ಲೇಖನ
ಮಂತ್ರಾಕ್ಷತೆ !!!ಏನಿದರ ಪವಾಡ !!
ಅಚ್ಚರಿ ಆದರೂ ಇದು ನಿಜ !!ಮಾಣಿ ಮಠದ ವಾರ್ಷಿಕೋತ್ಸವ . ಬೆಳಗ್ಗೆ ಹತ್ತುಗಂಟೆಗಾಗಲೇ ತುಂಬಿ ತುಳುಕಿದ ಜನ ಭವನ ! ನಿತ್ಯ ಪೂಜೆ , ಅನುಷ್ಠಾನ ಪೂರೈಸಿ ವೇದಿಕೆಯತ್ತ ಗುರುಗಳ ಆಗಮನ . ಮತ್ತೆರಡು ಜನಭವನ ತುಂಬುವಷ್ಟು ಶಿಷ್ಯರು ಹೊರಾಂಗಣದಲ್ಲಿ !! ಗುರುಗಳನ್ನು ಕಣ್ಣಲ್ಲಿ ತುಂಬಿಕೊಳ್ಳಲು ಕಾತರ , ಮಂತ್ರಾಕ್ಷತೆ ಪಡಕೊಳ್ಳುವ ಆತುರ ! ಎಲ್ಲರ ಬಾಯಲ್ಲೂ ಮಂತ್ರಾಕ್ಷತೆ ಎಷ್ಟು ಹೊತ್ತಿಗೆ ಎಂಬ ಪ್ರಶ್ನೆ !! ಮಂತ್ರಾಕ್ಷತೆಗೆ ಸರತಿಯ ಸಾಲಿಗೆ ಬನ್ನಿ ಎಂಬ ಕರೆ ಬಂದಾಗ ಎಲ್ಲರ
Read Moreಶ್ರೀಗುರುಗಳ ಅಭಯ ಬದುಕಿನ ಭರವಸೆ – ಅನಸೂಯಾ ಗಣಪತಿ ಅವಧಾನಿ ಹೊನ್ನಾವರ
ಗೋಮಾತೆಯ ಸೇವೆಯ ಜೊತೆಗೆ ಶ್ರೀಮಠದ ಸೇವೆಯಲ್ಲಿಯೂ ತೊಡಗಿಸಿಕೊಂಡು, ಸಮರ್ಪಣಾ ಭಾವದಿಂದ, ಸದ್ದಿಲ್ಲದ ಸೇವೆಯಲ್ಲಿ ನಿರತರಾಗಿ ಪುನೀತಭಾವ ತಳೆದವರು ಕುಮಟಾ ಮಂಡಲ, ಹೊನ್ನಾವರ ವಲಯದ ಉದಯಗಿರಿಯ ಗಣಪತಿ ಅವಧಾನಿಯವರ ಪತ್ನಿ ಅನಸೂಯಾ ಅವಧಾನಿ. ಕುಮಟಾ ಸಮೀಪ ಅಂತರವಳ್ಳಿಯ ಪರಮೇಶ್ವರ ಹೆಗಡೆ, ಯೆಂಕಿಯಮ್ಮ ಅವರ ಪುತ್ರಿಯಾದ ಅನಸೂಯಾ ಅವಧಾನಿ ಶ್ರೀಮಠದ ಸೇವೆಯನ್ನು ಜೀವನದ ಒಂದು ಭಾಗವಾಗಿ ಪರಿಗಣಿಸಿದವರು. ಬಾಲ್ಯದಿಂದಲೇ ಹಸುಗಳ ಒಡನಾಟದಲ್ಲಿ ಬೆಳೆದ ಇವರಿಗೆ ಗೋಮಾತೆಯ ಮೇಲೆ ವಿಶೇಷ ಪ್ರೀತಿ. ಮಾತೃತ್ವಮ್ ಯೋಜನೆಯ ಮೂಲಕ ಗೋಮಾತೆಯ ಸೇವೆಯನ್ನು
Read Moreಹವಿ ಸವಿ ತೋರಣ – ೧೭ ಸೂರ್ಯ ದೇವರ ಆರಾಧನೆಯ ಪುಣ್ಯಪರ್ವ – ಮಕರ ಸಂಕ್ರಾಂತಿ
ನಮ್ಮ ಭಾರತೀಯ ಸಂಸ್ಕೃತಿಲಿ ಹಬ್ಬಂಗೊ ಹೇಳಿದರೆ ಬರೀ ಸಂಭ್ರಮದ ದಿನoಗೊ ಅಲ್ಲ, ಸಂತೋಷದ ಪ್ರದರ್ಶನ ಅಲ್ಲ, ನಮ್ಮ ನಿತ್ಯ ಜೀವನ, ಪ್ರಕೃತಿ ಮತ್ತೆ ನಮ್ಮ ಧರ್ಮ. ಈ ಮೂರುದೆ ಒಟ್ಟಿಂಗೆ ಸೇರಿಬಪ್ಪ ಧಾರ್ಮಿಕ ಆಚರಣೆ. ನವರಾತ್ರಿ, ದೀಪಾವಳಿ ಎಲ್ಲ ಇಪ್ಪಾಂಗೆ ಸಂಕ್ರಾಂತಿ ಹಬ್ಬವುದೆ ಒಂದು ಹಬ್ಬ. ನಮ್ಮ ಇತ್ಲಾಗಿ ಮೊದಲಿಂಗೆ ಈ ಆಚರಣೆ ಕಮ್ಮಿಯಾದರೂ ಇಂದು ನಮಗೂ ಈ ಹಬ್ಬದ ಮಹತ್ವ ಗೊಂತಿದ್ದು. ಬೆಣಚ್ಚು, ಭೂಮಿ, ಗೋಮಾತೆ, ಕೃಷಿ ಇದಕ್ಕೆಲ್ಲ ಸಂಬಂಧಪಟ್ಟ ಹಬ್ಬ ಇದು. ಸಂಕ್ರಾಂತಿ ಹೇಳಿದರೆ
Read More‘ಗೋಮಾತೆಯ ಸೇವೆಯಲ್ಲಿ ಗುರುಕೃಪೆಯ ಧನ್ಯತೆ’ – ಪ್ರೀತಿಶ್ರೀ ಮಂಜುನಾಥ್ ಉಡುಪಿ
” ಶ್ರೀಮಠದ ಸೇವೆ ನಮ್ಮ ಉಸಿರಲ್ಲಿ ಬೆರೆತು ಹೋಗಿದೆ. ಶ್ರೀಮಠದ ಎಲ್ಲಾ ಸೇವೆಗಳಿಗೂ ನಾವು ಕೈಜೋಡಿಸುತ್ತೇವೆ. ಗುರುಸೇವೆ ಮತ್ತು ಗೋಸೇವೆ ನಮ್ಮ ಜೀವನದ ಒಂದು ಭಾಗವಾಗಿದೆ. ಗುರುಕೃಪೆಯೇ ನಮ್ಮ ಬದುಕಿಗೆ ಆಧಾರ. ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಎಲ್ಲವೂ ದೊರಕಿದ್ದು ಗುರು ಅನುಗ್ರಹದಿಂದ ” ಎಂದು ಹೃದಯ ತುಂಬಿ ನುಡಿದವರು ಹೊನ್ನಾವರ ಸಮೀಪದ ಕೊಂಡದಕುಳಿಯ ಪ್ರಸ್ತುತ ಮಂಗಳೂರು ಮಂಡಲ ಉಡುಪಿ ವಲಯ ನಿವಾಸಿಗಳಾಗಿರುವ ಮಂಜುನಾಥ ಹೆಗಡೆಯವರ ಪತ್ನಿ ಪ್ರೀತಿಶ್ರೀ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸಮೀಪ
Read Moreಶ್ರೀಗುರುಸೇವೆಯ ಹಾದಿಯಲ್ಲಿ ನೆಮ್ಮದಿ ಕಂಡ ಬದುಕು – ಪುಷ್ಪಾ ಖಂಡಿಗೆ
” ಗೋಸೇವೆ, ಶ್ರೀಮಠದ ಸೇವೆ ಎಂಬುದು ಪ್ರಸಿದ್ಧಿಗಾಗಿ ಅಲ್ಲ, ಮನದ ನೆಮ್ಮದಿಗಾಗಿ. ಸಾರ್ಥಕ ಭಾವಕ್ಕಾಗಿ. ಶ್ರೀಗುರುಗಳ ಅನುಗ್ರಹದ ಚೈತನ್ಯದ ಬೆಳಕಿನಲ್ಲಿ ಗೋಮಾತೆಯ ಸೇವೆ ಮಾಡಿದೆ. ಇದರಿಂದಾಗಿ ಬದುಕಿನಲ್ಲಿ ನೆಮ್ಮದಿ, ಶಾಂತಿ ನೆಲೆಸಿದೆ. ಸಮಾಜದ ಒಳಿತನ್ನೇ ಬದುಕಿನ ಧ್ಯೇಯವನ್ನಾಗಿರಿಸಿದ ಶ್ರೀಗುರುಗಳ ಮಾರ್ಗದರ್ಶನವೇ ಬದುಕಿಗೆ ಪ್ರೇರಣೆ ” ಎಂದವರು ಮಂಗಳೂರು ಮಂಡಲ ದಕ್ಷಿಣ ವಲಯದ ಕದ್ರಿ ಸಮೀಪದ ಡಾ. ಕೃಷ್ಣ ಭಟ್ ಖಂಡಿಗೆ ಇವರ ಪತ್ನಿ ಪುಷ್ಪಾ. ಪುತ್ತೂರು ಸಮೀಪದ ಕಾನಾವು ನರಸಿಂಹ ಭಟ್, ಶಾರದಮ್ಮ ದಂಪತಿಗಳ ಪುತ್ರಿಯಾದ ಇವರು
