|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಸಾಗರದ ಗೋಳಗೋಡಿನಲ್ಲಿ ಮಹಾರುದ್ರ ಹವನ ಸಂಪನ್ನ

ಹಿಂದೆ ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರಗಾಮಿಗಳು ದೇಶದ ಯೋಧರನ್ನು ಭೀಭತ್ಸವಾಗಿ ಕೊಂದಾಗ ಇಡೀ ದೇಶವೇ ಕಂಬನಿ ಮಿಡಿದಿತ್ತು. ಇದೇ ಸಂದರ್ಭದಲ್ಲಿ ಗೋಳಗೋಡಿನ ತ್ರಯಂಬಕೇಶ್ವರ ದೇವಸ್ಥಾನದ ವೇ.ಮೂ.ದತ್ತಾತ್ರೇಯ ಭಟ್ಟರು ತಾವು ದಿನನಿತ್ಯ ಪೂಜಿಸುವ ಈಶ್ವರನಲ್ಲಿ ದೇಶದ ಸೈನಿಕರ ಒಳಿತಿಗಾಗಿ ಮಹಾರುದ್ರ ಹವನ ಮಾಡಿಸಿಕೊಡುತ್ತೇನೆ ಎಂದು ಸಂಕಲ್ಪ ಮಾಡಿದ್ದರು ಸೈನಿಕರಿಗಾಗಿ ಮಾಡಿಕೊಂಡ ಈ ಮಹಾಕಾರ್ಯಕ್ಕೆ ಇಡೀ ಹವ್ಯಕ ಸಮಾಜವೇ ಬಹುಬೇಗನೆ ಸ್ಪಂದಿಸಿದ್ದರ ಫಲವಾಗಿ ಮಹಾರುದ್ರ ಹವನ ವಿಧ್ಯುಕ್ತವಾಗಿ ನಡೆಯಿತು. ಈ ದೊಡ್ಡ ಕಾರ್ಯ ನೆರವೇರಲು ಹವ್ಯಕ ಸಮಾಜದ ದೊಡ್ಡ ಕಾರ್ಯಪಡೆ ಯಾವುದೇ

Read More

ಸಂಸ್ಥಾಪನೋತ್ಸವ – ವಿಶೇಷ ಪ್ರಶಸ್ತಿ ಪುರಸ್ಕಾರ ಸಮಾರಂಭ

ಶ್ರೀ ಅಖಿಲ ಹವ್ಯಕ ಮಹಾಸಭೆಯ 76ನೇ ವರ್ಷದ ಸಂಸ್ಥಾಪನೋತ್ಸವ ಹಾಗೂ ಹವ್ಯಕ ವಿಶೇಷ ಪ್ರಶಸ್ತಿ ಪುರಸ್ಕಾರ, ಪಲ್ಲವ ಪುರಸ್ಕಾರ ಪ್ರದಾನ ಸಮಾರಂಭ 31.3.2019 ಭಾನುವಾರ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಸಂಜೆ 4.00 ಗಂಟೆಗೆ ನಡೆಯಲಿದೆ.   1943ರಲ್ಲಿ ಸಂಸ್ಥಾಪಿತವಾಗಿ ; 75 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಶ್ರೀಅಖಿಲ ಹವ್ಯಕ ಮಹಾಸಭೆಯ 76ನೇ ವರ್ಷದ ಸಂಸ್ಥಾಪನೋತ್ಸವದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, 2018-19 ನೇ ಸಾಲಿನ “ಹವ್ಯಕ ವಿಭೂಷಣ” “ಹವ್ಯಕ ಭೂಷಣ” “ಹವ್ಯಕ

