ಲೇಖನ
ಶ್ರೀ ಗುರುಸೇವೆ ಗೋಸೇವೆಯ ಭಾಗ್ಯ ದೊರಕುವುದು ಪೂರ್ವ ಜನ್ಮದ ಸುಕೃತದಿಂದ : ವಿದ್ಯಾ ರವಿಶಂಕರ್ ಏಳ್ಕಾನ
ತವರುಮನೆ ಸೂರ್ಯಂಬೈಲು ಮನೆಯವರು ಶ್ರೀ ರಾಮಚಂದ್ರ ಭಾರತೀ ಮಹಾಸ್ವಾಮಿಗಳ ಕಾಲದಿಂದಲೇ ಗ್ರಾಮದ ಗುರಿಕ್ಕಾರರಾಗಿ ಸೇವೆ ಸಲ್ಲಿಸುತ್ತಾ ಬಂದವರು. ತಾಯಿಯ ತಂದೆ ಬೈಪ್ಪದವು ರಾಮಚಂದ್ರ ಭಟ್ ಅವರು ಪೆರಾಜೆಯ ಮಾಣಿ ಮಠ ಕಟ್ಟುವ ಕಾರ್ಯದಲ್ಲಿ ಮುಂದಾಳತ್ವ ವಹಿಸಿದವರು. ಇದರಿಂದಾಗಿ ಬಾಲ್ಯದಿಂದಲೇ ವಿದ್ಯಾ ಅವರಿಗೆ ಶ್ರೀ ಮಠದ ಸಂಪರ್ಕ ದೊರಕಿತು. ಶ್ರೀ ಮಠ,ಗುರುಗಳು ಎಂಬ ಅಭಿಮಾನ ಮೂಡಿ ಭಕ್ತಿ ಶ್ರದ್ಧೆ ಮೂಡಲು ಕಾರಣವಾಯಿತು. ನಿರಂತರ ಶ್ರೀ ಮಠದ ಸಂಪರ್ಕ, ಗುರುಸೇವೆ,ಗೋಸೇವೆಗಳು ಪೂರ್ವ ಜನ್ಮದ ಸುಕೃತದಿಂದ ಲಭಿಸುತ್ತದೆ ಎಂಬುದು ಏಳ್ಕಾನದ ಡಾ.
Read More“ತ್ಯಾಗದ ಪರ್ವಕ್ಕೆ ಪ್ರೇರಣೆ ಗುರುವಚನಗಳು” : ಸುಮಾ ರಮೇಶ್
“ಸೇವೆ ಮಾಡ ಬೇಕೆಂಬ ತುಡಿತವಿದ್ದರೆ ಯಾವುದಾದರೂ ಒಂದು ಹಾದಿ ತೆರೆಯುತ್ತದೆ. ಹಣದ ಮೂಲಕ ಸಹಕಾರ ನೀಡಬೇಕೆಂಬ ಮನಸ್ಸಿದ್ದರೆ ಯಾವುದೋ ಒಂದು ರೀತಿಯಲ್ಲಿ ಹಣ ಸಂಗ್ರಹವಾಗುತ್ತದೆ. ಇದು ನನ್ನ ಜೀವನದ ಅನುಭವ. ಶ್ರೀ ಮಠದ ಸೇವೆ, ಶ್ರೀ ಗುರುಗಳ ಸೇವೆ, ಗೋಸೇವೆ ಇವುಗಳಲ್ಲಿ ಆನಂದ ಕಂಡುಕೊಳ್ಳುವವಳು ನಾನು. ಇತರರಲ್ಲಿ ನಾನು ಕೇಳಿಕೊಳ್ಳುವುದು ಸಹಾ ಇದನ್ನೇ. ನಮ್ಮ ಗುರುಗಳ ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡಿ. ಆಗ ದೊರಕುವ ಆನಂದವೇ ನಿಜವಾದ ಸಂತೋಷ” ತುಂಬು ಹೃದಯದ ಈ ನುಡಿಗಳು ಸುಮಾ ರಮೇಶ್
Read Moreಗೋಮಾತೆಯ ಮೇಲಿನ ಮಮತೆಯಿಂದ ಮಾಸದ ಮಾತೆಯಾದೆ: ಚಂದ್ರಮತಿ ಹೆಗಡೆ
ಬಾಲ್ಯದಿಂದಲೇ ಗೋವುಗಳ ಮೇಲೆ ವಿಶೇಷ ಪ್ರೀತಿ. ತವರುಮನೆಯಲ್ಲಿ ಹಸುಗಳ ಒಡನಾಟದ ನಡುವೇ ಬೆಳೆದವರು. ಮುಂದೆ ವಿದ್ಯಾಭ್ಯಾಸ, ಸರಕಾರಿ ಉದ್ಯೋಗ, ಮದುವೆ, ಮಕ್ಕಳು ಎಂದು ಜೀವನದ ಹಲವಾರು ಜವಾಬ್ದಾರಿಯುತ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವಾಗ ಗೋ ಸಾಕಣೆ ಇಷ್ಟವಿದ್ದರೂ ಅನಿವಾರ್ಯ ಕಾರಣಗಳಿಂದಾಗಿ ಆ ಕಡೆಗೆ ಗಮನ ನೀಡಲು ಆಗಲಿಲ್ಲ. ಆದರೂ ಶ್ರೀ ಮಠದ ಸಂಪರ್ಕಕ್ಕೆ ಬಂದ ನಂತರ ಗೋವುಗಳ ಸಾಂಗತ್ಯ ಮತ್ತೆ ದೊರಕಿತು. ಶ್ರೀ ಸಂಸ್ಥಾನದವರ ಗೋಸಂರಕ್ಷಣಾ ಕಾರ್ಯಗಳು ಮನಸ್ಸಿಗೆ ಬಹಳ ಆಪ್ತವಾಯಿತು. ಗೋಸ್ವರ್ಗ ನಿರ್ಮಾಣದ ನಂತರ ಅಲ್ಲಿನ ಒಂದು
Read Moreಶ್ರೀ ಗುರುಗಳ ಪ್ರೇರಣಾ ನುಡಿಗಳೇ ಮಾಸದ ಮಾತೆಯಾಗಲು ದಾರಿದೀಪ : ಸಂಧ್ಯಾ ಕಾನತ್ತೂರು
“ಸಾವಿರದ ಸುರಭಿ ಯೋಜನೆಯಲ್ಲಿ ಭಾಗವಹಿಸಿದ್ದೆ. ಆದರೆ ಮಾಸದ ಮಾತೆಯಾಗಲು ಮಾತ್ರ ಯಾಕೋ ಧೈರ್ಯ ಮೂಡಲಿಲ್ಲ. ಸುರಭಿ ಸೇವಿಕೆಯಾಗಿ ಇತರ ಮಾಸದ ಮಾತೆಯರ ಜೊತೆ ಸಹಕರಿಸೋಣ ಎಂದು ಯೋಚಿಸಿದ್ದೆ. ಆದರೆ ಶ್ರೀ ಸಂಸ್ಥಾನದವರು ‘ ಅಸಾಧ್ಯ ಎನ್ನುವುದು ಯಾವುದೂ ಇಲ್ಲ ಸಂಧ್ಯಾ’ ಎಂದು ಭರವಸೆಯ ಆಶೀರ್ವಾದ ನೀಡಿದಾಗ ಅವರ ನುಡಿಗಳೇ ಗೋ ಸೇವಾ ಕಾರ್ಯಕ್ಕೆ ಶ್ರೀ ರಕ್ಷೆ ಎಂದು ಭಾವಿಸಿ ಮಾಸದ ಮಾತೆಯಾಗಿ ಸೇರಿ ಕೊಂಡೆ ” ಎಂದು ತುಂಬು ಹೃದಯದಿಂದ ನುಡಿಯುತ್ತಾರೆ ಸಂಧ್ಯಾ ಕಾನತ್ತೂರು . ಮುಳಿಯಾಲದ
Read Moreಶ್ರೀ ಮಠದ ಸೇವೆ ಗೋಸೇವೆ ತಾಯ್ತಂದೆಯರ ಬಳುವಳಿ: ಈಶ್ವರೀ ರಾಮಕೃಷ್ಣ
ಮಾಣಿ ಮಠದ ಶ್ರೀರಾಮದೇವರ ಅರ್ಚಕರಾಗಿ ಸುಮಾರು ೨೪ ವರ್ಷಗಳ ಕಾಲ ಸೇವೆ ಸಲ್ಲಿಸಿ ಪೂಜ್ಯ ಗುರುಗಳಾದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ‘ಪ್ರಾಮಾಣಿಕ ಸೇವೆಗಾಗಿ ಪುರಸ್ಕೃತಗೊಂಡ ಪಂಜಿಗುಡ್ಡೆ ನಾರಾಯಣ ಭಟ್ಟರ ಪುತ್ರಿಯಾಗಿರುವ ಕುರಿಯದ ಈಶ್ವರೀ ರಾಮಕೃಷ್ಣ ಅವರಿಗೆ ಗುರುಸೇವೆ, ಗೋಸೇವೆ ತಾಯ್ತಂದೆಯರು ತೋರಿದ ಹಾದಿ. ತಾಯಿ ಕಾವೇರಿ ಅವರು ಸಹಾ ಗೋಸಾಕಣಿಗೆಯಲ್ಲಿ ಶ್ರೀ ಸಂಸ್ಥಾನದವರಿಂದ ಸನ್ಮಾನಿಸಲ್ಪಟ್ಟವರು ಎಂಬುದು ಇವರ ಹೆಮ್ಮೆ. “ನನ್ನ ಬಾಲ್ಯವೇ ಮಾಣಿಮಠದಲ್ಲಿ. ಅರ್ಚಕರಾದ ತಂದೆಯ ಕಾರ್ಯಕ್ಕೆ ನೆರವಾಗುವ ತಾಯಿಯ ಜೊತೆಯಲ್ಲಿ ನಾವು ಸಹಾ
Read Moreಹಸುಗಳ ಕೊರಳ ಗಂಟೆಯ ಸದ್ದೇ ಬದುಕಿನ ಚೇತನ: ದೇವಕಿ ಭಟ್ ಪನ್ನೆ
