|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಮಾತು~ಮುತ್ತು : ಹೊಗಳಿಕೆಯೆಂಬ ಹೊನ್ನಶೂಲ – ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

ಒಮ್ಮೆ ಒಂದು ಗುಂಪಿನಲ್ಲಿದ್ದ ಸೊಳ್ಳೆಯೊಂದು ಬೆಳಗ್ಗೆ ಏಕಾಂಗಿಯಾಗಿ ಹಾರಾಟವನ್ನು ಆರಂಭಿಸುತ್ತದೆ. ಆ ಸೊಳ್ಳೆಯನ್ನು ಕಂಡ ಜನರೆಲ್ಲ ಚಪ್ಪಾಳೆ ತಟ್ಟುತ್ತಿದ್ದರು. ಆಗ ಆ ಸೊಳ್ಳೆ ಅದನ್ನು ತನಗೆ ಸಿಕ್ಕ ಗೌರವ ಎಂದು ಸಂತೋಷಗೊಂಡು ಮತ್ತಷ್ಟು ಹಾರಾಟ ನಡೆಸಿ ಹಿಂತಿರುಗಿ ಬಂದಾಗ ಗುಂಪಿನಲ್ಲಿದ್ದ ಸೊಳ್ಳೆಗಳೆಲ್ಲ ಸಂತೋಷದಿಂದ ಮಂದಹಾಸ ಬೀರುತ್ತಿರುವ ಸೊಳ್ಳೆಯನ್ನು ಕಂಡು- “ಹೇಗಾಯಿತು ಹಾರಾಟ? ಇದೇನು ಇಷ್ಟು ಸಂತೋಷವಾಗಿರುವೆ?” ಎಂದು ಕೇಳುತ್ತವೆ. ಆಗ ಸೊಳ್ಳೆ- “ನಾನು ಹೋದಲ್ಲೆಲ್ಲ ಜನರು ಕೈ ಚಪ್ಪಾಳೆ ತಟ್ಟಿ ಸಂತೋಷದಿಂದ ಸ್ವಾಗತಿಸಿದರು” ಎನ್ನುತ್ತದೆ.   ಜೀವನದಲ್ಲಿಯೂ

Read More

ಮಾತು~ಮುತ್ತು : ಬೇಕು ಸಾಕಾದಾಗ ಬದುಕು ಹಸನು – ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

ಒಂದು ದಿನ ಒಬ್ಬ ವ್ಯಕ್ತಿ ಒಂದು ಬಟ್ಟೆ ಅಂಗಡಿಗೆ ಬರುತ್ತಾನೆ. ಅದು ದೀಪಾವಳಿಯ ಸಮಯ. ಅವನಿಗೆ ಒಂದು ಸೀರೆ ತೆಗೆದುಕೊಳ್ಳಬೇಕಿತ್ತು. ಅಂಗಡಿಯಲ್ಲಿರುವ ಎಲ್ಲ ಸೀರೆಗಳನ್ನು ನೋಡಿ ಕೊನೆಗೆ ಒಂದು ಸೀರೆ ಆಯ್ಕೆ ಮಾಡಿಕೊಳ್ಳುತ್ತಾನೆ. ಅದಕ್ಕೆ ಬೆಲೆ ಎಷ್ಟು ಎಂದು ಕೇಳಿದಾಗ, ಅಂಗಡಿಯವನು- “ಎರಡು ಸಾವಿರ ರೂಪಾಯಿ” ಎಂದು ಹೇಳುತ್ತಾನೆ.   ಆಗ ಇವನು- “ಒಂದು ಸಾವಿರಕ್ಕೆ ಕೊಡುತ್ತೀರಾ?” ಎಂದು ಕೇಳುತ್ತಾನೆ.   ಅಂಗಡಿಯವನು ಇವನು ಈ ದಿನದ ಮೊದಲ ಗಿರಾಕಿ ಎಂದು ಆಲೋಚಿಸಿ ಆಯ್ತು ಎನ್ನುತ್ತಾನೆ. ಆಗ

Read More

ಮಾತು~ಮುತ್ತು : ಅರ್ಥವಿರಲಿ ಮಾಡುವುದರಲ್ಲಿ – ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