Read More

ಪಾತಂಜಲ ಮಹಾಭಾಷ್ಯ ಕನ್ನಡಿ : ಪುಸ್ತಕ ಪರಿಚಯ ಮತ್ತು ಲೇಖಕ ಸಮ್ಮಾನ ಕಾರ್ಯಕ್ರಮ

  ಹೊನ್ನಾವರ : ನಗರದ ಕವಲಕ್ಕಿಯ ಶ್ರೀರಾಘವೇಂದ್ರಭಾರತೀ ಸವೇದ ಸಂಸ್ಕೃತ ಕಾಲೇಜಿನ ಆವರಣದ ಶ್ರೀರಾಘವೇಶ್ವರಭಾರತೀ ಸಭಾಭವನದಲ್ಲಿ ಮಾ.17ರಂದು ಡಾ. ಗಣಪತಿ ಭಟ್ಟ ರಚಿಸಿದ ‘ಪಾತಂಜಲ ಮಹಾಭಾಷ್ಯ ಕನ್ನಡಿ’ ಪುಸ್ತಕ-ಪರಿಚಯ ಕಾರ್ಯಕ್ರಮ ಸಂಪನ್ನವಾಯಿತು. ಗ್ರಂಥಕಾರಾದ ಡಾ. ಗಣಪತಿ ಭಟ್ಟ ಪುಸ್ತಕದ ವಿಷಯದ ಕುರಿತು ಸಮಗ್ರ ಮಾಹಿತಿ ನೀಡಿದರು. ಅನಂತರ ಕಾಲೇಜಿನ ಪ್ರಾಚಾರ್ಯ ವಿದ್ವಾನ್ ಗಣೇಶ ವಿ. ಭಟ್ಟ ಗ್ರಂಥವನ್ನು ವಿಮರ್ಶಿಸಿ ಅದರಲ್ಲಿರುವ ವೈಶಿಷ್ಟ್ಯ ಮತ್ತು ಪ್ರಸ್ತುತತೆಯನ್ನು ಸಭೆಗೆ ಪರಿಚಯಿಸಿದರು. ಕೊನೆಯಲ್ಲಿ ಗ್ರಂಥಕರ್ತೃ ಡಾ. ಗಣಪತಿ ಭಟ್ಟರನ್ನು ಸಮ್ಮಾನಿಸಿ ಗೌರವಿಸಲಾಯಿತು.

Read More
ಶ್ರೀ ಭಾರತೀ ವಿದ್ಯಾ ಸಂಸ್ಥೆಯು ಸಂಸ್ಕೃತಿಯ ದೇಗುಲ ; ರಾಮಚಂದ್ರ ಭಟ್ ಮಾಣಿಪ್ಪಾಡಿ

ನಂತೂರು: ಮಂಗಳೂರು ನಂತೂರು ಶ್ರೀಭಾರತೀ ಸಮೂಹ ಸಂಸ್ಥೆಗಳ ಶಂಕರಶ್ರೀ ಸಭಾಭವನದಲ್ಲಿ ಶ್ರೀಭಾರತೀ ಪದವಿ ಕಾಲೇಜಿನ ಸಾಂಸ್ಕೃತಿಕ ಸಂಘದ ವತಿಯಿಂದ ಸಾಂಸ್ಕೃತಿಕ ದಿನಾಚರಣೆಯನ್ನು ಮಾರ್ಚ್ 16ರಂದು ನಡೆಸಲಾಯಿತು.   ವಕೀಲರು ಮತ್ತು ನೋಟರಿ ಶ್ರೀ ರಾಮಚಂದ್ರ ಭಟ್ಟ ಮಾಣಿಪ್ಪಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶ್ರೀ ಭಾರತೀ ವಿದ್ಯಾಸಂಸ್ಥೆಯು ಸಂಸ್ಕೃತಿಯ ದೇಗುಲ. ವಿದ್ಯಾದೇಗುಲದಲ್ಲಿ ಸಂಸ್ಕೃತಿಯೊಂದಿಗೆ ವಿದ್ಯೆಯನ್ನು ನೀಡುವುದು, ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದಕ್ಕೆ ಸಹಕಾರಿ, ಎಂದು ಹೇಳಿದರು.   ಶ್ರೀಭಾರತೀ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಈಶ್ವರಪ್ರಸಾದ್ ಎ. ಅಧ್ಯಕ್ಷತೆ ವಹಿಸಿ ಮಾತನಾಡಿ, ವೇದಪುರಾಣಗಳ ಕಾಲದಲ್ಲಿಯೇ ಸಂಸ್ಕಾರಯುತ ಶಿಕ್ಷಣಕ್ಕೆ ಹಿರಿಯರು ಹೆಚ್ಚಿನ ಒತ್ತು ನೀಡಿದ್ದರು. ವಿದ್ಯಾರ್ಥಿಗಳಲ್ಲಿ ಸಂಸ್ಕೃತಿಯ ಉಳಿವಿನ ಪಾಠ ಬೆಳೆದು ಹೆಮ್ಮರವಾಗಲಿ, ಎಂದು ಆಶಿಸಿದರು.   ಮುಖ್ಯ ಅಭ್ಯಾಗತರಾಗಿ  ಆಗಮಿಸಿದ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಸುಕನ್ಯಾ ಸಿ. ಮಾತನಾಡಿ, ಭಾರತ ದೇಶ ಸಂಸ್ಕೃತಿಯ ತವರೂರು, ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಯಾರೂ ಹೀಯಾಳಿಕೆಗೆ ಗುರಿಯಾಗುವುದಿಲ್ಲ. ನಮ್ಮ ಎಲ್ಲ ಆಚರಣೆಗಳಿಗೆ ವೈಜ್ಞಾನಿಕ ಕಾರಣಗಳಿವೆ. ವಿದ್ಯಾರ್ಥಿ ಜೀವನದಲ್ಲಿ ಸಂಸ್ಕೃತಿಗೆ ಹೆಚ್ಚಿನ ಮಹತ್ತ್ವ ನೀಡಿದಾಗ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಹೇಳಿದರು.   ನಮ್ಮ ಕುಡ್ಲ ಚಾನಲ್ ನ್ಯೂಸ್ ರೀಡರ್ ಶ್ರೀಮತಿ ಪ್ರಿಯಾ ಹರೀಶ್ ಶೆಟ್ಟಿ ಮಾತನಾಡಿ,