ಮನೆಯಲ್ಲಿ ಮೂವತ್ತನಾಲ್ಕು ಹಸುಗಳನ್ನು ಸಾಕುತ್ತಿರುವಾಗಲೇ ಶ್ರೀ ಗುರುಗಳ ಸಮಾಜಮುಖಿ ಕಾರ್ಯಗಳಲ್ಲಿ ಆಸಕ್ತಿ ವಹಿಸಿ ಮಹಿಳಾ ಪರಿಷತ್ ನ ಮೂಲಕ ಸೇವೆ ಸಲ್ಲಿಸಲು ಆರಂಭಿಸಿದ ದೇವಕಿ ಭಟ್ ಪನ್ನೆ ಅವರು ಇಂದು ಕೂಡಾ ಮನೆಯಲ್ಲಿ ಹಸುಗಳನ್ನು ಸಾಕುವ ಜೊತೆಗೆ ಮಠದ ಗೋ ಸಾಕಣೆಗೂ ಕೈ ಜೋಡಿಸಿ ಇತರರಿಗೆ ಮಾದರಿಯಾಗಿರುವವರು. “ಮುಂಜಾನೆ ನಾಲ್ಕು ಗಂಟೆಗೆ ಎದ್ದು ಹತ್ತು ಹದಿನಾಲ್ಕು ಹಸುಗಳನ್ನು ಕರೆದು, ಅವುಗಳಿಗೆ ಹಿಂಡಿ,ಮೇವು ನೀಡಿ, ಉಳಿದ ಮನೆಗೆಲಸಗಳನ್ನು ಪೂರೈಸಿ ಮನೆಯಿಂದ ಹೊರಡುವವಳು ನಾನು. ನಮ್ಮ ಮನೆಯಲ್ಲಿ ಗೋವುಗಳನ್ನು ಸಾಕಿ
Read Moreಗೋ ಸಂರಕ್ಷಣೆಯೇ ಬದುಕಿನ ಗುರಿ : ನಿಧಿ ಹೆಗಡೆ
ಬಾಲ್ಯದಿಂದಲೂ ಶ್ರೀಮಠದ ನಿರಂತರ ಸಂಪರ್ಕ. ಗೋವುಗಳ ಒಡನಾಟ. ಶ್ರೀ ಸಂಸ್ಥಾನದವರ ವಿವಿಧ ಯೋಜನೆಗಳ ಸದುದ್ದೇಶದ ಅರಿವು ಇವುಗಳೇ ಚಂದಾವರ ಸೀಮೆಯ ಕುಮಟಾ ಮೂಲದ ಶ್ರೀಧರ ಹೆಗಡೆ ಕೂಜಳ್ಳಿ, ಪಾರ್ವತಿ ಹೆಗಡೆ ಇವರ ಪುತ್ರಿ ನಿಧಿ ಹೆಗಡೆಗೆ ಗೋವುಗಳ ಮೇಲೆ ಅಕ್ಕರೆ ಮೂಡಿಸುವಲ್ಲಿ ಯಶಸ್ವಿಯಾಯಿತು. “ಗೋವುಗಳ ಮೇಲೆ ವಿಶೇಷ ಮಮತೆ ಇದೆ. ಆದರೂ ಮಾಸದ ಮಾತೆಯಾಗಿ ಸೇವೆ ಮಾಡಿ ಗುರಿ ತಲುಪುವ ಭರವಸೆ ಇರಲಿಲ್ಲ. ಇದುವರೆಗೂ ಯಾವುದೇ ವಿಚಾರಕ್ಕೂ ಇತರರಲ್ಲಿ ಹಣ ಕೇಳಿ ಅನುಭವವಿಲ್ಲದ ನನಗೆ ಈ ವಿಷಯದಲ್ಲಿ
Read Moreಮಗನಿಂದಲೇ ಮೊದಲ ದೇಣಿಗೆ: ಶ್ವೇತಾ ಕಾಡೂರು
“ಶ್ರೀ ಗುರುಗಳ ಗೋ ಸಂರಕ್ಷಣಾ ಕಾರ್ಯದ ಪ್ರೇರಣೆಯಿಂದ ಮಾಸದ ಮಾತೆಯಾಗಿ ಸೇವೆ ಸಲ್ಲಿಸಲು ಮುಂದಾದರೂ ನನ್ನ ಕಾರ್ಯ ಕೈಗೂಡುವ ಬಗ್ಗೆ ಯಾವುದೋ ಆತಂಕ ಮನದಲ್ಲಿ ಮೂಡಿತ್ತು. ಈ ವಿಚಾರವಾಗಿ ಯೋಚಿಸುತ್ತಿರುವಾಗ ಪುಟ್ಟ ಮಗ ಪ್ರಣವ ತನ್ನ ‘ಪ್ಯಾಕೆಟ್ ಮನಿ’ ಯಿಂದ ತನ್ನ ಸಂಗ್ರಹವನ್ನು ನೀಡಿ ‘ ಅಮ್ಮಾ ಗೋ ಸೇವೆಗೆ ಇದು ನನ್ನ ಕಾಣಿಕೆ’ ಎಂದು ನೀಡಿದಾಗ ಸಂತಸದಿಂದ ಕಣ್ತುಂಬಿ ಬಂತು” ಎನ್ನುತ್ತಾರೆ ಶ್ವೇತಾ ಕಾಡೂರು. ಸಂಗೀತ, ನೃತ್ಯ, ಈಜು, ಪೈಂಟಿಂಗ್,ಚಿತ್ರಕಲೆಗಳಲ್ಲಿ ಅತೀವ ಆಸಕ್ತಿ ಇರುವ ಶ್ವೇತಾ,