  ಅದೊಂದು ಆಶ್ರಮ. ಆ ಆಶ್ರಮದಲ್ಲಿ ಗುರುಗಳು, ಶಿಷ್ಯರು ಎಲ್ಲರೂ ಇದ್ದರು. ಪ್ರತಿದಿನ ಗುರುಗಳು ಶಿಷ್ಯರಿಗೆ ಧ್ಯಾನ ಹೇಳಿಕೊಡುತ್ತಿದ್ದರು. ಹೀಗೆ ಧ್ಯಾನ ಮಾಡುತ್ತಿರುವಾಗ ಆಶ್ರಮದಲ್ಲಿರುವ ಒಂದು ಬೆಕ್ಕು ಅಲ್ಲಿ ಆಟವಾಡುತ್ತಾ, ನೆಗೆಯುತ್ತಾ ಶಿಷ್ಯರ ಮತ್ತು ಗುರುಗಳ ತೊಡೆಯ ಮೇಲೆ ಕೂರುತ್ತಾ ಧ್ಯಾನಕ್ಕೆ ಭಂಗ ಮಾಡುತ್ತಿತ್ತು. ಆಗ ಗುರುಗಳು ಧ್ಯಾನದ ಸಮಯದಲ್ಲಿ ಬೆಕ್ಕನ್ನು ಒಂದು ಕಡೆ ಕಟ್ಟಿ ಹಾಕುವಂತೆ ಶಿಷ್ಯರಿಗೆ ಹೇಳುತ್ತಿದ್ದರು.   ಹೀಗೆ ಎಷ್ಟೋ ಕಾಲವಾಯಿತು. ಆ ಗುರುಗಳು ಮುಕ್ತರಾಗಿ ಮತ್ತೊಬ್ಬ ಗುರುಗಳು ಬಂದರು. ಆಶ್ರಮದಲ್ಲಿ ಎಂದಿನಂತೆ

Read More
ಮಾತು~ಮುತ್ತು : ಸ್ವರ್ಗ ಸುಖ – ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

  ಒಂದು ಊರಿನಲ್ಲಿ ಇಬ್ಬರು ಸ್ನೇಹಿತರಿದ್ದರು. ಒಬ್ಬ ಜನೋಪಕಾರಿಯಾಗಿ ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದರೆ ಮತ್ತೊಬ್ಬ ಪರರ ಕಂಟಕನಾಗಿ ದುಷ್ಟ ಎನಿಸಿಕೊಂಡಿದ್ದ. ಒಳ್ಳೆಯ ವ್ಯಕ್ತಿ ತನ್ನ ಸ್ನೇಹಿತನ ಕೆಟ್ಟತನವನ್ನು ಕಡಿಮೆ ಮಾಡಲು ಇನ್ನಿಲ್ಲದಂತೆ ಶ್ರಮವಹಿಸಿದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಈ ಒಳ್ಳೆಯ ವ್ಯಕ್ತಿ ಅನಂತರ ಸತ್ತು ಹೋಗುತ್ತಾನೆ. ತನ್ನ ಒಳ್ಳೆಯ ಕೆಲಸಗಳಿಂದ ದೇವಲೋಕದಲ್ಲಿ ದೇವತ್ವದ ಸ್ಥಾನ ದೊರೆಯುತ್ತದೆ. ಹೀಗಿರುವಾಗ ಒಮ್ಮೆ ಅವನಿಗೆ ಭೂಲೋಕದಲ್ಲಿದ್ದ ಅವನ ಸ್ನೇಹಿತನ ನೆನಪಾಗುತ್ತದೆ. ಅವನನ್ನೂ ಸ್ವರ್ಗಕ್ಕೆ ಕರೆದುಕೊಂಡ ಬರಬೇಕೆಂದು ಆಲೋಚಿಸಿ ಅವನನ್ನು ದೇವಲೋಕದಲ್ಲಿ, ಭೂಲೋಕದಲ್ಲಿ ಎಲ್ಲ

Read More
ಮಾತು~ಮುತ್ತು : ಮಹಾಗುರು ಅಷ್ಟಾವಕ್ರ – ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

ಒಮ್ಮೆ ಜನಕ ಮಹಾರಾಜ ಸಾಧು-ಸಂತರು, ವಿದ್ವಾನ್ ಮಣಿಗಳೇ ತುಂಬಿದ್ದ ಒಂದು ಸಭೆಯಲ್ಲಿ ಒಂದು ಪ್ರಶ್ನೆ ಕೇಳುತ್ತಾನೆ- “ಯಾರು ಅತ್ಯಲ್ಪ ಸಮಯದಲ್ಲಿ ನನಗೆ ಆತ್ಮಜ್ಞಾನವನ್ನು ನೀಡಿ ಜೀವನ ಸಾಕ್ಷಾತ್ಕಾರವನ್ನು ಮಾಡಬಲ್ಲಿರಿ?” ಎಂದು. ಯಾರೂ ಮಾತನಾಡುವುದಿಲ್ಲ.   ಆಗ ಅಷ್ಟಾವಕ್ರನೆಂಬ ಗುರು- “ನಾನು ಹೇಳಬಲ್ಲೆ, ಆದರೆ ನನ್ನದೊಂದು ಷರತ್ತಿದೆ. ಅದೇನೆಂದು ಜನಕ ಕೇಳಲು, ನೀನು ರಾಜ್ಯಕೋಶ, ಸಿಂಹಾಸನ, ನಿನ್ನ ಶರೀರ ಮತ್ತು ನಿನ್ನ ಮನಸ್ಸು ನನಗೆ ನೀಡಬೇಕು” ಎನ್ನುತ್ತಾನೆ.   ಅದಕ್ಕೆ ರಾಜಆಯಿತು ಎನ್ನುತ್ತಾನೆ.   ಆಗ ಅಷ್ಟಾವಕ್ರ- “ನಿನ್ನದೆಲ್ಲವೂ

