|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಗುರುಚರಣ ಸೇವೆಯ ಮೂರು ದಶಕಗಳ ಭಕ್ತಿಪಥ: ಸಾವಿತ್ರಿ ಶ್ರೀಕಾಂತ್ ಕಾಳಮಂಜಿ

​ಬದುಕಿನ ಹಾದಿಯಲ್ಲಿ ಸುಖ-ಶಾಂತಿ ಮತ್ತು ನೆಮ್ಮದಿ ನೆಲೆಸಬೇಕಾದರೆ ಅದಕ್ಕೆ ಗುರುವಿನ ಅನುಗ್ರಹ ಹಾಗೂ ಗೋಮಾತೆಯ ಆಶೀರ್ವಾದ ಅತ್ಯಂತ ಅಗತ್ಯ. ಶ್ರೀಗುರುಗಳ ಚರಣ ಕಮಲಗಳನ್ನು ನಂಬಿದ ಭಕ್ತರ ಜೀವನ ಎಂದಿಗೂ ಅಪೂರ್ಣವಾಗುವುದಿಲ್ಲ ಎಂಬುದಕ್ಕೆ ಸಾಗರ ಮಂಡಲದ ಮರಗುಡಿ ವಲಯದ ಶೇಡಿಮನೆಯ ಸಾವಿತ್ರಿ ಶ್ರೀಕಾಂತ್ ಕಾಳಮಂಜಿ ಅವರ ಬದುಕು ಒಂದು ಸುಂದರ ಸಾಕ್ಷಿ. ಕಳೆದ ಮೂರು ದಶಕಗಳಿಂದ ಶ್ರೀರಾಮಚಂದ್ರಾಪುರ ಮಠದ ನಿರಂತರ ಸಂಪರ್ಕದಲ್ಲಿರುವ ಇವರು, ಕೇವಲ ಒಬ್ಬ ಗೃಹಿಣಿಯಾಗಿ ಮಾತ್ರವಲ್ಲದೆ, ಶ್ರೀಮಠದ ನಿಷ್ಠಾವಂತ ಸೇವಕಿಯಾಗಿ ಮತ್ತು ಮಾತೃತ್ವಮ್ ಮೂಲಕ ಮಾಸದಮಾತೆಯಾಗಿಯೂ

Read More

‘ಬದುಕಿನಹಾದಿಗೆ ಸದಾ ಬೆಳಕು ನೀಡುವುದು ಶ್ರೀಗುರುಗಳ ಅನುಗ್ರಹ ‘ – ವಿಜಯಲಕ್ಷ್ಮಿ ಮುಂಡೋಳುಮೂಲೆ 

  ‘ ​ಬದುಕಿನ ಪ್ರತಿ ಹೆಜ್ಜೆಯಲ್ಲೂ ಗುರುಗಳ ಅನುಗ್ರಹ ಮತ್ತು ಗೋಮಾತೆಯ ಆಶೀರ್ವಾದವಿದ್ದರೆ ಯಾವುದೇ ಕೊರತೆಯಿಲ್ಲದೆ ಜೀವನ ಸಾರ್ಥಕತೆಯತ್ತ ಸಾಗುತ್ತದೆ. ಇದು ನನ್ನ ಜೀವನದ ಅನುಭವ ‘ ಎಂದು ಭಾವಪೂರ್ಣವಾಗಿ ನುಡಿದವರು ಮುಳ್ಳೇರಿಯ ಮಂಡಲ, ಚಂದ್ರಗಿರಿ ವಲಯದ, ಮುಂಡೋಳುಮೂಲೆಯ ವೆಂಕಟೇಶ್ವರ ಭಟ್ ಅವರ ಪತ್ನಿ ವಿಜಯಲಕ್ಷ್ಮಿ. ಇವರು ಮೂಲತಃ ಪಾದೆಕಲ್ಲಿನ ಅರಸಳಿಕೆ ನಾರಾಯಣ ಭಟ್ ಮತ್ತು ಶಾರದಾ ದಂಪತಿಗಳ ಪುತ್ರಿ. ಸುಸಂಸ್ಕೃತ ಪಾದೆಕಲ್ಲು ಮನೆತನದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ಉತ್ತಮ ಸಂಸ್ಕಾರವನ್ನು ರೂಢಿಸಿಕೊಂಡವರು. ಗೋಮಾತೆಯ ಒಡನಾಟದಲ್ಲಿ ಬೆಳೆದ