Read Moreಗುರು – ಗೋ ಸೇವೆಯೇ ಬದುಕಿನ ಧನ್ಯತೆ : ವೀಣಾ ಪ್ರಭಾಕರ ಭಟ್
ಸಾಗರ ಪ್ರಾಂತ್ಯದ ಮಾತೃತ್ವಮ್ ನ ಅಧ್ಯಕ್ಷೆಯೂ, ಸಂಪನ್ಮೂಲ ಖಂಡದ ಸಂಯೋಜಕಿಯೂ ಆಗಿರುವ ವೀಣಾ ಪ್ರಭಾಕರ ಭಟ್ಟ ಅವರಿಗೆ ಮಾಸದ ಮಾತೆಯಾಗಿ ಗುರಿ ತಲುಪಿದುದಕ್ಕಿಂತಲೂ ಹೆಚ್ಚು ಸಂತಸ ಶ್ರೀ ಗುರುಗಳ ಸೇವೆಯಲ್ಲಿ ಒಂದು ಬಿಂದುವಾಗಿ ಸೇರಿದೆ ಎಂಬುದರ ಬಗ್ಗೆ. ಅಂಬಾಗಿರಿ ಮಠಕ್ಕೆ ಶ್ರೀ ಸಂಸ್ಥಾನದವರು ಭೇಟಿಯಿತ್ತ ಸಂದರ್ಭದಲ್ಲಿ ಮೊದಲ ಬಾರಿಗೆ ಮಂತ್ರಾಕ್ಷತೆ ಪಡೆದು ಕೊಂಡಾಗಲೇ ತನ್ನ ಬದುಕಿನ ಪಥ ಬದಲಾಯಿತು. ಗುರು ಚರಣ ಸೇವೆಯಿಂದ ಇಂದು ಬಾಳಿನಲ್ಲಿ ನೆಮ್ಮದಿ , ಸಂತಸ ಮನೆಮಾಡಿದೆ. ಅಂತರಂಗದಲ್ಲಿ ಬಚ್ಚಿಟ್ಟ ಕನಸುಗಳು ಸಹಾ
Read Moreನಿರಂತರ ಮಠದ ಸಂಪರ್ಕವೇ ಗೋ ಸೇವೆಗೆ ಪ್ರೇರಣೆ: ಜ್ಯೋತಿಲಕ್ಷ್ಮಿ ಅಮೈ
“ಸುಮಾರು ಎರಡು ದಶಕಗಳಿಂದ ಶ್ರೀ ಮಠದ ನಿರಂತರ ಸಂಪರ್ಕವಿದೆ ಮಾತ್ರವಲ್ಲದೆ ಮಹಿಳಾ ಪರಿಷತ್ ಇರುವಾಗಲೇ ವಿವಿಧ ಸೇವಾ ಪ್ರಧಾನೆಯಾಗಿ ಕಾರ್ಯನಿರ್ವಹಿಸಿದ ಅನುಭವವೂ ಇರುವುದರಿಂದ ಶ್ರೀ ಮಠದ ಗೋ ಸೇವಾ ಯೋಜನೆಯಾದ ಮಾತೃತ್ವಮ್ ಮೂಲಕ ಮಾಸದ ಮಾತೆಯಾಗಿ ಸ್ವಯಂ ಇಚ್ಛೆಯಿಂದ ಸೇರಿದೆ” ಎನ್ನುವ ಜ್ಯೋತಿಲಕ್ಷ್ಮಿ ಅಮೈ ಅವರು ಪ್ರಸ್ತುತ ಮಂಗಳೂರು ಮಂಡಲದ ಮಾತೃ ಪ್ರಧಾನೆಯಾಗಿದ್ದಾರೆ. ಮುದ್ರಜೆ ಗೋವಿಂದ ಭಟ್, ಪಾರ್ವತಿ ಅಮ್ಮ ದಂಪತಿಗಳ ಪುತ್ರಿಯಾಗಿರುವ ಇವರು ಕೇಪು ವಲಯದ ಅಡ್ಯನಡ್ಕ ಸಮೀಪದ ಅಮೈ ಯಲ್ಲಿರುವ ಡಾ. ಕೃಷ್ಣಮೂರ್ತಿ ಅವರನ್ನು
Read Moreಗೋ ಪ್ರೀತಿಗೆ ಪ್ರೇರಣೆ ನಮ್ಮಪ್ಪ: ಸರಿತಾ ಪ್ರಕಾಶ್