Read More
ಶ್ರೀ ಭಾರತೀ ಸಮೂಹ ಸಂಸ್ಥೆಗಳ ವಾಲಿಬಾಲ್ ಪಂದ್ಯಾಟ*

ನಂತೂರು ಮಾ. 13 : ಮಂಗಳೂರಿನ ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶಂಕರಶ್ರೀ ಸಭಾಭವನದಲ್ಲಿ ಶ್ರೀ ಭಾರತೀ ಪದವಿ ಕಾಲೇಜಿನ ಸ್ಪೋರ್ಟ್ಸ್ ಅಸೋಸಿಯೇಶನ್ ವತಿಯಿಂದ ಎಸ್‌ಬಿಸಿ ವಾಲಿಬಾಲ್ ಲೀಗ್ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಭಾರತೀ ಸಮೂಹ ಸಂಸ್ಥೆಗಳ ಕಾರ್ಯಾಧ್ಯಕ್ಷ ಶ್ರೀ ಗಣೇಶಮೋಹನ ಕಾಶಿಮಠ ಉದ್ಘಾಟಿಸಿದರು. ಮುಖ್ಯ ಅಭ್ಯಾಗತರಾಗಿ ಕಾರ್ಯದರ್ಶಿ ಶ್ರೀ ಶ್ರೀಕೃಷ್ಣ ನೀರಮೂಲೆ, ಕಾರ್ಯಾಲಯ ಕಾರ್ಯದರ್ಶಿ ಶ್ರೀ ಎಂ.ಟಿ.ಭಟ್ಟ , ಪ್ರಾಂಶುಪಾಲ ಡಾ.ಎ.ಈಶ್ವರಪ್ರಸಾದ್, ಕ್ರೀಡಾ ಸಂಘದ ನಿರ್ದೇಶಕ ಶ್ರೀ ಪ್ರವೀಣ್

Read More
ಪ್ರಗತಿ ವಿದ್ಯಾಲಯದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ಮೂರೂರು: ಇಲ್ಲಿಯ ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 11/03/19 ರ ಸೋಮವಾರದಂದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಭಾವನಾತ್ಮಕವಾಗಿ ನಡೆಯಿತು. ಗುರುವಂದನೆಯೊಂದಿಗೆ ಆರಂಭಗೊಂಡ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಶಿಕ್ಷಣ ಸಮಿತಿಯ ಸದಸ್ಯರಾದ ಶ್ರೀ ಟಿ ಆರ್ ಜೋಶಿಯವರು ವಹಿಸಿದ್ದರು. ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಅನಿಸಿಕೆಯೊಂದಿಗೆ ನೆನಪಿನ ಕಾಣಿಕೆಯನ್ನು ವಿದ್ಯಾರ್ಥಿಗಳು ಶಾಲೆಗೆ ಹಸ್ತಾಂತರಿಸಿದರು. ಮುಖ್ಯ ಗುರುಗಳಾದ ಶ್ರೀ ಎಮ್.ಜಿ. ಭಟ್ಟರು ಹಾಗೂ ಇತರ ಶಿಕ್ಷಕರು ಉಪಸ್ಥಿತರಿದ್ದರು. ಶ್ರೀಮತಿ ಜಯಶ್ರೀ ಭಟ್ಟರು ಸ್ವಾಗತಿಸಿದರೆ

Read More
ಮಾದಕವ್ಯಸನದ ಮಾರಕ ಪರಿಣಾಮದ ಕುರಿತು ಮಕ್ಕಳ ಜಾಗೃತಿ ಕಾರ್ಯಕ್ರಮ

ಬದಿಯಡ್ಕ: ರಾಜ್ಯ ಜನಮೈತ್ರಿ ಪೊಲೀಸ್ ಹಾಗೂ ಕೋಝಿಕ್ಕೋಡು ಸ್ವಾತಂನಂ ಟ್ರಸ್ಟ್ನಾ ನೇತೃತ್ವದಲ್ಲಿ ಮಾದಕ ವ್ಯಸನದ ಕುರಿತು ತಿಳುವಳಿಕೆ ಮೂಡಿಸುವ ಕಾರ್ಯಕ್ರಮವೂ ಇತ್ತೀಚಿಗೆ ಬದಿಯಡ್ಕ ಶ್ರೀಭಾರತಿ ವಿದ್ಯಾಪೀಠದಲ್ಲಿ ಅಲ್ಲಿಯ ಮಕ್ಕಳಿಗಾಗಿ ನಡೆಯಿತು. ಮಾದಕ ವ್ಯಸನದ ಬಗ್ಗೆ ಎಚ್ಚರಿಕೆ ಮೂಡಿಸುವ ಅಂಗವಾಗಿ ನಡೆಯ ಈ ಸಂದೇಶ ಯಾತ್ರೆಯಲ್ಲಿ ಪಾಲಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.   ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಯಾತ್ರೆಯ ಸಂಚಾಲಕ ಶ್ರೀ ಮೋಹನ್ ವಿದ್ಯಾರ್ಥಿಗಳು ಶಾಲೆಯ ಕ್ಯಾಂಪಸ್ ಹಾಗೂ ಇತರೆಡೆಗಳಲ್ಲಿ ಮಾದಕ ಪದಾರ್ಥಗಳನ್ನು ರಾಜಾರೋಷವಾಗಿ ಸೇವಿಸುತ್ತಿರುವುದು ಕಂಡುಬರುತ್ತಿದೆ.