Read More
ಮಾತು~ಮುತ್ತು : ಎರಡು ಪಕ್ಷಿಗಳು – ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

ಒಂದು ಕಾಡಿನಲ್ಲಿ ಒಂದೇ ರೀತಿಯ ಎರಡು ಪಕ್ಷಿಗಳಿದ್ದವು. ಆಚಾರ, ವಿಚಾರ, ಆಹಾರಾದಿಯಾಗಿ ಎಲ್ಲ ರೀತಿಯಲ್ಲೂ ಅವೆರಡೂ ಒಂದೇ ಬಗೆಯಾಗಿದ್ದವು. ಒಂದು ದಿನ ಒಬ್ಬ ಬೇಟೆಗಾರ ಬಂದು ಅವೆರಡನ್ನೂ ಸೆರೆ ಹಿಡಿದು ತನ್ನ ಮನೆಗೆ ಕೊಂಡು ಹೋಗಿ ಒಂದೇ ರೀತಿಯ ಎರಡು ಪಂಜರಗಳಲ್ಲಿ ಅವುಗಳನ್ನು ಬಂಧಿಸಿ ಇಡುತ್ತಾನೆ. ಅವಕ್ಕೆ ಸ್ವಲ್ಪ ಆಹಾರ, ಕುಡಿಯಲು ನೀರು ಇಟ್ಟು ಅವನು ಹೊರಟು ಹೋಗುತ್ತಾನೆ. ಒಂದು ಪಕ್ಷಿ ತುಂಬಾ ಬೇಸರಗೊಳ್ಳುತ್ತದೆ. ಆಹಾರವಿದ್ದರೂ ತನಗೆ ಬೇಕಾದ ತಾನೇ ಸಂಪಾದಿಸಿದ ಆಹಾರವಿಲ್ಲ. ನೀರಿದ್ದರೂ ಸ್ವತಂತ್ರವಾಗಿ ಹರಿಯುವ

Read More
ಮಾತು~ಮುತ್ತು : ಸ್ವರ್ಗ~ನರಕ – ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

  ಒಮ್ಮೆ ಒಬ್ಬ ಸೈನಿಕ ಒಬ್ಬ ಗುರುವನ್ನು ಭೇಟಿಯಾಗಿ- “ಸ್ವರ್ಗ-ನರಕಗಳಿವೆಯೇ? ಅವು ಹೇಗಿವೆ?” ಎಂದು ಕೆಳುತ್ತಾನೆ. ಆಗ ಗುರು-“ನಿನ್ನ ಉದ್ಯೋಗವೇನು?”ಎಂದು ಕೇಳುತ್ತಾನೆ. ಅದಕ್ಕೆ ಅವನು- “ನಾನೊಬ್ಬ ಸೈನಿಕ; ಯುದ್ಧ ಮಾಡುವುದೇ ನನ್ನ ಕಾಯಕ” ಎನ್ನುತ್ತಾನೆ. ಆಗ ಆ ಗುರು- “ನೀನು ಸೈನಿಕನಂತೆ  ಕಾಣುವುದಿಲ್ಲ; ಒಬ್ಬ ಭಿಕ್ಷುಕನಂತೆ ಕಾಣುತ್ತೀಯ” ಎಂದುಬಿಡುತ್ತಾನೆ.   ಆಗ ಸೈನಿಕನಿಗೆ ಅತಿಯಾದ ಕೋಪ ಉಂಟಾಗಿ ಮೈಯೆಲ್ಲಾ ಬಿಸಿಯಾಗಿ, ಮುಖವೆಲ್ಲ ಕೆಂಪಾಗಿ, ಬಾಹುಗಳು ಹುರಿಗಟ್ಟುತ್ತವೆ. ಅವನು ಕೋಪ ತಡೆಯಲಾರದೇ ಒರೆಯಿಂದ ಖಡ್ಗ ತೆಗೆದು ಆ ಗುರುವನ್ನು

Read More
ಮಾತು~ಮುತ್ತು : ನಾವು ಶಿಲ್ಪ; ಮೇಲಿರುವವ ಶಿಲ್ಪಿ – ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