Read More

ವಿದ್ಯಾದಾನ, ಗೋಸೇವೆಗಳಲ್ಲಿ ಧನ್ಯತೆ ಪಡೆದ ಮಾಸದಮಾತೆ – ಭಾಗ್ಯಶ್ರೀ ಪುತ್ತೂರು

  ​ಬದುಕಿನಲ್ಲಿ ವಿದ್ಯೆ ಮತ್ತು ಸಂಸ್ಕಾರ ಒಂದಾದಾಗ ಅಲ್ಲಿ ಸೇವಾ ಮನೋಭಾವ ಜಾಗೃತವಾಗುತ್ತದೆ. ಶ್ರೀಗುರುಗಳ ಮಹತ್ವಾಕಾಂಕ್ಷೆಯ ಯೋಜನೆಯಾದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ (ವಿವಿವಿ) ಪರಂಪರಾ ಗುರುಕುಲದಲ್ಲಿ ಸಂಸ್ಕೃತ ಅಧ್ಯಾಪಿಕೆಯಾಗಿ ಸೇವೆ ಸಲ್ಲಿಸುವ ಜೊತೆಗೆ ಮಾಸದಮಾತೆಯಾಗಿ ಗೋಮಾತೆಯ ಸೇವೆಯನ್ನು ಮಾಡುತ್ತಿರುವ ಭಾಗ್ಯಶ್ರೀ ಪುತ್ತೂರು ಇವರು ಇದಕ್ಕೆ ಮಾದರಿಯಾಗಿದ್ದಾರೆ.   ಉಪ್ಪಿನಂಗಡಿ ಮಂಡಲ ಪುತ್ತೂರು ವಲಯದ ಕೆದಿಲ ವಳಂಕುಮೇರಿ ಮೂಲದವರಾದ ಪ್ರಸ್ತುತ ಪುತ್ತೂರು ತೆಂಕಿಲ ನಿವಾಸಿಗಳಾಗಿರುವ ಲಲಿತಾ ಪರಮೇಶ್ವರ ಭಟ್ ದಂಪತಿಗಳ ಪುತ್ರಿ ಭಾಗ್ಯಶ್ರೀ ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ಮತ್ತು ಗೋವುಗಳ ಒಡನಾಟದಲ್ಲಿ

Read More
‘ ಬಾಳಿನ ಸಂಕಷ್ಟಕ್ಕೆ ಸಾಂತ್ವನದ ತಂಪು ಗುರು ಸೇವೆಯಿಂದ ದೊರಕಿದೆ ‘ ಪಾರ್ವತಿ ಎಸ್ ಹೆಗಡೆ ಶಿರಾಲಿ, ಹೊನ್ನಾವರ

  ​ ​ಜೀವನ ಸಾಗರದಲ್ಲಿ ಕಷ್ಟಗಳ ಅಲೆಗಳು ಅಪ್ಪಳಿಸಿದಾಗ ಮಾನವ ಅಸಹಾಯಕನಾಗುವುದು ಸಹಜ. ಆದರೆ ದಡ ಸೇರಿಸುವ ಗುರುವಿನ ಮೇಲೆ ಅಚಲವಾದ ನಂಬಿಕೆಯಿಟ್ಟವರಿಗೆ ಆ ಅಲೆಗಳೂ ಕೂಡ ಆಶೀರ್ವಾದದ ಮಂತ್ರಾಕ್ಷತೆಯಂತೆ ಕಷ್ಟದ ಪರಂಪರೆಯಿಂದ ಮುಕ್ತಿ ನೀಡುತ್ತದೆ. ಇಂತಹ ಶ್ರದ್ಧೆಯ ಬದುಕನ್ನು ನಡೆಸುತ್ತಿರುವವರು ಪಾರ್ವತಿ ಶ್ರೀಧರ ಹೆಗಡೆ ಶಿರಾಲಿ. ಮೂಲತಃ ಹೊನ್ನಾವರ ಮಂಡಲ ಭವತಾರಿಣಿ ವಲಯದ ಶಿರಾಲಿಯ ‘ಜಯ ಗುರುನಿಲಯದ’, ಪ್ರಸ್ತುತ ಬೆಂಗಳೂರಿನ ಸರ್ವಧಾರಿ ವಲಯ ನಿವಾಸಿಗಳಾಗಿರುವ ಶ್ರೀಧರ ಹೆಗಡೆಯವರ ಪತ್ನಿಯಾದ ಇವರು ಶ್ರೀಮಠದ ಅತ್ಯಂತ ನಿಷ್ಠಾವಂತ ಸೇವಕಿಯಾಗಿ

Read More
*”ಶನಿ ಕಾಡ್ತಾನೆ” ಅಂತ ಹೆದರ್ತೀರಾ?* *ಅವನು ಕಾಡಲ್ಲ… ಕಾಯ್ತಾನೆ!*

  ನೀವು ನೆಟ್ಟ ಗಿಡಕ್ಕೆ ನೀರು ಹಾಕಿ ಕಾಯುವಂತೆ, ಶನಿದೇವ ನಿಮ್ಮ ಕರ್ಮದ ಲೆಕ್ಕ ನೋಡಿ ಕಾಯ್ತಾನೆ. *ಒಳ್ಳೆಯದ್ದು ಮಾಡಿದ್ದರೆ ಒಳ್ಳೆಯದೇ ಆಗುತ್ತೆ.* *ಅವನೇ ನ್ಯಾಯದೇವತೆ. ಅವನೇ ಕರ್ಮದ ದೇವರು.* —   🗓️*16-05-2026 ಶನಿವಾರ – ಶನಿ ಜಯಂತಿ* 📍*ಅಮೃತಧಾರ ಗೋಶಾಲೆ, ಗೋಲೋಕ ಬಜಕೂಡ್ಲು* *ಇದು ಸಾಮಾನ್ಯ ದಿನ ಅಲ್ಲ. ಜ್ಯೇಷ್ಠ ಅಮಾವಾಸ್ಯೆ + ಶನಿವಾರ!* *ಶನಿದೇವ ಹುಟ್ಟಿದ ದಿನವೇ ಶನಿವಾರ ಬಂದಿರುವ ಮಹಾಯೋಗ.* *ಈ ಒಂದು ದಿನ ಅವನ ಪಾದ ಹಿಡಿದರೆ, 7½ ವರ್ಷದ