“ಬಾಲ್ಯದಲ್ಲೇ ಗೋವಿನ ಮೇಲೆ ವಿಶೇಷ ಪ್ರೀತಿ ಮೂಡಲು ಕಾರಣ ನಮ್ಮಪ್ಪ ವೆಂಕಟ್ರಮಣ ಭಟ್, ಪ್ರತಿದಿನವೂ ಮುಂಜಾನೆ ಗೋವಿಗೆ ಒಂದು ಹಿಡಿಯಷ್ಟಾದರೂ ಮೇವು ನೀಡದೆ ಇತರ ಕಾರ್ಯಗಳತ್ತ ಗಮನ ಹರಿಸಿದವರಲ್ಲ ನಮ್ಮಪ್ಪ. ಇದುವೇ ಗೋವಿನ ಮೇಲೆ ಮಮತೆ ಮೂಡಲು ಕಾರಣ. ಮುಂದೆ ಶ್ರೀ ರಾಘವೇಶ್ವರ ಭಾರತೀ ಶ್ರೀಗಳವರ ಗೋ ಸಂರಕ್ಷಣಾ ಕಾರ್ಯವು ಮನಸ್ಸಿಗೆ ಹೊಸ ಸ್ಪೂರ್ತಿ ನೀಡಿತು. ಇದರಿಂದ ಪ್ರೇರಣೆಗೊಂಡು ಸಮಾಜದಲ್ಲಿ ಭಾರತೀಯ ಗೋತಳಿಗಳ ಬಗ್ಗೆ ಅರಿವು ಮೂಡಿಸ ಬೇಕು, ಅವುಗಳ ಸಂರಕ್ಷಣೆಗಾಗಿ ಕಿಂಚಿತ್ ಸೇವೆ ಮಾಡಬೇಕು’ ಎಂಬ
Read Moreಮನೆಯ ಹಸುಗಳಿಗೂ ಮುಕ್ತ ವಾತಾವರಣ ನೀಡಿದ ಮಾಸದ ಮಾತೆ: ವಿಜಯಲಕ್ಷ್ಮಿ ಕಲ್ಲಕಟ್ಟ
ಗೋಸ್ವರ್ಗಕ್ಕೆ ಹೋಗಿ ಬಂದ ಮೇಲೆ ಅಲ್ಲಿ ಹಸುಗಳಿಗೆ ನೀಡಿದ ಮುಕ್ತ ಸ್ವಾತಂತ್ರ್ಯವನ್ನು ಕಂಡು, ಮೆಚ್ಚಿ ತಮ್ಮ ಮನೆಯಲ್ಲಿರುವ ಹಸುಗಳಿಗೂ ಇಂತಹುದೇ ವಾತಾವರಣ ಕಲ್ಪಿಸಿಕೊಟ್ಟವರು ಮುಳ್ಳೇರಿಯ ಮಂಡಲದ ಪೆರಡಾಲ ವಲಯದಿಂದ ಮಾಸದ ಮಾತೆಯಾಗಿ ಗುರಿ ತಲುಪಿದ ವಿಜಯಲಕ್ಷ್ಮಿ ಕಲ್ಲಕಟ್ಟ. ಕಾಕೆಕೊಚ್ಚಿ ನಾರಾಯಣ ಭಟ್, ಹೊನ್ನಮ್ಮ ದಂಪತಿಗಳ ಪುತ್ರಿಯಾದ ಇವರಿಗೆ ಹೊಲಿಗೆ, ಕಸೂತಿ, ಕರಕುಶಲ ಕಲೆಗಳಲ್ಲಿ ಪರಿಣತಿಯಿದೆ. ಕೃಷಿ, ಹೋದೋಟ ಇಷ್ಟ ಪಡುವ ಅವರ ಮನೆಯ ಮುಂದೆ ಸುಂದರವಾದ ಹೂಗಳು, ತಾವರೆಕೊಳ ಜನಮನ ಸೆಳೆಯುತ್ತಿರುವುದು ಇವರ ಆಸಕ್ತಿಗೆ ಸಾಕ್ಷಿಯಾಗಿದೆ. ಸುಮಾರು
Read Moreಗೋಮಾತೆಯ ಶ್ರೀಮಾತೆಯಾಗಿ ಪುಟಾಣಿ ಶ್ರೀರಕ್ಷಾ
ಈಕೆ ಇನ್ನೂ ಆರನೇ ತರಗತಿಯಲ್ಲಿ ಕಲಿಯುತ್ತಿರುವ ಪುಟಾಣಿ. ಗೆಳೆಯ ಗೆಳತಿಯರೊಡನೆ ಸ್ವಚ್ಛಂದವಾಗಿ ಆಟವಾಡುವ ಮುಗ್ಧ ಬಾಲ್ಯ. ಮನೆಯವರ ಜೊತೆಗೆ, ಮುದ್ದು ತಂಗಿಯ ಜೊತೆಗೆ ಬಾಲ್ಯ ಸಹಜವಾದ ತುಂಟಾಟವಾಡುವ ಸಮಯ. ಆದರೂ ಆಕೆ ಇಂದು ಹೊತ್ತುಕೊಂಡಿರುವ ಮಹತ್ತರ ಜವಾಬ್ದಾರಿ ನಿಜಕ್ಕೂ ಅದ್ಬುತ, ಅನುಕರಣೀಯ. ಮಾಸದ ಮಾತೆಯಾಗಿ ಸೇವೆ ಸಲ್ಲಿಸಿ ಸ್ವಯಂ ಒಂದು ಲಕ್ಷಕ್ಕೂ ಅಧಿಕ ಮೊತ್ತ ಸಂಗ್ರಹಿಸಿ ಎರಡು ವರ್ಷಗಳಿಗೆ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಭರಿಸುವ ಮೂಲಕ ಸಮಾಜದ ಎಲ್ಲರಿಗೂ ಮಾದರಿಯಾಗಿದ್ದಾಳೆ ಈ ಬಾಲೆ. ಮುಳ್ಳೇರಿಯ ಮಂಡಲದ
Read Moreಮಕ್ಕಳಿಗೆ ಗೋವಿನ ಮಹತ್ವದ ಅರಿವು ಮೂಡಿಸುವ ಶಿಕ್ಷಕಿ: ವಿಜಯಾ ಶ್ಯಾನುಭಾಗ್