  ಒಂದು ದೇವಸ್ಥಾನದಲ್ಲಿ ಇಬ್ಬರು ವ್ಯಕ್ತಿಗಳು. ಒಬ್ಬ ಅರ್ಚಕ, ಇನ್ನೊಬ್ಬ ಆಳು. ಅರ್ಚಕನ ಕೆಲಸ ಪೂಜೆ ಮಾಡುವುದು; ಆಳಿನ ಕೆಲಸ ದೇವಸ್ಥಾನ ತೊಳೆದು ಸ್ವಚ್ಛಮಾಡುವುದು. ಒಮ್ಮೆ ಆಳಿಗೆ ಅನಿಸುತ್ತದೆ- “ನನ್ನ ಹಾಗೇ ಅರ್ಚಕನೂ ಸಾಮಾನ್ಯ ವ್ಯಕ್ತಿ; ಆದರೆ ಅವನಿಗೆ ದೇವರನ್ನು ಮುಟ್ಟುವ ಭಾಗ್ಯ. ನನಗೆ ದೇವಸ್ಥಾನದ ಮೆಟ್ಟಿಲು ತೊಳೆಯುವ ಕೆಲಸ ಏಕೆ?” ಅದೇ ರೀತಿ ದೇವಸ್ಥಾನದ ಮೆಟ್ಟಿಲಿಗೂ ಅನಿಸುತ್ತದೆ. ಅದು- “ನಾನು ಕಲ್ಲು; ದೇವರನ್ನು ಕಲ್ಲಿನಿಂದಲೇ ಮಾಡಿದ್ದಾರೆ; ಅವನಿಗೆ ಪೂಜೆಯಾದರೆ, ನನ್ನನ್ನು ಮೆಟ್ಟಿಕೊಂಡು ಹೋಗುವುದರಿಂದ ಮೆಟ್ಟು ಕಲ್ಲಾದೆ;

Read More
ಮಾತು~ಮುತ್ತು : ಒಳಗಿನ ಸೌಂದರ್ಯವೇ ನಿಜವಾದ ಸೌಂದರ್ಯ – ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

  ಒಮ್ಮೆ ಜನಕ ಮಹಾರಾಜನಿಗೆ ಒಂದು ಯೋಚನೆ ಬಂದಿತು. ಅದೆಂದರೆ ಯಾರಾದರೂ ಕುದುರೆ ಏರುವಷ್ಟು ಅಲ್ಪ ಸಮಯದಲ್ಲಿ ದೇವರ ಸಾಕ್ಷಾತ್ಕಾರವನ್ನು, ಆತ್ಮಜ್ಞಾನವನ್ನೂ ಹೇಳಬಲ್ಲರೇ? ಎಂದು.   ಒಂದು ದಿನ ಅವನು ಒಂದು ಸಭೆಯನ್ನು ಕರೆಯುತ್ತಾನೆ. ಅಲ್ಲಿ ಜ್ಞಾನಿಗಳು, ಸಂತರು, ವಿದ್ವಾಂಸರುಗಳು, ಎಲ್ಲರೂ ಸೇರಿರುತ್ತಾರೆ. ವೇದಿಕೆ ಖಾಲಿ ಇರುತ್ತದೆ.  ಜನಕ ಹೇಳುತ್ತಾನೆ- “ಯಾರು ಕುದುರೆ ಏರುವಷ್ಟು ಅಲ್ಪ ಸಮಯದಲ್ಲಿ ಆತ್ಮಜ್ಞಾನವನ್ನು ಹೇಳಬಲ್ಲರಿ; ಅವರು ವೇದಿಕೆ ಮೇಲೆ ಬರಲಿ.” ಯಾರೂ ಮುಂದೆ ಬರುವುದಿಲ್ಲ. ಅಷ್ಟು ಹೊತ್ತಿಗೆ ಆ ಸಭೆಗೆ ಅಷ್ಟಾವಕ್ರ

Read More
ಮಾತು~ಮುತ್ತು : ಸಾವು-ನೋವಿಲ್ಲದ ಮನೆಯಿಲ್ಲ – ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

ಒಮ್ಮೆ ಒಬ್ಬ ತಾಯಿ ತನ್ನ ಏಕೈಕ ಸಂತಾನವಾಗಿದ್ದ ತನ್ನ ಮಗನನ್ನು ಅಸೌಖ್ಯದ ಕಾರಣದಿಂದಾಗಿ ಕಳೆದುಕೊಳ್ಳುತ್ತಾಳೆ. ಆ ತಾಯಿಗೆ ದುಃಖ ತಡೆಯಲಾಗುವುದಿಲ್ಲ. ಅವಳು ಒಬ್ಬ ಸಂತನನ್ನು ಭೇಟಿಯಾಗಿ ತನ್ನ ದುಃಖವನ್ನು ತೋಡಿಕೊಂಡು ತನ್ನ ಮಗನನ್ನು ಬದುಕಿಸಿಕೊಡುವಂತೆ ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ. ಯಾವ ರೀತಿ ಸಮಾಧಾನ ಮಾಡಿದರೂ ಈ ತಾಯಿಯ ದುಃಖ ಕಡಿಮೆಯಾಗುವುದಿಲ್ಲ ಎಂದು ಅರಿತ ಸಂತ ಆ ತಾಯಿಯ ಹತ್ತಿರ- “ಈ ಊರಿನಲ್ಲಿರುವ ಮನೆಗೆ ತೆರಳಿ ಯಾರ ಮನೆಯಲ್ಲಿ ಈವರೆಗೂ ಸಾವು-ನೋವು ಸಂಭವಿಸಿಲ್ಲವೋ ಆ ಮನೆಯಿಂದ ಸ್ವಲ್ಪ ಸಾಸಿವೆಯನ್ನು ತೆಗೆದುಕೊಂಡು