Read More
ಶ್ರೀರಾಮಚಂದ್ರಾಪುರ ಮಠದ ಐತಿಹಾಸಿಕ ಮಹಾಯಜ್ಞ: ಅಡಿಕೆ ಎಲೆಚುಕ್ಕಿ ರೋಗ ನಿವಾರಣೆಗೆ “ಆವಹಂತೀ ಹವನ” ಮತ್ತು “ಬಿಂದು ಜಯ” ಲೋಕಾರ್ಪಣೆ

  ಮಲೆನಾಡಿನ ಹಸಿರು ತೋಟಗಳನ್ನು ಶೃಂಗರಿಸುವ ಪ್ರಮುಖ ವಾಣಿಜ್ಯ ಬೆಳೆ ಎಂದರೆ ಅಡಿಕೆ. ಅಡಿಕೆ ಬೆಳೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಲಕ್ಷಾಂತರ ಕುಟುಂಬಗಳ ಆರ್ಥಿಕ ಬೆನ್ನೆಲುಬಾಗಿದೆ. ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಧಿ-ವಿಧಾನಗಳಲ್ಲಿ ಅಡಿಕೆಗೆ ಅಗ್ರಸ್ಥಾನವಿದೆ. “ಅಡಿಕೆ ಇದ್ದರೆ ಅದೃಷ್ಟ, ಇಲ್ಲದಿದ್ದರೆ ಕಷ್ಟ” ಎಂಬ ಮಾತು ಕನ್ನಡಿಗರಿಗೆ ಚಿರಪರಿಚಿತ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಪುನೀತ ವೃಕ್ಷವು ಭೀಕರ ಸಂಕಷ್ಟವನ್ನು ಎದುರಿಸುತ್ತಿದೆ.     ‘ಎಲೆಚುಕ್ಕಿ ರೋಗ’

Read More
ಸೋರುವ ಮನೆಗೆ ಸುರಿದ ಶ್ರೀಗುರುಕಾರುಣ್ಯದ ಮಳೆ

​ ​ಬದುಕು ಒಮ್ಮೊಮ್ಮೆ ಅಂಧಕಾರದ ಕೂಪದಲ್ಲಿರುವಾಗ, ದೈವಿಕ ಸಂಕಲ್ಪವೊಂದು ಯಾವ ರೀತಿ ಬೆಳಕಾಗಿ ಬಂದು ಬದುಕಿನ ಕತ್ತಲನ್ನು ದೂರ ಸರಿಸಬಲ್ಲದು ಎನ್ನುವುದಕ್ಕೆ ಮುಳ್ಳೇರಿಯ ಹವ್ಯಕ ಮಂಡಲ ಗುಂಪೆ ವಲಯದ ಶ್ರಾವಣಕೆರೆ ಘಟಕದ ಪುತ್ತಿಗೆ ಕೃಷ್ಣ ಹೆಬ್ಬಾರರ ಕುಟುಂಬವೇ ನಿದರ್ಶನ. ‘ ಅಸಾಧ್ಯವನ್ನು ಸಾಧ್ಯವಾಗಿಸುವ ಗುರುಕರುಣೆಯ ಅನುಗ್ರಹ ‘ ಯಾವ ರೀತಿ ಗುರುಭಕ್ತರಿಗೆ ಒಲಿದು ಬರುತ್ತದೆ ಎನ್ನುವುದನ್ನು ನಾವು ಇಲ್ಲಿ ಕಣ್ಣಾರೆ ಕಾಣಬಹುದು. ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಾನುಗ್ರಹದೊಂದಿಗೆ, ಶಿಷ್ಯಭಕ್ತರ ಸಹಕಾರದ ಫಲವಾಗಿ ಇಂದು ಹೆಬ್ಬಾರರ ಶಿಥಿಲಗೊಂಡಿದ್ದ

