ಗೋಶಾಲಾ
ಪೆರಾಜೆ ಅಮೃತಾಧಾರ ಗೋಶಾಲೆಯಲ್ಲಿ ದೀಪಾವಳಿ ಆಚರಣೆ
ಪೆರಾಜೆ: ಮಾಣಿ ಪೆರಾಜೆ ಅಮೃತಾಧಾರ ಗೋಶಾಲೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗೋ ಪೂಜಾ ಕಾರ್ಯಕ್ರಮ ಶ್ರೀರಾಮಚಂದ್ರಾಪುರಮಠದ ಅರ್ಚಕರಾದ ವಿಘ್ನೇಶ್ವರ ಭಟ್ ಅವರ ನೇತೃತ್ವದಲ್ಲಿ ಜರಗಿತು. ಗೋಮಾತೆಗೆ ವಿಶೇಷ ಗೋಪೂಜೆ,ಗೋಗ್ರಾಸ ಸೇವೆಗಳು ಜರಗಿತು. ಗೋಶಾಲೆಯ ಸೇವಾಸಮಿತಿಯ ಅಧ್ಯಕ್ಷರಾದ ಹಾರಕರೆ ನಾರಾಯಣ ಭಟ್, ಕಾರ್ಯದರ್ಶಿಗಳಾದ ಬಂಗಾರಡ್ಕ ಜನಾರ್ಧನ ಭಟ್, ಸಮಿತಿಯ ಸದಸ್ಯರಾದ ಮುದ್ರಜೆ ಗೋವಿಂದ ಭಟ್ ಮತ್ತು ಉಪ್ಪಿನಂಗಡಿ ಮಂಡಲದ ಸಹಾಯ ವಿಭಾಗದ ಮುಖ್ಯಸ್ಥರಾದ ಜಯಾನಂದ ಕೆ., ಪುತ್ತೂರಿನ ರಾಘವೇಂದ್ರ ಸ್ಟೋರ್ ನ ಮಾಲಕರಾದ ಸತ್ಯಶಂಕರ ಭಟ್ ಸಾಮೆತ್ತಡ್ಕ,
Read Moreಮಾಲೂರಿನಲ್ಲಿ ದೀಪಾವಳಿ ಗೋಪೂಜೆ
ಮಾಲೂರು: ಗಂಗಾಪುರದ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ದೀಪಾವಳಿ ಗೋಪೂಜೆ ಕಾರ್ಯಕ್ರಮ ವೇ.ಮೂ. ಗೋಪಾಲಕೃಷ್ಣ ಕಾಕತ್ಕರ್ ಅವರ ನೇತೃತ್ವದಲ್ಲಿ ವಿಜ್ರಂಭಣೆಯಿಂದ ನಡೆಸಲಾಯಿತು. ಬೆಳಗ್ಗೆ ಶ್ರೀ ಸಿದ್ಧಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ ಸಹಿತ ಪೂಜೆ ನಡೆಯಿತು. ನಂತರ ಸುಮಾರು ಇನ್ನೂರಕ್ಕೂ ಹೆಚ್ಚು ಗೋಭಕ್ತರ ಸಮ್ಮುಖದಲ್ಲಿ ದೀಪಾವಳಿ ಗೋಪೂಜೆ ನಡೆಯಿತು. ಮೂವತ್ಮೂರು ಕೋಟಿ ದೇವತೆಗಳ ಆವಾಸಸ್ಥಾನ ಸವತ್ಸ ಗೋವನ್ನು ಅಲಂಕೃತ ಮಂಟಪದಲ್ಲಿ ಪೂಜಿಸಲಾಯಿತು. ಗೋಪೂಜೆಯ ಮಹತ್ವವನ್ನು ಗೋಪಾಲಕೃಷ್ಣ ಕಾಕತ್ಕರ್ ವಿವರಿಸಿದರು. ಗೋಆಶ್ರಮದ ಸಮಸ್ತ ಗೋವುಗಳಿಗೆ ಸೇವಾಕರ್ತರಾದ ಪರ್ತಜೆ