Read More
ಮಾತು~ಮುತ್ತು : ಮಾಡಿಯೇ ಕಲಿಯಬೇಕು – ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

  ಒಂದು ಊರಿನಲ್ಲಿ ಕಳ್ಳತನವೇ ಕಸುಬಾಗಿದ್ದ ಒಬ್ಬ ವ್ಯಕ್ತಿ ಇದ್ದ. ಅವನಿಗೊಬ್ಬ ಮಗನಿದ್ದ. ಆ ಮಗ ಯುವಕನಾದಾಗ ಆಲೋಚಿಸುತ್ತಾನೆ; ತಂದೆಗೆ ವಯಸ್ಸಾಯಿತು, ನಾನು ಅವನ ಕಸುಬನ್ನು ಮುಂದುವರಿಸಬೇಕು ಎಂದು. ಒಂದು ದಿನ ಅವನ ತಂದೆಯ ಹತ್ತಿರ- “ಈ ದಿನ ನಾನು ನಿಮ್ಮೊಟ್ಟಿಗೆ ಬರುತ್ತೇನೆ; ನನಗೆ ಕಸುಬನ್ನು ಕಲಿಸಿಕೊಡು” ಎಂದು ಕೇಳುತ್ತಾನೆ. ಆ ರಾತ್ರಿ ತಂದೆ ಮಗನನ್ನು ಕರೆದುಕೊಂಡು ಕಳ್ಳತನಕ್ಕಾಗಿ ಒಂದು ಮನೆಗೆ ಹೋಗುತ್ತಾನೆ. ಆ ಮನೆಯ ಒಂದು ಕೋಣೆಯೊಳಗೆ ಪ್ರವೇಶಿಸಿದ ಅನಂತರ ತಂದೆ ಮಗನನ್ನು ಒಳಗೆ ಬಿಟ್ಟು

Read More
ಮಾತು~ಮುತ್ತು : ಗುರುವನ್ನು ಆತ್ಮದಿಂದ ಅಳೆ – ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

ಒಮ್ಮೆ ಒಬ್ಬ ವ್ಯಕ್ತಿ, ನಿಜವಾದ ಗುರು ಬೇಕು ಎಂದು ಅರಸುತ್ತಿದ್ದ. ಆದರೆ ಅವನಿಗೆ ಯಾರನ್ನು ನೋಡಿದರೂ ಕಪಟಿಗಳು, ಲೋಭಿಗಳು, ನಯವಂಚಕರಾಗಿ ಕಂಡು ಬರುತ್ತಾರೆ. ಒಮ್ಮೆ ಸರಿಯಾದ ಗುರು ಒಬ್ಬ ಸಿಗುತ್ತಾನೆ. ಅವನನ್ನು ಈ ವ್ಯಕ್ತಿ ನಿಜವಾದ ಗುರು ಎಂದು ಅಂದುಕೊಂಡು ಅವನ ಶಿಷ್ಯಮಿತ್ರರಲ್ಲಿ ಹೇಳುತ್ತಾನೆ- “ಅಂತೂ ನನಗೆ ನಿಜವಾದ ಗುರು ದೊರಕಿದ್ದಾರೆ” ಎಂದು. ಆಗ ಮಿತ್ರರು ಕೇಳುತ್ತಾರೆ- “ಹೇಗೆ ನೀನು ಗುರುವನ್ನು ಅಳೆದೆ? ಯಾವುದಾದರೂ ಮಾನದಂಡ ಬೇಕಲ್ಲವೇ?” ಅದಕ್ಕೆ ಈ ವ್ಯಕ್ತಿ- “ಆ ಗುರುವಿನ ಒಂದು ಮಾತಿನಿಂದ

Read More
ಮಾತು~ಮುತ್ತು : ಇರುವೆಯ ಕಥೆ – ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