“ಮಕ್ಕಳಿಗೆ ಎಳವೆಯಿಂದಲೇ ಗೋವಿನ ಮೇಲೆ ಮಮತೆ ಮೂಡಿಸಿದರೆ ಮುಂದಿನ ಪೀಳಿಗೆಯೂ ಗೋ ಸಾಕಣೆಯತ್ತ ಮನಸ್ಸು ಮಾಡ ಬಹುದಷ್ಟೆ. ಅಳಿಯುತ್ತಿರುವ ಗೋತಳಿಗಳ ಪರಿಚಯ ಮಾಡಿಸಿ, ಆ ಹಸುಗಳ ವಿಶೇಷತೆಗಳ ಬಗ್ಗೆ ಮಕ್ಕಳಿಗೆ ತಿಳಿಸಿದರೆ ಮುಂದೊಂದು ದಿನ ನಮ್ಮ ಸಮಾಜ ಭಾರತೀಯ ಗೋತಳಿಗಳ ಮಹತ್ವವನ್ನು ಜಗತ್ತಿಗೇ ಸಾರಬಹುದು” ಎಂಬುದು ಶಿಕ್ಷಕಿಯಾಗಿರುವ ಶಿರಸಿಯ ವಿಜಯಾ ಶ್ಯಾನುಭಾಗ್ ಅವರ ಅಭಿಪ್ರಾಯ. ಸಿದ್ದಾಪುರ ಮಂಡಲದ ಅಂಬಾಗಿರಿ ವಲಯದ ವಿಜಯಾ ಶ್ಯಾನುಭಾಗ್ ಕೆಕ್ಕಾರು ಮಠದಲ್ಲಿ ಶ್ರೀ ಸಂಸ್ಥಾನದವರ ಚಾತುರ್ಮಾಸ್ಯದ ನಂತರ ಶ್ರೀ ಮಠದ ಸಂಪರ್ಕಕ್ಕೆ ಬಂದವರು.
Read Moreರಮ್ಯ-ಗೋಸ್ವರ್ಗ!
ಸಂಕ್ರಾಂತಿಯ ಪುಣ್ಯಪರ್ವದಲ್ಲಿ ಮಿಂದು ಝಗಮಗಿಸಿದ ಗೋಸ್ವರ್ಗ! ಸ್ವರ್ಗವೆಂದರೇನೆಂದು ಭುವಿಯಲ್ಲೇ ಕಂಡ ಗೋಪ್ರೇಮಿಗಳು- ಗುರುಭಕ್ತರು!! ಓ ಅಲ್ಲಿ ಕೆಳಗಿಳಿದು ಹೋಗುವಾಗಲೇ ಕಾಣುವ ಹುಲ್ಲಿನಲ್ಲಿ ಬರೆದ ಹರೇರಾಮ- ಗೋಸ್ವರ್ಗ! ಮತ್ತೆ ಎದುರಿಗೆ ಕಾಣುವುದು ಕಬ್ಬಿನಹಾಲು, ಪುದೀನಾಜ್ಯೂಸ್ ನಂತಹ ವಿವಿಧ ಪಾನೀಯಗಳು! ಹಾಗೆ ಪ್ರೇಕ್ಷಾಪಥ ದಲ್ಲಿ ಕಾಲಿಟ್ಟರೆ ಕರೆಕರೆದು ದೇಶೀಗೋಹಾಲು ಕೊಟ್ಟು ಅರಿಶಿಣ- ಕುಂಕುಮ- ಹೂವು- ಬಳೆ ಕೊಟ್ಟು “ಸುಹಾಸಿನಿಯರ ಪೂಜೆ” ಯ ಸಂತಸದಲಿ ಮಿಂದೇಳುವ ತಾಯಿಯರು!! ಹಾಗೆ ಬಲಕ್ಕೆ ತಿರುಗಿದರೆ ಅಮೃತಫಲ, ತೊಡೆದೇವು, ಮನೋಹರ, ಸಾವಯವ ಪಾನಿಪುರಿ, ದೇಶೀ ಬಟ್ಟೆಗಳ
Read Moreಗೋವಿನ ಬಗ್ಗೆ ಸಮಾಜದಲ್ಲಿ ಉತ್ತಮ ಸ್ಪಂದನೆ ಇದೆ: ರಾಜರಾಜೇಶ್ವರಿ ಬೆಂಗಳೂರು
ಕೆದಿಲ ಗ್ರಾಮದ ಬಡೆಕ್ಕಿಲ ಶಂಕರ ಭಟ್,ಶಂಕರಿ ಅಮ್ಮ ಇವರ ಪುತ್ರಿಯಾದ ರಾಜರಾಜೇಶ್ವರಿ ಅವರು ಶಿರಂಕಲ್ಲು ಉಬರು ಮನೆತನದ ಗಣಪತಿ ಭಟ್ ಅವರನ್ನು ವಿವಾಹವಾಗಿ ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲದ ಅನ್ನಪೂರ್ಣೇಶ್ವರಿ ವಲಯದ ಆರೋಗ್ಯ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ ಕಾಲ ಒಂದು ಹಸುವನ್ನು ಸಾಕುವ ಹೊಣೆ ಹೊತ್ತು ಮಾಸದ ಮಾತೆಯ ಗುರಿ ತಲುಪಿದವರು. ಹಲವಾರು ವರ್ಷಗಳಿಂದ ಶ್ರೀ ಮಠದ ನಿರಂತರ ಸಂಪರ್ಕದಿಂದಾಗಿ ಮಠದ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ರಾಜರಾಜೇಶ್ವರಿ ಈ
Read Moreಗೋ ಸೇವೆಯಲ್ಲಿ ಸಾರ್ಥಕತೆ ಇದೆ: ಶೋಭಾ ಲಕ್ಷ್ಮಿ ಬಂಗಾರಡ್ಕ
ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಪೀಠವೇರಿದ ನಂತರ ನಿರಂತರ ಮಠದ ಸಂಪರ್ಕದಲ್ಲಿದ್ದ ಕುಟುಂಬ ಬಂಗಾರಡ್ಕದ ಶೋಭಾಲಕ್ಷ್ಮಿ ಇವರದ್ದು. ಉಪ್ಪಿನಂಗಡಿ ಮಂಡಲದ ಕಬಕ ವಲಯದ ಈಗ ಪುತ್ತೂರು ಸಮೀಪದ ಕೊಡಿಪ್ಪಾಡಿಯಲ್ಲಿ ವಾಸಿಸುತ್ತಿರುವ ಬಂಗಾರಡ್ಕ ಜನಾರ್ದನ ಭಟ್ ಅವರ ಪತ್ನಿ ಶೋಭಾಲಕ್ಷ್ಮಿ ಬಂಗಾರಡ್ಕ .ಏಕೈಕ ಪುತ್ರ ಎಂ.ಬಿ.ಬಿ.ಎಸ್.ಮುಗಿಸಿ, ಎಂ.ಎಸ್ ಮಾಡುತ್ತಿದ್ದಾನೆ. ಸಾಹಿತ್ಯ, ಸಂಗೀತ ಸಹಿತ ಎಲ್ಲಾ ಕಲೆಗಳಲ್ಲೂ ಆಸಕ್ತಿ ಇರುವ ಶೋಭಾಲಕ್ಷ್ಮಿ ಗೆ ಆಧ್ಯಾತ್ಮಿಕ ವಿಚಾರದತ್ತ ಹೆಚ್ಚಿನ ಸೆಳೆತ. ತವರುಮನೆ ನಿಡುಗಳದಲ್ಲೂ ಗೋಸಾಕಣೆ ಇದ್ದುದರಿಂದ ಗೋವಿನ ಮೇಲಿನ ಮಮತೆ
Read Moreಆರಾಧ್ಯಗುರವೇ…
ಅಂದಿನ ತ್ರೇತಾಯುಗವ ಇಂದಿನ ಕಲಿಯುಗದಲಿ ಪ್ರತ್ಯಕ್ಷ ಕಾಣಿಸಿದ ಓ ಗುರುವೇ,ನಮ್ಮ ಗುರುವೇ,ಆರಾಧ್ಯಗುರವೇ…! ನೂರಾರು- ಜೀವರ ಸೇರಿಸಿ ಗಿರಿನಗರ ಮಠವನ್ನೇ ನವ- ಅಯೋಧ್ಯಾ ಪುರವಾಗಿಸಿದ ಓ ಗುರುವೇ,ನಮ್ಮ ಗುರುವೇ,ಆರಾಧ್ಯಗುರವೇ..! ಧಾರಾ– ರಾಮಾಯಣದ ದೋಣಿಯಲಿ ನಮ್ಮೆಲ್ಲರ ಕುಳ್ಳಿರಿಸಿ ಜೀವನಕ್ಕೆ- ಶಿಕ್ಷಣವ ಕೊಡಿಸಿದಾ ಓ ಗುರುವೇ,ನಮ್ಮ ಗುರುವೇ,ಆರಾಧ್ಯಗುರವೇ..! ಸಮಾಜದ ಮನೆ ಮನೆಗಳಲ್ಲಿ ಗೋಪ್ರೇಮ,ಗೋಭಕ್ತಿಯಾ ಭಿತ್ತಿ ರಾಮಕಥಾ,ಗೋಕಥವ ಮಾಡಿದ ಓ ಗುರುವೇ,ನಮ್ಮ ಗುರುವೇ,ಆರಾಧ್ಯಗುರವೇ..! ಜೀವದ ನಲಿವಿಗೆ ನಲವತ್ತು ಮೆಟ್ಟಿಲ ಸಾಧನಾ- ಪಂಚಕದ ನೂರಾರು ಕಂತಿನಲಿ ಜೀವದಾ ಸಾಧನೆಯ ಮಾಡಿಸುವ, ಓ ಗುರುವೇ,ನಮ್ಮ ಗುರುವೇ,ಆರಾಧ್ಯಗುರವೇ..!