Read More
ಗುರುಸೇವೆಯ ಗೃಹಲಕ್ಷ್ಮಿ – ಉಷಾ ಮೋಹನ ಭಾಸ್ಕರ ಹೆಗಡೆ ಬೆಂಗಳೂರು

  ​ಒಂದು ಕುಟುಂಬದ ಸದಸ್ಯರೆಲ್ಲರೂ ಸಂಪೂರ್ಣವಾಗಿ ಶ್ರೀಮಠದ ಸೇವೆಯಲ್ಲಿ ನಿರತರಾದಾಗ ಆ ಮನೆಯಲ್ಲಿ ಒಂದು ಸುಸಂಸ್ಕೃತ ವಾತಾವರಣ ನಿರ್ಮಾಣವಾಗುತ್ತದೆ. ಇಂತಹ ಸೇವಾ ಪರಂಪರೆಯ ಕೇಂದ್ರ ಬಿಂದು ಯಾವಾಗಲೂ ಮನೆಯ ಗೃಹಲಕ್ಷ್ಮಿಯೇ ಆಗಿರುತ್ತಾಳೆ. ಶ್ರೀರಾಮಚಂದ್ರಾಪುರಮಠದ ಶಾಸನತಂತ್ರದ ಅಧ್ಯಕ್ಷರಾಗಿರುವ ಮೋಹನ ಭಾಸ್ಕರ ಹೆಗಡೆ ಅವರ ಪತ್ನಿಯಾಗಿರುವ ಉಷಾ ಹೆಗಡೆಯವರು ಈ ಸಾಲಿಗೆ ಸೇರುವ ಮಾಸದ ಮಾತೆಯರಲ್ಲೊಬ್ಬರು. ಬೆಂಗಳೂರು ದಕ್ಷಿಣ ಮಂಡಲ ಗಿರಿನಗರ ವಲಯದ ಶ್ರೀನಿವಾಸನಗರದಲ್ಲಿರುವ ​ಉಷಾ ಹೆಗಡೆಯವರು ಹೊಸನಗರದ ಸಮೀಪದ ವಡ್ಡಿನಬೈಲಿನ ಗೋಪಾಲಕೃಷ್ಣ ಎಚ್. ಮತ್ತು ಕುಸುಮಾಕ್ಷಿ ದಂಪತಿಗಳ ಪುತ್ರಿ.

Read More
ಹವಿ ಸವಿ ತೋರಣ – ೨೭ ಹಾಸಿಗೆ ಇಪ್ಪಷ್ಟೇ ಕಾಲು ನೀಡುವನಾ…

‘ಹಾಸಿಗೆ ಇಪ್ಪಷ್ಟೇ ಕಾಲು ನೀಡೆಕು ‘ ಹೇಳುವ ಗಾದೆ ನಮಗೆಲ್ಲ ಗೊಂತಿದ್ದು. ನಮ್ಮ ಮನೆಗಳ ಒಂದು ಶಿಸ್ತಿನ ಬದುಕಿನ ಸುರುವಾಣ ಮೆಟ್ಲು ಅದು. ಮದಲಿಂಗೆ ಮನೆಯ ಹಿರಿಯರು ಮಾತಾಡುಗ ಅದೆಷ್ಟು ಗಾದೆಗೊ, ನುಡಿಕಟ್ಟುಗಳ ಹೇಳುಗು. ಈಗ ಹಾಂಗೆ ಮಾತಾಡುವವು ಕಮ್ಮಿಯಾಗಿ ನವಗೆ ಜೀವನದ ಪಾಠಂಗಳ ಹೇಳಿ ಕೊಡುವವು ಕಮ್ಮಿ ಆಯಿದವು ನಾವೀಗ ಹಾಸಿಗೆ ಇಪ್ಪಷ್ಟೇ ಕಾಲು ನೀಡೆಕು ‘ ಹೇಳುವ ವಿಶಯಲ್ಲಿ ಮಾತಾಡುವ°. ಮದಲಿಂಗೆಲ್ಲ ನಮ್ಮ ಸಮಾಜಲ್ಲಿ ತುಂಬಾ ಸರಳವಾಗಿ ಬದ್ಕುವವೇ ಇದ್ದದು. ನವಗೆ ಎಷ್ಟು ಸಂಪಾದನೆ

Read More
ಸ್ತೋತ್ರಾನುಗ್ರಹದ ಭಕ್ತಿರಸ ವೈಭವ – ಶ್ರೀಶಂಕರಪಂಚಮೀ ಉತ್ಸವ

​ಧರ್ಮವೆಂಬ ಸೂರ್ಯನಿಗೆ ಅಧರ್ಮದ ಕಾರ್ಮೋಡಗಳು ಕವಿದು, ಮೈಮನಗಳೆಲ್ಲವೂ ಮಸುಕಾಗಿದ್ದ ಕಾಲವೊಂದಿತ್ತು. ಅದು ಕ್ರಿ.ಶ. ಎಂಟನೇ ಶತಮಾನದ ಪ್ರಥಮ ದಶಕದ ಸಮಯ. ವೇದೋಕ್ತವಾದ ಆಚರಣೆಗಳು ಕೇವಲ ಹೆಸರಿಗಷ್ಟೇ ಉಳಿದು, ಸಮಾಜವು ತನ್ನ ಮೂಲ ಸಂಸ್ಕಾರಗಳಿಂದ ವಿಮುಖವಾಗಿ ವೈದಿಕ ಮಾರ್ಗದಿಂದ ದೂರ ಸರಿಯುತ್ತಿತ್ತು. ಇಂತಹ ಕತ್ತಲೆಯ ಸಮಯದಲ್ಲಿ, ಧರ್ಮದ ಪುನರುತ್ಥಾನಕ್ಕಾಗಿ ಸಹಜವಾದ ಜೀವಂತ ಹಂಬಲವೊಂದು ಸಮಾಜದಲ್ಲಿ ಮೊಳಕೆಯೊಡೆಯಿತು. “ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ” ಎಂಬ ಪರಮಾತ್ಮನ ಸಂಕಲ್ಪ ಮತ್ತೊಮ್ಮೆ ಕಾರ್ಯರೂಪಕ್ಕೆ ಬರಲು ವೇದಿಕೆ ಸಿದ್ಧವಾಗಿತ್ತು. ಭಾರತದ ಬಾಂದಳದಲ್ಲಿ ದಿವ್ಯ ಪ್ರಭೆಯೊಂದರ