ಒಂದು ದಿನ ಒಂದು ಪುಟ್ಟ ಇರುವೆ ತನಗಿಂತ ಎಷ್ಟೋ ಭಾರವಾದ ಒಂದು ಹುಲ್ಲುಕಡ್ಡಿಯನ್ನು ಬೆನ್ನಿನ ಮೇಲೆ ಹೊರಿಸಿಕೊಂಡು ಪ್ರಯಾಣಿಸುತ್ತಿರುತ್ತದೆ. ಅದು ಭಾರವಾದ್ದರಿಂದ ಬಹಳ ಕಷ್ಟಪಟ್ಟು ಇರುವೆ ಸಾಗುತ್ತಿರುವಾಗ ಅನೇಕ ಅಡೆತಡೆಗಳು ಎದುರಾಗುತ್ತವೆ. ಅವುಗಳನ್ನೆಲ್ಲ ಎದುರಿಸಿ ಹೇಗೂ ಕಷ್ಟಪಟ್ಟು ಒಂದು ಸ್ಥಳಕ್ಕೆ ಬರುವಾಗ ಅಲ್ಲಿ ಒಂದು ದೊಡ್ಡದಾದ ಕಣಿವೆ ಇರುತ್ತದೆ. ಅದನ್ನು ದಾಟಲು ಸಾಧ್ಯವಾಗುವುದಿಲ್ಲ. ಆಗ ಇರುವೆ ತುಂಬಾ ಯೋಚಿಸಿ ತಾನು ತಂದ ಹುಲ್ಲುಕಡ್ಡಿಯನ್ನೇ ಕಾಲುಸಂಕವಾಗಿ ಮಾಡಿಕೊಂಡು ಕಣಿವೆಯನ್ನು ದಾಟಿ ಮತ್ತೊಮ್ಮೆ ಹುಲ್ಲುಕಡ್ಡಿಯನ್ನು ಹೊತ್ತುಕೊಂಡು ತನ್ನ ಮನೆಯ ಸಮೀಪ

Read More
ಮಾತು~ಮುತ್ತು : ದೇವತೆಗಳು ಮತ್ತು ಅಸುರರು – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ದೇವಲೋಕ, ಭೂಲೋಕ ಮತ್ತು ಪಾತಾಳಲೋಕ ಎಲ್ಲವೂ ಭಗವಂತನ ಸೃಷ್ಟಿಯೇ. ದೇವತೆಗಳೆಂದರೆ ಬೆಳಕು, ರಾಕ್ಷಸರೆಂದರೆ ಕತ್ತಲು. ದೇವತೆಗಳು ಸ್ವರ್ಗದಲ್ಲಿ ಇದ್ದರೆ, ರಾಕ್ಷಸರು ಪಾತಾಳದಲ್ಲಿ ಇರುತ್ತಾರೆ. ರಾಕ್ಷಸರಿಗೆ ಅನಿಸುತ್ತದೆ; ಇದು ತಾರತಮ್ಯ. ಹಾಗಾಗಿ ಅವರು ಬ್ರಹ್ಮನಲ್ಲಿ ಹೋಗಿ ಕೇಳುತ್ತಾರೆ- “ನಾವೇಕೆ ಪಾತಾಳದಲ್ಲಿರಬೇಕು?” ಎಂದು. ಬ್ರಹ್ಮನು- “ನಾಳೆ ಬನ್ನಿ. ದೇವತೆಗಳನ್ನೂ ಕರೆಯುತ್ತೇನೆ. ನಿಮಗೆಲ್ಲರಿಗೂ ಭೋಜನ ಏರ್ಪಡಿಸಿ ಉತ್ತರ ತಿಳಿಸುತ್ತೇನೆ” ಎನ್ನುತ್ತಾನೆ.   ದೇವತೆಗಳೂ, ರಾಕ್ಷಸರೂ ಮರುದಿನ ಒಟ್ಟಾಗಿ ಸೇರುತ್ತಾರೆ. ರಾಕ್ಷಸರು- “ನಮಗೇ ಮೊದಲು ಭೋಜನ ಬಡಿಸಿ” ಎನ್ನುತ್ತಾರೆ. ಬ್ರಹ್ಮ- “ಹಾಗೇ ಆಗಲಿ;

Read More
ಮಾತು~ಮುತ್ತು : ತ್ಯಾಗವಿಲ್ಲದೇ ದೊರೆಯದು ದೊಡ್ಡದು – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಒಮ್ಮೆ ಒಬ್ಬ ತಾಯಿ ಪುಟ್ಟ ಪುಟ್ಟ ಪಾಟಿನಲ್ಲಿ ಬೆಳೆದ ಸಣ್ಣ ಸಣ್ಣ ಸಸಿಗಳನ್ನು ಕಿತ್ತು ಹೂದೋಟದಲ್ಲಿ ವಿಶಾಲವಾದ ಜಾಗದಲ್ಲಿ ಅವುಗಳನ್ನು ನೆಟ್ಟು ಸುತ್ತ ಮಣ್ಣು ಹಾಕುತ್ತಾಳೆ. ಇದನ್ನು ನೋಡಿದ ಆ ತಾಯಿಯ ಪುಟ್ಟ ಮಗು ತಾಯಿಯನ್ನು ಕೇಳುತ್ತದೆ- “ಇಲ್ಲಿ ಕಿತ್ತು ಅಲ್ಲೇಕೆ ನೆಡುತ್ತಿದ್ದಿಯಾ?” ಎಂದು. ಆಗ ತಾಯಿ- “ಪುಟ್ಟ ಪಾಟಿನಲ್ಲಿ ಗಿಡ ಚೆನ್ನಾಗಿ ಬೆಳೆದು ಹೂ ಅರಳುವುದಿಲ್ಲ; ಅದನ್ನು ವಿಶಾಲವಾದ ಹೂದೋಟದಲ್ಲಿ ನೆಟ್ಟು ಅದಕ್ಕೆ ನೀರು, ಗೊಬ್ಬರ, ಮಣ್ಣು ನೀಡಿದರೆ ಅದು ಚೆನ್ನಾಗಿ ಬೆಳೆದು ಗಿಡದ ತುಂಬಾ