Read More
ಶ್ರೀಭಾರತೀ ಸಮೂಹ ಸಂಸ್ಥೆಯಲ್ಲಿ ಮಹಿಳೋತ್ಸವ ದಿನ

  ನಂತೂರು : ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶಂಕರಶ್ರೀ ಸಭಾಭವನದಲ್ಲಿ ಶ್ರೀ ಭಾರತೀ ಪದವಿ ಕಾಲೇಜಿನ ಮಹಿಳಾ ಸಬಲೀಕರಣ ಘಟಕದ ವತಿಯಿಂದ ಮಹಿಳೋತ್ಸವದ ದಿನಾಚರಣೆಯು ನಡೆಯಿತು. ಅಭ್ಯಾಗತರಾಗಿ ಬಂದ ಶ್ರೀಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಹಿರಿಯ ಉಪನ್ಯಾಸಕಿ ಶ್ರೀಮತಿ ಸುಭದ್ರಾ ಭಟ್ಟ ಅವರು ಕ್ರಾಯಕ್ರಮವನ್ನು ಉದ್ಘಾಟಿಸಿ ಎಲ್ಲಾ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರ ಕಿರು ಪರಿಚಯವನ್ನು ನೀಡಿದರು.   ಶ್ರೀಭಾರತೀ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಈಶ್ವರ ಪ್ರಸಾದ ಆಲಂಗಾರು ಅವರು ಮಾತನಾಡಿ, ಕಾಲೇಜಿನಲ್ಲಿ ಮಹಿಳೆಯರಿಗೆ ಹೆಚ್ಚಿನ

Read More
* ಶ್ರೀಭಾರತೀ ಸಮೂಹ ಸಂಸ್ಥೆ ; ಟೆಕ್‌ಟಿಸ್-2019 ಕಾರ್ಯಕ್ರಮ*

ನಂತೂರು : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶಂಕರಶ್ರೀ ಸಭಾಭವನದಲ್ಲಿ ಶ್ರೀ ಭಾರತೀ ಪದವಿ ಕಾಲೇಜಿನ ಐಟಿ ಅಸೋಸಿಯೇಶನ್ ನೇತೃತ್ವದಲ್ಲಿ ಟೆಕ್‌ಟಿಸ್-2019 ಎಂಬ ಇಂಟರ್‌ಕ್ಲಾಸ್ ಸ್ಪರ್ಧಾವಳಿಯನ್ನು ಆಯೋಜಿಸಲಾಗಿತ್ತು. ಅಭ್ಯಾಗತರಾಗಿ ನಿಮಂತ್ರಿತರಾಗಿದ್ದ ಕಾಕುಂಜೆ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್ ಮೆನೇಜಿಂಗ್ ಡೈರೆಕ್ಟರ್ ಶ್ರೀ ಜಿ.ಕೆ.ಭಟ್ಟ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಸಂಘಟಿಸಿ, ನಿಭಾಯಿಸುವ ಮತ್ತು ಕಾಲೇಜಿನ ಇತರ ವಿಭಾಗದ ವಿದ್ಯಾರ್ಥಿಗಳಿಗೆ ಸರ್ಧೆ ಆಯೋಜನೆ ಅತ್ಯುತ್ತಮವಾಗಿದೆ. ಉಪನ್ಯಾಸಕರ ಬೆಂಬಲ, ಪ್ರೋತ್ಸಾಹ, ಮಾರ್ಗದರ್ಶನವೂ ಗಮನಾರ್ಹವಾಗಿದೆ. ಇಂತಹ ಕಾರ್ಯಕ್ರಮಗಳಿಗೆ ನಿರಂತರ ಬೆಂಬಲ