Read More
ಸಾರ್ಥಕ ಬದುಕಿನ ಆಶಾಕಿರಣ ಗುರುಸೇವೆ – ಜ್ಯೋತಿ ಪ್ರಕಾಶ್ ಭಟ್ ,ಮುರುಡೇಶ್ವರ

    ” ಗುರುಗಳ ಮಾರ್ಗದರ್ಶನ ಹಾಗೂ ಗೋಸೇವೆಯಲ್ಲಿ ತೊಡಗಿಸಿಕೊಂಡವರಿಗೆ ಬದುಕಿನಲ್ಲಿ ನೆಮ್ಮದಿ , ಶಾಂತಿ ಸಹಜವಾಗಿ ದೊರಕುತ್ತದೆ. ಸಾರ್ಥಕ ಬದುಕಿಗೆ ದಿವ್ಯಸಂಜೀವಿನಿ ಗುರುಸೇವೆ ” ಎನ್ನುವವರು ಹೊನ್ನಾವರ ಮಂಡಲ, ಭಟ್ಕಳ ವಲಯದ ಮುರುಡೇಶ್ವರದ ‘ ಕಲ್ಪತರು ‘ ನಿವಾಸಿಗಳಾಗಿರುವ ಪ್ರಕಾಶ್ ಆರ್. ಭಟ್ ಅವರ ಪತ್ನಿ ಜ್ಯೋತಿ ಪ್ರಕಾಶ್ ಭಟ್.   ಕುಂದಾಪುರದ ಚಂದ್ರಶೇಖರ ಉಡುಪ, ಸುಶೀಲಾ ದಂಪತಿಗಳ ಪುತ್ರಿಯಾದ ಇವರು ಬಾಲ್ಯದಿಂದಲೇ ಹಸುಗಳ ಒಡನಾಟದಲ್ಲಿ ಬೆಳೆದವರು.   ‘ ಗೋಮಾತೆಯ ಒಡನಾಟ ಮನಸ್ಸಿಗೆ ತುಂಬಾ

Read More
ಹವಿ ಸವಿ ತೋರಣ – ೨೬ ವಿಷು ಕಣಿಯ ಸಂಭ್ರಮ

ಹಬ್ಬಂಗೊ, ಆಯನಂಗೊ, ವ್ರತಂಗೊ, ನಮ್ಮ ಹಿರಿಯರು ನಮಗೆ ಬಳುವಳಿಯಾಗಿ ಕೊಟ್ಟ ಕೆಲವು ಆಚರಣೆಗೊ ಇದೆಲ್ಲವೂ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗಂಗೊ. ತಲೆತಲಾಂತರಂದ ನಮ್ಮ ಹಿರಿಯರು ನಡೆಸಿಕೊಂಡು ಬಂದ ಕೆಲವು ಸಂಭ್ರಮದ ಆಚರಣೆಗೊ ಮಂಗಳಕರ ನಿಯಮಂಗೊ ಇದೆಲ್ಲವನ್ನು ನಾವು ತುಂಬಾ ಪೂಜ್ಯ ಭಾವನೆಯಿಂದ ಕಾಣ್ತು. ಅಷ್ಟೇ ಶ್ರದ್ಧೆoದ ಆಚರಿಸುತ್ತಾ ಇದ್ದು. ‘ ಬದುಕಿಲ್ಲಿ ಸುಖ – ದುಃಖ, ಏಳು – ಬೀಳು ತುಂಬಾ ಸಹಜವಾಗಿ ಇಪ್ಪದು. ಅದರ ನಾವು ಒಂದೇ ರೀತಿಯಲ್ಲಿ ಸ್ವೀಕರಿಸೆಕು ‘ ಹೇಳುವ ಸಂದೇಶ ಹೊತ್ತು