Read More
ಮಾತು~ಮುತ್ತು : ಪ್ರೀತಿ ಅಮರ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಅದೊಂದು ವನ ಪ್ರದೇಶ.  ಅಲ್ಲಿ ಒಂದು ಗಂಡು ಒಂದು ಹೆಣ್ಣು, ಎರಡು ಚಿಟ್ಟೆಗಳು ಒಂದು ಮತ್ತೊಂದನ್ನು ತುಂಬಾ ಪ್ರೀತಿಸುತ್ತಾ ಬಹಳ ಅನ್ಯೋನ್ಯವಾಗಿದ್ದವು. ಒಮ್ಮೆ ಅವರಲ್ಲಿ ಯಾರು ಹೆಚ್ಚು ಪ್ರೀತಿಸುತ್ತಾರೆ ಎಂಬುದನ್ನು ತಿಳಿಯಲು ಅವರಲ್ಲಿ ಒಂದು ಸ್ಪರ್ಧೆ ಏರ್ಪಟ್ಟು, ಒಂದು ಪರೀಕ್ಷೆಯ ಮೂಲಕ ತಿಳಿಯೋಣ ಎಂದು ಅವು ತೀರ್ಮಾನಿಸುತ್ತವೆ. ಪರೀಕ್ಷೆ ಏನೆಂದರೆ ಅಲ್ಲಿಯೇ ಇರುವ ಒಂದು ಹೂವಿನ ಗಿಡವನ್ನು ನೋಡಿ, ಆ ಹೂವಿನ ಗಿಡದ ಹೂವು ಅರಳುವುದಕ್ಕಿಂತ ಮುಂಚಿತವಾಗಿ ಮರುದಿನ ಯಾರು ಅದರ ಮೇಲೆ ಕುಳಿರುತ್ತಾರೆಯೋ, ಅವರೇ ಹೆಚ್ಚು

Read More
ಮಾತು~ಮುತ್ತು : ಒಳ್ಳೆಯ ಮಾತು – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ    

ಒಂದು ನದಿ ಹರಿಯುತ್ತಿದ್ದರೆ ಪಾವನವಾಗುತ್ತದೆ. ಅದೇ ರೀತಿ ಒಬ್ಬ ಸಂತ ಊರೂರು ಸಂಚರಿಸುತ್ತಿದ್ದರೆ ಆ ಊರೇ ಪಾವನವಾಗುತ್ತದೆ.   ಅದೊಂದು ಊರು. ಒಮ್ಮೆ ಆ ಊರಿನ ಒಂದು ಮಗುವಿಗೆ ಅಸೌಖ್ಯ ಉಂಟಾಗುತ್ತದೆ.  ಯಾವ ಔಷಧದಿಂದಲೂ ಗುಣವಾಗುವುದಿಲ್ಲ. ಆಗ ಆ ಊರಿನ ಜನ ಒಬ್ಬ ಸಂತನನ್ನು ಊರಿಗೆ ಬರಮಾಡಿಕೊಳ್ಳುತ್ತಾರೆ. ಆ ಸಂತನ ಆಶೀರ್ವಾದ ಪಡೆಯಲು ನೂರಾರು ಜನ ಆಗಮಿಸುತ್ತಾರೆ. ಅಸೌಖ್ಯದಿಂದ ಬಳಲುತ್ತಿರುವ ಮಗುವನ್ನು ಕರೆದುಕೊಂಡು ಅದರ ತಂದೆ ತಾಯಿಗಳು ಬರುತ್ತಾರೆ. ಅವರನ್ನು ಆಶೀರ್ವದಿಸಿದ ಸಂತ ಒಂದು ಮಂತ್ರವನ್ನು ಹೇಳಿಕೊಟ್ಟು-

Read More
ಮಾತು~ಮುತ್ತು : ಗುರುವಿನ ಮೌಲ್ಯ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಒಮ್ಮೆ ಒಬ್ಬ ಶಿಷ್ಯ ತನ್ನ ಗುರುವಿನಲ್ಲಿ- “ಗುರುವಿನ ಮೌಲ್ಯವನ್ನು ತಿಳಿಯುವುದು ಹೇಗೆ?” ಎಂದು ಪ್ರಶ್ನೆ ಮಾಡುತ್ತಾನೆ. ಆಗ ಆ ಗುರು ಅವನಿಗೆ ಒಂದು ವಜ್ರದ ಉಂಗುರವನ್ನು ಕೊಟ್ಟು- “ಪೇಟೆಯಲ್ಲಿ ಇದರ ಮೌಲ್ಯವನ್ನು ತಿಳಿದು ಕೊಂಡು ಬಾ” ಎಂದು ಹೇಳುತ್ತಾನೆ.   ಉಂಗುರವನ್ನು ತೆಗೆದುಕೊಂಡು ಶಿಷ್ಯ ಮೊದಲಿಗೆ ಒಬ್ಬ ಹೂವಿನ ವ್ಯಾಪಾರಿಯ ಹತ್ತಿರ ಹೋಗುತ್ತಾನೆ. ಅವನು ಅದರ ಬೆಲೆ 100 ರೂಪಾಯಿ ಮೌಲ್ಯದ ಹೂ ಹೇಳುತ್ತಾನೆ. ಒಬ್ಬ ವರ್ತಕನ ಹತ್ತಿರ ಹೋದಾಗ ಅವನು ಅದರ ಬೆಲೆ  5 ಸೇರು