Read More
ಭಾರತೀ ಎಜುಕೇಶನ್ ಟ್ರಸ್ಟ್ : ಸ್ಕಾಲರ್‌ಶಿಪ್ ವಿತರಣೆ  

ನಂತೂರು : ಮಂಗಳೂರು ಹವ್ಯಕ ಸಭಾ ಪ್ರಾಯೋಜಿತ ಶ್ರೀ ಭಾರತೀ ಎಜುಕೇಶನ್ ಟ್ರಸ್ಟ್ ವತಿಯಿಂದ ಮಂಗಳೂರು ನಂತೂರು ಪದವು ಶ್ರೀ ಭಾರತೀ ಸಮೂಹ ಸಂಸ್ಥೆಗಳ 6 ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಿಸಲಾಯಿತು.   ಶ್ರೀ ಭಾರತೀ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಶ್ರೀ ಶ್ಯಾಮಸುಂದರ ಭೀಮಗುಳಿ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ರಾಜ್ಯದ ವಿವಿಧ ಭಾಗಗಳ ವಿದ್ಯಾರ್ಥಿಗಳು ಶ್ರೀ ಭಾರತೀ ಸಮೂಹ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಿಸಲಾಗುತ್ತಿದೆ. ಈ ಮೂಲಕ ಅರ್ಹ ಫಲಾನುಭವಿಗಳಿಗೆ ತಲುಪುತ್ತದೆ ಎಂದು

Read More
ಶ್ರೀಭಾರತೀವಿದ್ಯಾಪೀಠದ ಮಕ್ಕಳಿಗೆ ಬೀಳ್ಕೊಡುಗೆ ; ಸ್ಪಂದನ’

ಬದಿಯಡ್ಕ: ಇತ್ತೀಚೆಗೆ ಇಲ್ಲಿನ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಹತ್ತನೆಯ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಸ್ಪಂದನ ನಡೆಯಿತು.   ಅಭ್ಯಾಗತರಾಗಿ ಆಗಮಿಸಿದ ಸಿಂಡಿಕೇಟ್ ಬೇಂಕ್ ನ ನಿವೃತ್ತ ಪ್ರಬಂಧಕರಾದ ಶ್ರೀ ವೆಂಕಟೇಶ್ವರ ಭಟ್ಟ ಅವರು, ಶಾಲೆಯ ಪರವಾಗಿ ಮಕ್ಕಳಿಗೆ ಜ್ಞಾನದ ಪ್ರತೀಕವಾದ ಬೆಳಗುತ್ತಿರುವ ದೀಪವನ್ನು ನೀಡಿ ಮಾತನಾಡಿದರು. ಅಂಕ ಗಳಿಸುವುದೊಂದೇ ವಿದ್ಯಾರ್ಥಿಗಳ ಧ್ಯೇಯವಾಗಿರದೆ ಸರಳತೆ,ಸಭ್ಯತೆ, ಸ್ವಚ್ಛತೆ, ಬದ್ಧತೆ ಹಾಗೂ ಪ್ರೀತಿ ಎಂಬ ಪಂಚ ಸೂತ್ರಗಳನ್ನು ಅಳವಡಿಸಿ ಜೀವನ ಸಾಗಿಸಿ ಗುರಿ ತಲುಪಬೇಕು. ಸಾಗಿ ಬಂದ ದಾರಿಯನ್ನು ಮರೆಯಬಾರದು.

Read More
ಮೈಸೂರಿನಲ್ಲಿ ಆರ್ಷಶಿಕ್ಷಣ ಶಿಬಿರ : ಬೇಸಿಗೆ ರಜೆಯಲ್ಲಿ ಭಾರತೀಯತೆಯ ಪಾಠ

ಆತ್ಮೀಯ ಧರ್ಮಬಂಧುಗಳೇ, ನಮ್ಮ ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಪರಿಚಯವು ಆಗಬೇಕಾದದ್ದು ಅತ್ಯಂತ ಅಗತ್ಯ. ಈ ಶ್ರೀಮಂತ ಸಂಸ್ಕೃತಿಯ ಪರಿಚಯವನ್ನು ಮಾಡಿಕೊಡುವುದೇ ನಾವು ನಮ್ಮ ಮಕ್ಕಳಿಗೆ ಮಾಡಬಹುದಾದ ದೊಡ್ಡ ಉಪಕಾರ. ಆದರೆ ಈ ಸಂಸ್ಕೃತಿಯ ಪರಿಚಯವನ್ನು ಕೊಡುವುದು ಹೇಗೆ?   ಇಲ್ಲಿದೆ ಪರಿಹಾರ: ಮೈಸೂರಿನ ಬ್ರಹ್ಮ ಸಂಸತ್ ಸಂಸ್ಥೆಯು, ಭಾರತೀ ಯೋಗಧಾಮ ಈ ಸಂಸ್ಥೆಯ ಸಹಯೋಗದೊಂದಿಗೆ ಡಾ. ಶ್ರೀ ಶಂಕರನಾರಾಯಣ ಜೋಯಿಸ್ ರವರ ನೇತೃತ್ವದಲ್ಲಿ ಆರ್ಷ ಶಿಕ್ಷಣ ಶಿಬಿರವನ್ನು ಆಯೋಜಿಸಿದೆ. ಯಾವಾಗ? ಏಪ್ರಿಲ್ 26ರಿಂದ ಮೇ 10ರ ವರೆಗೆ

