ, ಗೋಪೂಜೆ, ತುಳಸೀಪೂಜೆ, ಗೋಪಾಲಕೃಷ್ಣ ಪೂಜೆ, ರಾತ್ರಿ 7ರಿಂದ ದೀಪೋತ್ಸವ, ಮಂಗಳಾರತಿ, ಪ್ರಸಾದ

Read More
ದೀಪಾವಳಿಯಂದು ಮಹಾನಂದಿ ಗೋಲೋಕಕ್ಕೆ ಬನ್ನಿ- ಗೋಪೂಜೆ ಸಲ್ಲಿಸಿ, ಗೋಗ್ರಾಸ ನೀಡಿ ಪುಣ್ಯಪ್ರಾಪ್ತಿ ಮಾಡಿಕೊಳ್ಳಿ

ಹೊಸನಗರ: ಗೋವುಗಳು ಅನಾದಿಕಾಲದಿಂದಲೂ ಮನುಷ್ಯನ ಜೀವನದ ಅವಿಭಾಜ್ಯ ಅಂಗ. ಗೋವುಗಳು ಎಷ್ಟರಮಟ್ಟಿಗೆ ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿತ್ತು ಎಂದರೆ ಹಿಂದಿನ ಕಾಲದಲ್ಲಿ ಯಾರ ಬಳಿ ಹೆಚ್ಚು ಗೋವುಗಳಿದೆ ಎಂಬ ಆಧಾರದ ಮೇಲೆ ಆತನ ಸಿರಿತನವನ್ನು ನಿರ್ಧರಿಸಲಾಗುತ್ತಿತ್ತು. ಅನ್ಯವಸ್ತುಗಳ ವಿನಿಮಯವೂ ಗೋವುಗಳ‌ ಮೂಲಕವೇ ಆಗುತ್ತಿತ್ತು. ಉಡುಗೊರೆಯಾಗಿಯೂ ಗೋವುಗಳನ್ನೇ ಕೊಡಲಾಗುತ್ತಿತ್ತು.   ಮನುಷ್ಯನ ಜೀವನ ಸಂಪೂರ್ಣ ಗೋ ಆಧಾರಿತ ಎಂದರೆ ತಪ್ಪಾಗಲಾರದು. ಏಕೆಂದರೆ ತಾಯಿ ಎದೆಹಾಲು ಕೊಡುವುದನ್ನು ನಿಲ್ಲಿಸಿದ ಮೇಲೆ ಅದಕ್ಕೆ ಪ್ರತಿಯಾಗಿ ತನ್ನ ಅಮೃತಸದೃಶ ಕ್ಷೀರವನ್ನು ಮನುಕುಲಕ್ಕೆ ಪೂರೈಸಿ ಮನುಷ್ಯನನ್ನು

Read More
ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ ಸಂಪ್ರತಿಷ್ಠಾನದಿಂದ ಶ್ರೀಮದ್ವಾಲ್ಮೀಕಿರಾಮಾಯಣ ಪಾರಾಯಣ : ಶ್ರೀಸಂಸ್ಥಾನದಿಂದ ಅನುಗ್ರಹ ಪಡೆದ ವೈದಿಕರು

ಬೆಂಗಳೂರು: ಬ್ರಹ್ಮರ್ಷಿ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ ಸಂಪ್ರತಿಷ್ಠಾನವು ಇದೇ ಬರುವ 12-11-2018, ಸೋಮವಾರದಿಂದ 20-11-2018, ಮಂಗಳವಾರದವರೆಗೆ ಶ್ರೀಮದ್ವಾಲ್ಮೀಕಿರಾಮಾಯಣ ಪಾರಾಯಣ ಹಮ್ಮಿಕೊಂಡಿದೆ.   ರಾಮಾಶ್ರಮದಲ್ಲಿ ಶ್ರೀಸಂಸ್ಥಾನದವರನ್ನು ಭೇಟಿ ಮಾಡಿದ ಸಂಪ್ರತಿಷ್ಠಾನದ‌‌‌ ಸದಸ್ಯರು, ಹಮ್ಮಿಕೊಂಡಿರುವ ಪಾರಾಯಣದ ವಿಚಾರ ಅರುಹಿ‌ ಮಂತ್ರಾಕ್ಷತೆ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಡಾ.ಪಾದೆಕಲ್ಲು ವಿಷ್ಣು ಭಟ್ ಹಾಗೂ ಮಿತ್ತೂರು ಪುರೋಹಿತ ಶ್ರೀ ತಿರುಮಲೇಶ್ವರ್ ಭಟ್ ಸಂಪಾದಿಸಿದ ‘ಮಿತ್ತೂರು ಪುರೋಹಿತ ಶಂಕರನಾರಾಯಣ ಭಟ್ಟ ಹಾಗೂ ಮೈಕೆ ಶಂಕರನಾರಾಯಣ ಭಟ್ಟ ಜನ್ಮಶತಮಾನ ಸ್ಮರಣಸಂಪುಟ’ ಗ್ರಂಥವನ್ನು ಶ್ರೀಸಂಸ್ಥಾನದವರಿಗೆ ಅರ್ಪಿಸಿ ಆಶೀರ್ವಾದ