Read More
ಸಂಸ್ಕಾರದ ಹಾದಿಯಲ್ಲಿ ಸೇವೆಯ ಬೆಳಕು: ವೇದಾವತಿ ಗಾಂಧೀನಗರ, ಸಾಗರ

  ​ ಸಾಗರ ಮಂಡಲ ಪೂರ್ವ ವಲಯದ ಗಾಂಧಿನಗರ ನಿವಾಸಿಯಾಗಿರುವ ವೇದಾವತಿ ಅವರು, ವೃತ್ತಿಯಿಂದ ಅಧ್ಯಾಪಿಕೆಯಾಗಿ ನೂರಾರು ಮಕ್ಕಳಿಗೆ ಜ್ಞಾನದ ಬೆಳಕನ್ನು ನೀಡಿದವರು. ಪ್ರಸ್ತುತ ನಿವೃತ್ತ ಜೀವನದ ಪ್ರತಿ ಕ್ಷಣವನ್ನು ಅವರು ಶ್ರೀರಾಮಚಂದ್ರಾಪುರ ಮಠದ ವಿವಿಧ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಗೋಸೇವೆ ಮತ್ತು ಶ್ರೀಮಠದ ಸೇವೆಯ ಮೂಲಕ ನೆಮ್ಮದಿಯನ್ನು ಕಂಡುಕೊಂಡಿದ್ದಾರೆ.   ​ಆವಿನಹಳ್ಳಿಯ ದುರ್ಗಾ ಭಟ್ ಮತ್ತು ಜಯಲಕ್ಷ್ಮಿ ಅಮ್ಮ ದಂಪತಿಗಳ ಪುತ್ರಿಯಾಗಿ ಜನಿಸಿದ ವೇದಾವತಿ ಅವರು, ಸಾಗರ ಗಾಂಧೀನಗರದ ಬಿ.ಕೆ. ರಾಮಣ್ಣ ಅವರ ಪತ್ನಿ. ಚಿಕ್ಕಂದಿನಿಂದಲೇ

Read More
ಬಾಳಿಗೆ ಸಂಜೀವಿನಿಯಾದ ಶ್ರೀಗುರು ಅನುಗ್ರಹ – ಗೌರಿ ರಾಮ ಭಟ್, ಮುಲಾರು, ಕಲ್ಲಡ್ಕ

  ‘ ​ಬದುಕಿನ ಹಾದಿಯಲ್ಲಿ ಎದುರಾಗುವ ಕಷ್ಟ-ಕಾರ್ಪಣ್ಯಗಳ ಸುಳಿಯಿಂದ ಪಾರಾಗಲು ಭಗವಂತನ ನಾಮಸ್ಮರಣೆ ಎಷ್ಟು ಮುಖ್ಯವೋ, ಗುರುವಿನ ಅನುಗ್ರಹವೂ ಅಷ್ಟೇ ಅಮೂಲ್ಯ ಎಂಬುದು ಉಪ್ಪಿನಂಗಡಿ ಮಂಡಲ ಮಾಣಿ ವಲಯದ ಕಡೆಂಗೋಡ್ಲು ಮೂಲದ, ಪ್ರಸ್ತುತ ಕಲ್ಲಡ್ಕದ ಮುಲಾರು ‘ಶಿವಾನುಗ್ರಹ’ ನಿವಾಸಿಗಳಾಗಿರುವ ಗೌರಿ ರಾಮ ಭಟ್ ಅವರ ಜೀವನದಲ್ಲಿ ಅನುಭವಕ್ಕೆ ಬಂದ ಸತ್ಯ ಜಲ್ಲಿ ಮೂಲದ ಸವಣಾಲು ಸಮೀಪದ ಕೋಡಿಮೊಗೆರು ತಿಮ್ಮಣ್ಣ ಭಟ್ ಮತ್ತು ದೇವಕಿ ಅಮ್ಮ ದಂಪತಿಗಳ ಸುಪುತ್ರಿಯಾಗಿ ಜನಿಸಿದ ಇವರು, ಕಲ್ಲಡ್ಕದ ರಾಮ ಭಟ್ ಅವರ ಪತ್ನಿ.

Read More
ಹವಿ ಸವಿ ತೋರಣ – ೨೫ ನಮ್ಮ ಸಂಸ್ಕೃತಿ ಒಳುಶುವ°

  ನಮ್ಮ ಸಂಸ್ಕೃತಿ ಹೇಳಿದರೆ ಸಮಾಜದ ಆತ್ಮ ಹೇಳಿ ಹೇಳ್ಲಕ್ಕು. ಹಿರಿಯರಿಂದ ನಮಗೆ ಬಳುವಳಿಯಾಗಿ ಬಂದ ಹಳೆಯ ಆಚರಣೆಗೂ, ಕೆಲವು ನಂಬಿಕೆಗೊ, ರೂಢಿಲಿ ಬಂದ ಜೀವನದ ಸಂಸ್ಕಾರಂಗೊ, ಭಾಶೆ, ಕಲೆ ಇದೆಲ್ಲವನ್ನು ಸೇರಿಸಿ ನಾವು ಸಂಸ್ಕೃತಿ ಹೇಳುದು. ನಮ್ಮ ವ್ಯಕ್ತಿತ್ವ ರೂಪಿಸುದು ಈ ಸಂಸ್ಕೃತಿ. ನಮ್ಮ ಜೀವನಕ್ಕೆ ದಿಕ್ಕು ತೋರಿಸುವ ಸಂಸ್ಕಾರಂಗೋ ಈ ಸಂಸ್ಕೃತಿಯ ಒಳ ಇದ್ದು. ಸಂಸ್ಕೃತಿ ಹೇಳಿದರೆ ಒಂದು ಮರದ ಬೇರಿನ ಹಾಂಗೆ. ನಮ್ಮ ಹಿರಿಯರು ತುಂಬಾ ಕಷ್ಟಪಟ್ಟು ಒಳ್ಳೆಯ ಸಂಸ್ಕಾರಂಗಳ, ಒಳ್ಳೆಯ ಚಿಂತನೆಗಳ