Read More
ಸ್ಕೌಟ್ ಮತ್ತು ಗೈಡ್ ಸ್ಥಾಪಕ ಬೇಡನ್ ಪವೆಲ್ ಜನ್ಮದಿನದ ಅಂಗವಾಗಿ ಸ್ಪಂದನ ಕಾರ್ಯಕ್ರಮ

  ಮುಜುಂಗಾವು: ದಿನಾಂಕ 22.2.2019ರಂದು ಸ್ಕೌಟ್ ಮತ್ತು ಗೈಡ್ ಸ್ಥಾಪಕ ಬೇಡನ್ ಪವೆಲ್ ರ ಜನ್ಮದಿನದ ನೆನಪಿಗಾಗಿ ಕಾಸರಗೋಡು ಜಿಲ್ಲಾ ಸ್ಕೌಟ್ ಮತ್ತು ಗೈಡ್ ಹಾಗೂ ವಿದ್ಯಾಪೀಠದ ಸಹಯೋಗದಲ್ಲಿ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ಸ್ಪಂದನ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ನಿಮಿತ್ತ ಬೇಡನ್ ಪವೆಲ್ ರ ನೆನಪಿನಲ್ಲಿ ಸಮೀಪದ ಶ್ರೀ ಅಪ್ಪು ಪಾಟಾಳಿಯವರ ಮಗ ದೃಷ್ಠಿ ಹೀನ ಯುವಕನಿಗೆ ಧನಸಹಾಯ ಮಾಡಲಾಯಿತು. ಕಾಸರಗೋಡು ಜಿಲ್ಲಾ ಸ್ಕೌಟ್ ಗೈಡ್ ನಿರ್ದೇಶಕರಾದ ಶ್ರೀ ಕಿರಣಪ್ರಸಾದ್ ಮಾತನಾಡಿ, ಸ್ಕೌಟ್ ಗೈಡ್ ನಮಗೆ ಮಾನವೀಯತೆಯನ್ನು

Read More
ಕುಮಟಾ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನ : ಮೂರೂರು ಪ್ರಗತಿ ಶಾಲೆಯ ವಿದ್ಯಾರ್ಥಿಗಳು ಭಾಗಿ

ಕುಮಟಾ: ಕುಮಟಾ ತಾಲೂಕಿನ 7ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ದಿನಾಂಕ 16.02.19 ಮತ್ತು 17.02.19ರ ಶನಿವಾರ ಹಾಗೂ ಭಾನುವಾರದಂದು ಕತಗಾಲ್ ಎಸ್.ಕೆ.ಪಿ. ಶಾಲೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಕು. ರಾಮಕೃಷ್ಣ ಭಟ್ಟ, ಕು. ನೇಹಾ ಭಟ್ಟ ಮತ್ತು ಕು. ಸ್ವಾತಿ ಭಟ್ಟ ಮಕ್ಕಳ ಕವಿ ಗೋಷ್ಠಿಯಲ್ಲಿ ಸ್ವರಚಿತ ಕವನ/ಚುಟುಕು ವಾಚನ ಮಾಡಿದರು.   ಕು. ಸಂಜ್ಞಾ ಭಟ್ಟ ಮತ್ತು ಕು.ಸ್ವಾತಿ ಭಟ್ಟ ಕಥಾಸ್ಪರ್ಧೆಯಲ್ಲಿ ಭಾಗವಹಿಸಿ, ಮೊದಲನೆಯ ಹಾಗೂ

Read More
ಹುತಾತ್ಮ ಯೋಧರ ದಿವ್ಯಾತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ

ಬದಿಯಡ್ಕ : ಇಲ್ಲಿನ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಇತ್ತೀಚೆಗೆ ಉಗ್ರರ ವಿಕೃತ ಅಟ್ಟಹಾಸಕ್ಕೆ ಬಲಿಯಾದ ಮುಗ್ಧ ಯೋಧರ ದಿವ್ಯಾತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ಶ್ರೀ ಜಯಪ್ರಕಾಶ್ ಪಜಿಲ ಇವರು ಉಗ್ರಗಾಮಿಗಳ ಕ್ರೂರಕೃತ್ಯಗಳ ಸಂಪೂರ್ಣ ಚಿತ್ರಣವನ್ನು ಮಕ್ಕಳ ಮುಂದಿಟ್ಟು ಸಭೆಯನ್ನುದ್ದೇಶಸಿ ಮಾತನಾಡಿ “ದೇಶಕ್ಕಾಗಿ ಬಲಿಯಾದ ಯೋಧರ ತ್ಯಾಗವನ್ನು ಸ್ಮರಿಸುತ್ತಾ ಅವರ ಆತ್ಮಕ್ಕೆ ಚಿರಶಾಂತಿ ಕೋರೋಣ, ಅವರ ಕುಟುಂಬ ಸದಸ್ಯರ ನೋವಲ್ಲಿ ಭಾಗಿಯೋಗೋಣ . ಮುಂದೆಂದೂ ಇಂತಹ ಉಗ್ರರು ಹುಟ್ಟದೇ ಇರಲಿ. ಯುವಜನಾಂಗ ಹೆಚ್ಚಿನ