Read More
ಮಾತು~ಮುತ್ತು : ಪ್ರತಿಕ್ಷಣವೂ ಅಮೂಲ್ಯ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಬ್ಯಾಂಕ್ ಬ್ಯಾಲೆನ್ಸ್, ಪಾಸ್‌ಬುಕ್, ಕ್ರೆಡಿಟ್ ಕಾರ್ಡ್, ಡೆಪಾಸಿಟ್ ಇತ್ಯಾದಿಗಳ ಬಗ್ಗೆ ಅತಿಯಾದ ಆಸೆ ಇರುತ್ತದೆ. ಆದರೆ ನಮ್ಮದೊಂದು ಅಕೌಂಟ್ ಇದ್ದು ಅದರಲ್ಲಿ ಪ್ರತಿದಿನ 86,400 ರೂಪಾಯಿ ಜಮೆ ಆಗುತ್ತದೆ; ಅದನ್ನು ಆ ದಿವಸವೇ ಖರ್ಚು ಮಾಡಬೇಕು. ಅದಿಲ್ಲವಾದರೆ ಅದು ಲ್ಯಾಪ್ಸ್ ಆಗುತ್ತದೆ ಎಂದು ಊಹಿಸಿಕೊಳ್ಳಿ. ಆಗ ಪ್ರತಿಯೊಂದು ರೂಪಾಯಿಯನ್ನೂ ಹೇಗೆ ಖರ್ಚುಮಾಡುತ್ತಿದ್ದೆವು ಎಂದು ಯೋಚಿಸಿಕೊಳ್ಳಿ. ಪ್ರತಿ ರೂಪಾಯಿಯೂ ಅಮೂಲ್ಯವೆಂದು ತಿಳಿದು ನಮಗೆ ಸಂತೋಷವನ್ನು ಕೊಡುವ ವಿಷಯಕ್ಕೇ ಖರ್ಚು ಮಾಡುತ್ತಿದ್ದೆವಲ್ಲವೇ?   ಹೌದು, ನಮ್ಮ ಪ್ರತಿಯೊಬ್ಬರ

Read More
ಮಾತು~ಮುತ್ತು : ಮೋಹ ಕಾರಣ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ತ್ರಿಲೋಕ ಸಂಚಾರಿಯಾದ ನಾರದರು ಒಮ್ಮೆ ಭೂಲೋಕಕ್ಕೆ ಬರುತ್ತಾರೆ. ಎಲ್ಲ ಕಡೆಯಲ್ಲಿ ಪಶು, ಪಕ್ಷಿ, ಪ್ರಾಣಿ, ಮನುಷ್ಯ ಎಲ್ಲರೂ ಒಂದಲ್ಲ ಒಂದು ಕಾರಣಕ್ಕೆ ದುಃಖತಪ್ತರಾದಂತೆ ಕಾಣುತ್ತಾರೆ. ಇದಕ್ಕೆ ಕಾರಣವೇನೆಂದು ನಾರದರು ಆಲೋಚಿಸುವಾಗ ಅವರಿಗೆ ಹೊಳೆಯುತ್ತದೆ- ‘ಮೋಹ ಕಾರಣ’ ಎಂದು.   ಪ್ರಾಣಿ ಪಕ್ಷಿಗಳ ಅತಿಯಾದ ಮೋಹವೇ ಅತಿಯಾದ ದುಃಖಕ್ಕೆ ಕಾರಣವೆಂದು ನಾರದರು ಶ್ರೀಹರಿಯ ಹತ್ತಿರ ಬಂದು-  “ಪ್ರಪಂಚದಲ್ಲಿ ಮೋಹವೇ ಇಲ್ಲದಂತೆ ಮಾಡುವ ಹಾಗೆ ಮಾಡಿದರೆ ಜನರ ದುಃಖ ಕಡಿಮೆಯಾಗಿ ಅವರು ಸಂತೋಷದಿಂದ ಇರುತ್ತಾರೆ” ಎಂದು ಕೇಳಿಕೊಳ್ಳುತ್ತಾನೆ. ಆಗ ಶ್ರೀಹರಿ-

Read More