Read Moreಗುರು ಕಾರುಣ್ಯದಿಂದ ಗುರಿ ಸೇರಿದೆ: ಎನ್ನುವ ಗೀತಾ ಪ್ರಸಾದ್ ಪೋಳ್ಯ
ಗೀತಾಪ್ರಸಾದ್ ಪೋಳ್ಯ ಇವರು ಗೋ ಸೇವೆಯಲ್ಲಿ ಆಸಕ್ತಿ ಹೊಂದಿ ಗುರು ಸೇವೆಯ ಶ್ರದ್ಧೆಯಿಂದ ಮಾಸದ ಮಾತೆಯಾಗಿ ಸೇರಿ ಗುರಿ ತಲುಪಿದ ಮಾಸದ ಮಾತೆ. “ಪೆರಾಜೆ ಮಾಣಿ ಮಠದಲ್ಲಿ ನಡೆದ ಚಾತುರ್ಮಾಸ್ಯದ ಸಂದರ್ಭದಲ್ಲಿ ಮೊದಲ ಬಾರಿಗೆ ಶ್ರೀ ಸಂಸ್ಥಾನದವರ ಆಶೀರ್ವಚನ, ರಾಮಕಥೆಗಳನ್ನು ಕೇಳಿಸಿಕೊಂಡೆ. ನಂತರ ಆಧ್ಯಾತ್ಮಿಕವಾಗಿ ಬಹಳಷ್ಟು ಸೆಳೆತವುಂಟಾಯಿತು.ಇದು ಅನೇಕ ಮಾನಸಿಕ ಒತ್ತಡಗಳಿಂದ ಮುಕ್ತಿಯನ್ನು ನೀಡಿದಾಗ ಶ್ರೀ ಗುರುಗಳ ನಿರ್ದೇಶಾನುಸಾರವಾಗಿ ನಡೆಯುತ್ತಿರುವ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡೆ” ಎನ್ನುವ ಗೀತಾ ಪೋಳ್ಯ ಅವರು ತಮ್ಮ ಮಾಸದ ಮಾತೆಯಾದ ಅನುಭವವನ್ನು
Read Moreಗುರು ಚರಣಕೆ ಶರಣು : ವಿಜಯಲಕ್ಷ್ಮಿ ಅಂಗಡಿ (ಪ್ರತಿಭಾ ಅಂಗಡಿ)
ಶ್ರೀ ಗುರುಗಳ ಗೋವಿನ ಬಗ್ಗೆ ಇರುವ ಕಾಳಜಿಯ ಪ್ರೇರಣೆ, ಶ್ರೀ ಗುರು ವಚನದ ಮೇಲಿನ ಶ್ರದ್ಧೆ, ಬಾಲ್ಯದಿಂದಲೂ ಗೋವಿನ ಮೇಲೆ ಇದ್ದಂತಹ ಪ್ರೀತಿ ಇವುಗಳ ಪ್ರೇರಣೆಯಿಂದ ಮಾಸದ ಮಾತೆಯಾಗಿ ಸೇವೆ ಗೈಯಲು ಮುಂದೆ ಬಂದೆ. ಶ್ರೀ ಗುರುಗಳ ಅನುಗ್ರಹದಿಂದ ನಿರೀಕ್ಷೆಗೂ ಮುನ್ನವೇ ಗುರಿ ಸೇರಿದ ಸಾರ್ಥಕ ಭಾವ ಮನದಲ್ಲಿ ಮೂಡಿದೆ ಎನ್ನುತ್ತಾರೆ ಕರ್ಕಿ ಹೊನ್ನಾವರ ಮೂಲದ ಪ್ರಸ್ತುತ ಶಿರಸಿಯಲ್ಲಿ ವಾಸ್ತವ್ಯವಿರುವ ವಿಜಯಲಕ್ಷ್ಮಿ ಅಂಗಡಿ ಅವರ ಮಾತುಗಳು. ಸಿದ್ಧಾಪುರ ಮಂಡಲದ ಅಂಬಾಗಿರಿ ವಲಯದ ವಿಜಯಲಕ್ಷ್ಮಿ ಅವರು ಮಾಸದ ಮಾತೆಯಾಗಿ
Read More