Read More
ಕು. ರಂಜನಾ ಹೆಗಡೆ ಗುಂಡೂಮನೆ ; ಸ್ನಾತಕೋತ್ತರ ಪದವಿಯಲ್ಲಿ ದ್ವಿತೀಯ ಸ್ಥಾನ

ರಾಮಚಂದ್ರಾಪುರ ಮಂಡಲ ಅಧ್ಯಕ್ಷರು, ಪತ್ರಕರ್ತರೂ ಆದ ರಮೇಶ್ ಹೆಗಡೆ ಗುಂಡೂಮನೆ ಹಾಗೂ ಶಿಕ್ಷಕಿ ಜಯಂತಿ ಹೆಗಡೆ ಯವರ ಪುತ್ರಿ ರಂಜನಾ ಹೆಗಡೆ ಸ್ನಾತಕೋತ್ತರ ಪರಿಸರ ವಿಜ್ಞಾನ ವಿಷಯದಲ್ಲಿ ಎಂ.ಎಸ್ಸಿ. ಪದವಿ ಪರೀಕ್ಷೆಯಲ್ಲಿ ಯಲ್ಲಿ ಶಿವಮೊಗ್ಗೆಯ ಕುವೆಂಪು ವಿಶ್ವವಿದ್ಯಾಲಯಕ್ಕೆ 2ನೆಯ Rank ಪಡೆದಿರುತ್ತಾಳೆ.   ಉತ್ತಮ ಸಾಧನೆ ಮಾಡಿದ ರಂಜನಾ ಹೆಗಡೆ ಗುಂಡೂಮನೆ, ಮತ್ತು ಪೋಷಕರಿಗೆ ಸದಾ ಗುರುದೇವತೆಗಳ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇವೆ.

Read More
ಮುಜುಂಗಾವು ವಿದ್ಯಾಪೀಠದ ಮಕ್ಕಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಆಡಳಿತಾಧಿಕಾರಿ ಶ್ಯಾಂಭಟ್

ಮುಜುಂಗಾವು: ಮುಜುಂಗಾವು ವಿದ್ಯಾಪೀಠದ ಆಡಳಿತಾಧಿಕಾರಿಗಳಾದ ಶ್ರೀಯುತ ಶ್ಯಾಂ ಭಟ್ ದರ್ಭೆಮಾರ್ಗರವರು ದಿನಾಂಕ 19-2-2019 ನೇ ಮಂಗಳವಾರ ತಮ್ಮಹುಟ್ಟಿದ ಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ಮುಜುಂಗಾವು ವಿದ್ಯಾಪೀಠದ ಮಕ್ಕಳಿಗೆ, ಶಿಕ್ಷಕರಿಗೆ, ಹಾಗೂ ಇತರ ಸಿಬ್ಬಂದಿಗಳಿಗೆ ಶ್ರೀಯುತರು ಪಾಯಸ,ಭಕ್ಷ್ಯ ಸಹಿತ ಸಿಹಿಯೂಟ ನೀಡಿದರು.   ಇದೇ ದಿನದಂದು ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನವೂ ಆಗಿದೆ. ಭಾರತದ ಇತಿಹಾಸದ ಆ ಮೇರು ಚಕ್ರವರ್ತಿಯನ್ನು ಮಕ್ಕಳಿಗೆ ನೆನಪಿಸಿ ಕೊಟ್ಟ ಶ್ರೀಯುತರು ಮಕ್ಕಳು ಹಾಗೂ ಶಿಕ್ಷಕರಿಗೂ ಪೆನ್ನುಗಳನ್ನು ವಿತರಿಸಿದರು.  