Read More
ನಾಳೆ ರಾಮಾಶ್ರಮದಲ್ಲಿ ಸೋಮಪ್ರದೋಷ ಹಾಗೂ ಮಾಸ ಶಿವರಾತ್ರಿ ಅಂಗವಾಗಿ ರುದ್ರಾಭಿಷೇಕ ಹಾಗೂ ರುದ್ರಹವನ

ಬೆಂಗಳೂರು: ಶ್ರೀರಾಮಚಂದ್ರಾಪುರ‌ ಮಠದ ಶಾಖಾಮಠವಾದ ಗಿರಿನಗರದ ರಾಮಾಶ್ರಮದಲ್ಲಿ ಸೋಮವಾರ ದಿನಾಂಕ 05-11-2018 ರಂದು ಸೋಮಪ್ರದೋಷ ಹಾಗೂ ಮಾಸಶಿವರಾತ್ರಿ ಅಂಗವಾಗಿ ಬ್ರಹ್ಮೀಭೂತ ಶ್ರೀಶ್ರೀಮದ್ರಾಘವೇಂದ್ರಭಾರತೀಮಹಾಸ್ವಾಮಿಗಳವರ ಸಮಾಧಿಸಾನ್ನಿಧ್ಯದಲ್ಲಿ ಶ್ರೀಸಂಸ್ಥಾನದವರ ದಿವ್ಯಕರಗಳಿಂದ ವಿಶೇಷರುದ್ರಾಭಿಷೇಕ ನಡೆಯಲಿದೆ.   ಮುಂಜಾನೆ 10 ಗಂಟೆಗೆ ಶ್ರೀಕರಾರ್ಚಿತದೇವತಾ ಪೂಜೆಯೊಂದಿಗೆ ಧಾರ್ಮಿಕ‌ ಕಾರ್ಯಕ್ರಮಗಳು ಆರಂಭವಾಗಲಿದ್ದು, 11 ಗಂಟೆಗೆ ಶ್ರೀಸಂಸ್ಥಾನದವರು ಗುರುಮಂದಿರದಲ್ಲಿ ರುದ್ರಾಭಿಷೇಕ ನೆರವೇರಿಸಲಿದ್ದಾರೆ. 12 ಗಂಟೆಗೆ ಗುರು ವಂದನೆ, 12.30 ಕ್ಕೆ ಶ್ರೀಸಂಸ್ಥಾನದವರ ದಿವ್ಯ ಸಾನ್ನಿಧ್ಯದಲ್ಲಿ ರುದ್ರಹವನದ ಪೂರ್ಣಾಹುತಿ, 1 ಗಂಟೆಗೆ ಶ್ರೀಸಂಸ್ಥಾನದವರ ಸಾನ್ನಿಧ್ಯದಲ್ಲಿ ಗುರುಮಂದಿರದಲ್ಲಿ ಮಹಾಮಂಗಳಾರತಿ ನಡೆಯಲಿದೆ.  

Read More
ಸುಳ್ಯ ವಲಯದಲ್ಲಿ ವೇದವಾಹಿನಿ ಕಾರ್ಯಕ್ರಮ : ಸಂಪನ್ನಗೊಂಡ ಪಾರಾಯಣ – ವೇದಶ್ರವಣ

ಸುಳ್ಯ: ಸುಳ್ಯ ಹವ್ಯಕ ವಲಯದ ವೈದಿಕ-ಸಂಸ್ಕಾರ ವಿಭಾಗದಿಂದ 112 ಮತ್ತು 113ನೆಯ ವೇದವಾಹಿನಿ ಕಾರ್ಯಕ್ರಮಗಳು ನವೆಂಬರ್ 2ರಂದು ನಡೆದವು.   112ನೆಯ ವೇದವಾಹಿನಿ ಕಾರ್ಯಕ್ರಮವನ್ನು ಪಾರೆ ಶ್ರೀ ಕೇಶವಯ್ಯ ಭಟ್ ಅವರ ಮನೆಯಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಮನೆಯ ಯಜಮಾನರು ಕುಟುಂಬ ಸಮೇತರಾಗಿ ವೇದಶ್ರವಣ ಮಾಡಿದರು. ಘಟಕ ಗುರಿಕಾರರಾದ ಶ್ರೀ ವಿಷ್ಣುಕಿರಣ ಭಟ್ ಅವರು ಉಪಸ್ಥಿತರಿದ್ದರು. ಇದೇ ದಿನ ನೀರಬಿದರೆ ಶ್ರೀ ವೆಂಕಟರಮಣ ಭಟ್ ಅವರ ಮನೆಯಲ್ಲಿ ನಡೆದ 113ನೆಯ ವೇದವಾಹಿನಿ ಕಾರ್ಯಕ್ರಮದಲ್ಲಿ ಮನೆ ಯಜಮಾನರು ಕುಟುಂಬ