Read More
ಸೇವಾಪಥದ ಸುಸಂಸ್ಕೃತ ಹೆಜ್ಜೆಗಳು: ಸೌಂದರ್ಯ ಕೊಲ್ಲಂಪಾರೆ 

ಸುಸಂಸ್ಕೃತ ಕುಟುಂಬದಲ್ಲಿ ಜನಿಸಿ, ಆಧುನಿಕ ಶಿಕ್ಷಣವನ್ನು ಪಡೆದು, ವೃತ್ತಿಕ್ಷೇತ್ರದಲ್ಲಿ ಸಕ್ರಿಯವಾಗಿ ಸಾಧನೆ ಮಾಡುತ್ತಿರುವಾಗಲೂ ತಮ್ಮ ಮೂಲ ಬೇರುಗಳನ್ನು ಮರೆಯದೆ ಸಂಪ್ರದಾಯ ಮತ್ತು ಸೇವೆಯಲ್ಲಿ ನೆಮ್ಮದಿ ಕಾಣುವ ವ್ಯಕ್ತಿಗಳು ಅಪರೂಪ. ಇಂತಹ ಅಪರೂಪದ ಸಾಲಿಗೆ ಸೇರಿದವರು ಸೌಂದರ್ಯ ಕೊಲ್ಲಂಪಾರೆ. ಮುಳ್ಳೇರಿಯ ಮಂಡಲ ನೀರ್ಚಾಲು ವಲಯದ ಉಪ್ಪಿನೆ ನಿವಾಸಿಗಳಾಗಿರುವ ಡಾ. ಗೌತಮ್ ಅವರ ಪತ್ನಿ ಸೌಂದರ್ಯ, ಕೊಲ್ಲಂಪಾರೆಯ ನಾರಾಯಣ ಭಟ್ ಮತ್ತು ಪಾರ್ವತಿ ದಂಪತಿಗಳ ಪುತ್ರಿ.   ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಬಾಲ್ಯದಿಂದಲೇ

Read More
ಹವಿ ಸವಿ ತೋರಣ – ೨೪ ನೆಂಟ್ರಮನೆಯ ಪ್ರೀತಿ ಸೆಲೆ

  ಮಾರ್ಚ್ ತಿಂಗಳು ಮುಗುದು ಎಪ್ರಿಲ್ ತಿಂಗಳು ಬತ್ತಾಯಿದ್ದು ಹೇಳಿದರೆ ಸಾಕು, ಶಾಲೆಗೆ ಹೋಪ ಮಕ್ಕಳ ಮನಸ್ಸು ಅಜ್ಜನ ಮನೆಯ ಕಡೆoಗೆ ಓಡ್ಲೆ ಸುರುವಾವುತ್ತು. ಶಾಲೆಯ ಪರೀಕ್ಷೆ ಮುಗಿದು ದೊಡ್ಡ ರಜೆ ಸುರುವಾದರೆ, ಮಾರಾಪು ಕಟ್ಟಿಂಡು ಬಸ್ಸು ಹತ್ತಿ ಅಜ್ಜನ ಮನೆಗೆ ಹೋಪ ಆ ಸಂಭ್ರಮ ಇದ್ದಲ್ಲದಾ, ಅದು ಈಗಾಣ ಯೇವದೇ ಪೇಟೆಯ ದೊಡ್ಡ ದೊಡ್ಡ ವಾಣಿಜ್ಯ ಮಳಿಗೆಗಳಲ್ಲಿ ತಿರುಗಿರೂ ಸಿಕ್ಕ . ನಮ್ಮ ಬಾಲ್ಯದ ಚಿನ್ನದ ಹಾಂಗಿದ್ದ ದಿನಂಗೊ ಅದೆಲ್ಲ. ಆ ದಿನಂಗೊ ಬರೀ ಅಜ್ಜನ