Read More
ಶ್ರೀಭಾರತೀ ವಿದ್ಯಾಲಯದ ವಾರ್ಷಿಕೋತ್ಸವ : ಹುತಾತ್ಮರಾದ ಯೋಧರಿಗೆ ಗೌರವ ನಮನ

ಬೆಂಗಳೂರು: ಮಹಾನಗರದ ಹಂಪಿನಗರದಲ್ಲಿನ ಶ್ರೀಭಾರತೀ ವಿದ್ಯಾಲಯದಲ್ಲಿ ಶಾಲಾ ವಾರ್ಷಿಕೋತ್ಸವವು ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯಾಶೀರ್ವಾದದೊಂದಿಗೆ ನೆರವೇರಿತು.   ಶ್ರೀಮಠದ ಪರಂಪರೆಯಂತೆ ಗುರುವಂದನೆಯ ಅನಂತರ ಪ್ರತಿ ವರ್ಷದಂತೆ ನಿರ್ದಿಷ್ಟ ಥೀಮ್ ಆಧಾರಿತ ಮನರಂಜನಾ ಕಾರ್ಯಕ್ರಮದಲ್ಲಿ ಈ ಬಾರಿ ಭಾರತೀಯ ಹಬ್ಬಗಳು ಎಂಬ ವಿಷಯದಲ್ಲಿ ಚಿಣ್ಣರು ಬಣ್ಣ ಬಣ್ಣದಕಾ ರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.   ೩ ರಿಂದ ೧೦ ನೇ ತರಗತಿಯ ವಿದ್ಯಾರ್ಥಿಗಳಿಂದ ನೃತ್ಯ, ನಾಟಕ, ಪುಟಾಣಿ ಮಕ್ಕಳು ಪ್ರಾರ್ಥನಾ ಸ್ತೋತ್ರವನ್ನು ಹಾಡಿದರು. ವೇದಿಕೆಯಲ್ಲಿ ಶ್ರೀಸಂಸ್ಥಾನದವರ ಭಾವಚಿತ್ರಗಳೊಂದಿಗೆ, ದೀಪೋಜ್ವಲನ ಮಾಡಲಾಯಿತು.   ಹುತಾತ್ಮರಾದ

Read More
ಪರೀಕ್ಷಾ ಸಿದ್ಧತಾ ಕಾರ್ಯಾಗಾರ

ಮುಳ್ಳೇರಿಯ: ಶ್ರೀಸಂಸ್ಥಾನದವರ ದಿವ್ಯ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುವ ಹವ್ಯಕ ಮಹಾಮಂಡಲದ ಮುಳ್ಳೇರಿಯ ಮಂಡಲ ವಿದ್ಯಾರ್ಥಿವಾಹಿನಿಯ ಸಹಕಾರದೊಂದಿಗೆ 15.02.2019, ಶುಕ್ರವಾರದಂದು ಪರೀಕ್ಷೆ-ನಿರೀಕ್ಷೆ ಕಾರ್ಯಗಾರ ನಡೆಯಿತು. ಜಾಲ್ಸೂರಿನ ಈಶ್ವರಮಂಗಲ ವಲಯದ ವಿನೋಬನಗರ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ‘ಪರೀಕ್ಷೆಗಳಲ್ಲಿ ಧನಾತ್ಮಕ ಉತ್ತರಿಸುವಿಕೆ’ ಎಂಬ ವಿಷಯದ ಕುರಿತು ತರಬೇತಿ ನೀಡಿ ಮಾತನಾಡಿದ ವಿಶ್ರಾಂತ ಪ್ರಾಂಶುಪಾಲ ಶ್ರೀ ಯು. ಎಸ್. ವಿಶ್ವೇಶ್ವರ ಭಟ್ , ಸಕಾರಾತ್ಮಕ ಚಿಂತನೆ, ಸಕಾರಾತ್ಮಕ ಪ್ರಶ್ನೆಪತ್ರಿಕೆಯ ಅಧ್ಯಯನ, ಸಕಾರಾತ್ಮಕ ಉತ್ತರ ಬರೆಯುವಿಕೆಗಳಿಂದ

Read More
ಗುರುಕುಲ ವಿದ್ಯಾರ್ಥಿಗಳಿಂದ ಯೋಧರಿಗೆ ಶ್ರದ್ಧಾಂಜಲಿ

ಹೊಸನಗರ: ಹೊಸನಗರದ ರಾಮಚಂದ್ರಾಪುರ ಮಠದ ಶ್ರೀಭಾರತೀ ಗುರುಕುಲಮ್ ನಲ್ಲಿ 16.02.2019ರ ಶನಿವಾರದಂದು ವಿದ್ಯಾರ್ಥಿಗಳು ದೀಪ ಬೆಳಗಿ ಯೋಧರಿಗೆ ಶ್ರದ್ಧಾಂಜಲಿ ಸಮರ್ಪಿಸಿದರು.   14.02.2019ರಂದು ನಡೆದ ಹಿಂಸೆ ರಾಕ್ಷಸೀ ಕೃತ್ಯವೆಂದು ಶ್ರೀ ಸತೀಶ ಆರ್ಯ ಬಣ್ಣಿಸಿದರು. ಶ್ರೀ ಸದಾನಂದ ಆರ್ಯ ಆ ಯೋಧರ ಕುಟುಂಬಗಳ ಪರಿಸ್ಥಿತಿಗಳನ್ನು ಮನವರಿಕೆ ಮಾಡಿಕೊಟ್ಟರು.   ಪ್ರಧಾನಾಚಾರ್ಯ ಶ್ರೀ ಆ. ವಿ. ಗಜಾನನ ಭಟ್ಟ ಮಾತನಾಡಿ, ಭಾರತವನ್ನು ದೇಹವಾಗಿ ಭಾವಿಸಿದರೆ ಸೇನೆ ಬಾಹುವಿದ್ದಂತೆ. ದೇಹದ ಯಾವ ಅಂಗಕ್ಕೆ ಕ್ಷತಿಯಾದರೂ ಇಡೀ ದೇಹ ಸ್ಪಂದಿಸುತ್ತದೆ. ಅಂತೆಯೇ

Read More