Read More
ಮಾತಾಪಿತೃಗಳಿಗೆ ಪಾದಪೂಜೆ ನೆರವೇರಿಸಿದ ಮಕ್ಕಳು : ಸಂಸ್ಕೃತಿ ಅರಿವು ಮೂಡಿಸಲು ನಡೆಯಿತು ವಿಶಿಷ್ಟ ಕಾರ್ಯಕ್ರಮ..

ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಹಾಗೂ ಹೆತ್ತವರ ಮಹತ್ತ್ವ ತಿಳಿಸಿಕೊಡುವ ನಿಟ್ಟಿನಲ್ಲಿ ಇಂದು ಶ್ರೀರಾಮಚಂದ್ರಾಪುರಮಠದ ಅಂಗಸಂಸ್ಥೆ ಶ್ರೀಭಾರತೀವಿದ್ಯಾಲಯದಲ್ಲಿ ಜನ್ಮದಾತರಿಗೆ ಪೂಜೆ ಸಲ್ಲಿಸುವ ವಿಶಿಷ್ಟ ಕಾರ್ಯಕ್ರಮ ಜರುಗಿತು. ಕನ್ನಡ ರಾಜ್ಯೋತ್ಸವದ ಈ ಶುಭದಿನದಂದು ಹೆತ್ತವರ ಪಾದ ತೊಳೆದು ಪೂಜೆ ಸಲ್ಲಿಸಿದ ಮಕ್ಕಳು, ಬದುಕಿಡಿ ತಮ್ಮನ್ನು ಸಲಹುವ ತಂದೆ-ತಾಯಿಗಳನ್ನು ಗೌರವದಿಂದ ಕೊನೆತನಕ ಸಲಹುವ ಶಪಥ ಗೈಯ್ದರು. ಕಣ್ಮರೆಯಾಗುತ್ತಿರುವ ಭಾರತೀಯ ಸಂಸ್ಕೃತಿಯನ್ನು ನೆನಪಿಸುವ ಹಾಗೂ ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಸಂಪ್ರದಾಯದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ

Read More
ರಾಮಾಶ್ರಮದಲ್ಲಿ ರಾಮದೇವರ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಸಂಪನ್ನ

ಬೆಂಗಳೂರು : ಶ್ರೀರಾಮಚಂದ್ರಾಪುರಮಠದ‌ ಶಾಖಾಮಠವಾದ ಬೆಂಗಳೂರು ಗಿರಿನಗರದ ರಾಮಾಶ್ರಮದಲ್ಲಿ ಸಪರಿವಾರ ಶ್ರೀರಾಮಚಂದ್ರದೇವರ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಕಾರ್ಯಕ್ರಮವು ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಾಗಿ ನಡೆಯಿತು. ಶ್ರೀಸಂಸ್ಥಾನದವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ವಿಲಂಬ ಸಂವತ್ಸರದ ಅಶ್ವಯುಜ ಕೃಷ್ಣ ಷಷ್ಠಿ ಹಾಗೂ ಸಪ್ತಮಿಯಂದು ಹಲವು ಧಾರ್ಮಿಕ‌ ಕಾರ್ಯಕ್ರಮಗಳು ನಡೆದವು. (ದಿನಾಂಕ 30.10.2018 ಹಾಗೂ 31.10.2018) ಮಂಗಳವಾರದಂದು ಗುರುದೇವತಾ ಪ್ರಾರ್ಥನೆಯೊಂದಿಗೆ ಆರಂಭಗೊಂಡ‌ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಗಣಪತಿ ಪೂಜೆ, ದೇವನಾಂದಿ, ಪುಣ್ಯಾಹ, ಕೌತುಕ ಬಂಧನ, ಧ್ವಜಾರೋಹಣ, ಬಲಿ ವಿಧಾನಗಳನ್ನು ನೆರವೇರಿಸಲಾಯಿತು. ಸಂಜೆ ರಂಗಪೂಜೆ, ಪಲ್ಲಕ್ಕಿ ಉತ್ಸವ,

Read More