Read More
‘ ​ಗುರುಕೃಪೆಯ ಅಮೃತಧಾರೆಗೆ ಸಾಕ್ಷಿಯಾದ ಬದುಕು ನಮ್ಮದು’ – ಸೀತಾರತ್ನ ಗಿರಿನಗರ

  ” ​ಜೀವನವೆಂಬ ಸುಖ – ದುಃಖಗಳ ಅವಿರತ ಪಯಣದಲ್ಲಿ ಶ್ರಿಗುರುಚರಣಗಳನ್ನು ಅಚಲವಾಗಿ ನಂಬಿದವರು ಶ್ರೀಗುರುಕೃಪೆಯ ಪ್ರತ್ಯಕ್ಷ ಅನುಭವವನ್ನು ಪಡೆಯುತ್ತಾರೆ ಎಂಬುದಕ್ಕೆ ನಾವೇ ಸಾಕ್ಷಿ ” ಎನ್ನುತ್ತಾರೆ ಬೆಂಗಳೂರು ದಕ್ಷಿಣ ಮಂಡಲ ಗಿರಿನಗರ ವಲಯದಲ್ಲಿ ಗುರಿಕ್ಕಾರರಾಗಿ ಸೇವೆ ಸಲ್ಲಿಸುತ್ತಿರುವ ವಿಘ್ನೇಶ್ ಬಳ್ಳಮಜಲು ಅವರ ಪತ್ನಿ ಸೀತಾರತ್ನ. ಕನ್ಯಾನ ಪಿಲಿಂಗುಳಿ ಮೂಲದ ಪೆರಾಜೆ ಗಂಗಾರಾಮ ನಿವಾಸದ ಗಣನಾಥ ಭಟ್ ಮತ್ತು ಸರಸ್ವತಿ ಜಿ. ಭಟ್ ಅವರ ಸುಪುತ್ರಿಯಾಗಿ ಜನಿಸಿದ ಇವರು, ದಕ್ಷಿಣ ಕನ್ನಡ ಮೂಲದ ವಿಘ್ನೇಶ್ ಬಳ್ಳಮಜಲು ಅವರನ್ನು

Read More
ಹವಿ ಸವಿ ತೋರಣ – ೨೩ ‘ ಪರಾಭವ’ ಸಂವತ್ಸರ ತರಲಿ ಸದಾ ವಿಜಯ

​ ​ಮಾವಿನ ಬೇವಿನ ತೋರಣ ಕಟ್ಟು ಬೇವು ಬೆಲ್ಲಗಳನು ಒಟ್ಟಿಗೆ ಕುಟ್ಟು ಜೀವನವೆಲ್ಲಾ ಬೇವು ಬೆಲ್ಲ ಎರಡೂ ಸವಿವವನೇ ಕಲಿ ಮಲ್ಲ.. ​ ರಾಷ್ಟ್ರಕವಿ ಕುವೆಂಪು ಅವರ ಚೆಂದದ ಸಾಲುಗಳ ನೆಂಪು ಮಾಡುವ ಹಾಂಗೆ ಮತ್ತೊಂದು ಯುಗಾದಿ ಹಬ್ಬ ಸಂಭ್ರಮದೊಟ್ಟಿಂಗೆ ಬಂತೇ ಬಂತಿದಾ..! ​ಚಾಂದ್ರಮಾನ ಪದ್ಧತಿಯ ಪಂಚಾಂಗದ ಪ್ರಕಾರ ಚೈತ್ರ ಶುದ್ಧ ಪ್ರತಿಪದೆಯ ನಾವು ಹೊಸ ವರ್ಷ ಹೇಳಿ ಆಚರಿಸುತ್ತು. ಯುಗ ಯುಗಂಗಳ ಮೊದಲು ಬ್ರಹ್ಮದೇವರು ಸೃಷ್ಟಿ ಕಾರ್ಯ ಸುರು ಮಾಡಿದ ದಿನ ಇದು ಹೇಳಿ ಸಣ್ಣಾದಿಪ್ಪಗ

Read More
ಶ್ರೀಗುರು ​ಸೇವೆಯೇ ಬದುಕಿನ ಸೌಭಾಗ್ಯ: ವಿಶಾಲಾಕ್ಷಿ ರಾಮಕೃಷ್ಣ ಹೆಗಡೆ ಹರಿಕೇರಿ

​ ” ​ಜೀವನದ ಸಾರ್ಥಕತೆ ಇರುವುದು ಸೇವೆಯಲ್ಲಿ. ಅದರಲ್ಲೂ ಶ್ರೀಗುರು ಸೇವೆ ಹಾಗೂ ಗೋ ಸೇವೆಯಿಂದ ಬದುಕಿನಲ್ಲಿ ನೆಮ್ಮದಿ ಶಾಂತಿ ನೆಲೆಸುತ್ತದೆ. ಇಂತಹ ಸೇವೆಯಲ್ಲಿ ತೊಡಗಿಸಿಕೊಳ್ಳುವುದಕ್ಕೂ ದೇವರ ಅನುಗ್ರಹ ಬೇಕು ” ಎಂದವರು ಹೊನ್ನಾವರ ಸಮೀಪದ ಹರಿಕೇರಿಯ ಪ್ರಸ್ತುತ ಹೊಸಪೇಟೆ ನಿವಾಸಿಗಳಾಗಿರುವ ರಾಮಕೃಷ್ಣ ಹೆಗಡೆಯವರ ಪತ್ನಿ ವಿಶಾಲಾಕ್ಷಿ ಹೆಗಡೆ. ಹೊನ್ನಾವರದ ಖರ್ವಾ ಗ್ರಾಮದ ಗಣಪತಿ ಹೆಗಡೆ ಮತ್ತು ಸುಭದ್ರಾ ಹೆಗಡೆ ದಂಪತಿಗಳ ಪುತ್ರಿ ವಿಶಾಲಾಕ್ಷಿಯವರು ಬಾಲ್ಯದಿಂದಲೇ ಹಸುಗಳ ಒಡನಾಟದಲ್ಲಿ ಬೆಳೆದವರು. ಪತಿಯ ಮನೆಯಲ್ಲಿಯೂ ಸುಮಾರು ೧೫-೨೦ ಹಸುಗಳನ್ನು

Read More