Read Moreಗೋವಿಗಾಗಿ ಮೇವು – ಮೇವಿಗಾಗಿ ನಾವು
ಬಜಕೂಡ್ಲು: ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವುಗಳಿಗಾಗಿ ಹರಿಹರಭಜನಾಮಂದಿರ ಮಾಡತ್ತಡ್ಕದ ಪರಿಸರದಲ್ಲಿ ಹಿರಿಯರಾದ ಮಿಂಚಿನಡ್ಕ ಗೋವಿಂದ ಭಟ್ಟರ ನೇತೃತ್ವದಲ್ಲಿ ಅ.೨೭ರಂದು ಮೂರನೆಯ ಗೋವಿಗೆಮೇವು ಕಾರ್ಯಕ್ರಮ ನಡೆಯಿತು. ಹರಿಹರ ಭಜನಾ ಸದಸ್ಯರರಾದ ಮಾಡತಡ್ಕ ಪ್ರವೀಣ ಕುಮಾರ ಯಂ, ಸಂತೋಷ ಆಣಬೈಲು, ಶಿವಪ್ರಸಾದ ಎ, ವೇಣುಗೋಪಾಲ ಮತ್ತು ವಾಹನ ಚಾಲಕ ಸತೀಶ ಯಂ. ಕಾಮದುಘಾ ಕಾರ್ಯದರ್ಶಿ ಡಾ.ವೈ.ವಿ.ಕೃಷ್ಣಮೂರ್ತಿ, ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಸಹಾಯ ಪ್ರಧಾನ ಮಹೇಶ ಸರಳಿ, ಪೆರಡಾಲ ವಲಯ ಅಧ್ಯಕ್ಷ ಪದ್ಮರಾಜ ಪಟ್ಟಾಜೆ, ಉಪಾಧ್ಯಕ್ಷ
Read Moreಎಸ್ಎಪಿ ಲ್ಯಾಬ್ನ ಸಿಎಸ್ ಆರ್ ಯೋಜನೆಯ ಮೂಲಕ ಪಶು ಆಹಾರ
ಮಾಲೂರು: ಬೆಂಗಳೂರು ಎಸ್ಎಪಿ ಲ್ಯಾಬ್ನ ತಂತ್ರಜ್ಞರು ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿಯಡಿಯಲ್ಲಿ ಶ್ರೀರಾಘವೇಂದ್ರ ಗೋಆಶ್ರಮಕ್ಕೆ 1.25 ಲಕ್ಷಕ್ಕೂ ಅಧಿಕ ಮೊತ್ತದ ಪಶು ಆಹಾರವನ್ನು ನೀಡಿದರು. ಕಾಮದುಘಾ ಟ್ರಸ್ಟ್ ಅಧ್ಯಕ್ಷ ಡಾ. ವೈ. ವಿ. ಕೃಷ್ಣಮೂರ್ತಿ ಮಾತನಾಡಿ ಭಾರತೀಯ ಗೋ ತಳಿಗಳನ್ನು ಉಳಿಸುವ ಕಾರ್ಯ ನಮ್ಮೆಲ್ಲರಿಂದ ನಡೆಯಬೇಕಾಗಿದೆ. ದೇಶೀಯ ತಳಿಯಲ್ಲಿ ಸಿಗುವ ಎ2 ಹಾಲಿನಲ್ಲಿ ಔಷಧೀಯ ಗುಣಗಳಿದ್ದು, ಸೇವನೆಯಿಂದ ಆರೋಗ್ಯಕ್ಕೆ ಉತ್ತಮ ಎಂದರು. ಸುಮಾರು 40ಕ್ಕೂ ಅಧಿಕ ತಂತ್ರಜ್ಞರು ಗೋಶಾಲೆಯ ಸ್ವಚ್ಛತೆ, ಆವರಣದ ಕಳೆ ಕೀಳುವ ಶ್ರಮ
Read More