Read Moreಹವಿ ಸವಿ ತೋರಣ – ೧೬ ನೀರೆಯ ನೀರಿನ ಪ್ರಪಂಚ
ಉದಿಯಪ್ಪಗ ಬೇಗ ಎದ್ದು ಸೂರ್ಯೋದಯದ ಹೊತ್ತಿಂಗೆ ಒಂದರಿಯಾಣ ಕೆಲಸ ಮುಗಿಶಿಕ್ಕಿ ಬಾವಿಂದ ನೀರೆಳವದು ಎನ್ನ ಅಭ್ಯಾಸ. ಅಷ್ಟೊತ್ತಿಂಗೆ ಸೂಯ೯ ಉದಿಸಿ ಬಂದಿರ್ತಾಯಿಲ್ಲೆ. ಆ ಹೊತ್ತಿಂಗೆ ಮೂಡ ಹೊಡೆಯಾಣ ಆಕಾಶ ನೋಡ್ಲೆ ಅದೆಷ್ಟು ಚೆಂದ..! ಕೆಂಪು, ಅರಶಿನ, ನೀಲಿ, ಕೇಸರಿ ಹೇಳಿ ಬೇರೆ ಬೇರೆ ಬಣ್ಣಂಗೊ ಒಟ್ಟಿಂಗೆ ಆಕಾಶಲ್ಲಿ ಹೊಳವದು ಕಾಂಬಗ ಸೂರ್ಯ ದೇವರ ಎದುರುಗೊಂಬಲೆ ಆಕಾಶದ ಬಾಗಿಲ ಬುಡಲ್ಲಿ ರಂಗೋಲಿ ಹಾಕಿದಾಂಗೆ ಕಾಂಬದು. ಬಾವಿಗೆ ಕೊಡಪ್ಪಾನ ಇಳಿಶಿಕ್ಕಿ ರಜ ರಜ ಹೊತ್ತು ಅತ್ಯಾಗಿತ್ಲಾಗಿ ನೋಡುದು ದಿನಚರಿಯ
Read More” ಗೋಮಾತೆಯ ಸೇವೆಯಲ್ಲಿ ಧನ್ಯತಾಭಾವವಿದೆ ” – ವಿಜಯಲಕ್ಷ್ಮೀ ಕಾಯರ್ಮಜಲು
” ಗೋವು ನಮ್ಮ ಜೀವನದ ಅವಿಭಾಜ್ಯ ಅಂಗ. ಗೋವನ್ನು ಆಧರಿಸಿದ ಜೀವನ ಕ್ರಮ ನಮ್ಮ ಸಂಸ್ಕೃತಿಯಲ್ಲಿ ಸೇರಿಕೊಂಡಿದೆ. ಆದರೆ ಇಂದು ಮನೆಗಳಲ್ಲಿ ಗೋವನ್ನು ಸಾಕುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಮಕ್ಕಳಿಗೆ ಗೋವಿನ ಬಗ್ಗೆ ಪ್ರೀತಿ ಇದ್ದರೂ ಅವುಗಳ ಜೊತೆ ಒಡನಾಡುವ ಅವಕಾಶ ದೊರಕುತ್ತಿಲ್ಲ. ಶ್ರೀಗುರುಗಳ ಮಹತ್ವಪೂರ್ಣ ಯೋಜನೆಯಾದ ಮಾತೃತ್ವಮ್ ಮೂಲಕ ಗೋಪ್ರೇಮಿಗಳಿಗೆ ದೇಶೀಯ ಹಸುಗಳ ಸೇವೆ ಮಾಡಲು ಸುಲಭವಾಗಿ ಅವಕಾಶ ಒದಗಿ ಬಂದಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಗೋಮಾತೆಯ ಸೇವೆಯನ್ನು ಮಾಡಿ ಧನ್ಯತೆಯನ್ನು ಪಡೆಯಬಹುದು ” ಎಂದವರು
Read Moreಹವಿ ಸವಿ ತೋರಣ – ೧೫ ಚಳಿಗಾಲದ ಬೆಚ್ಚನೆಯ ನೆಂಪುಗೊ
ಚಳಿಕಾಲ ಹೇಳಿ ಹೇಳುಗಳೇ ಮನಸ್ಸಿಂಗೆ ಒಂದುರೀತಿಯ ತಂಪು ತಂಪು ಅನುಭವ ಅಪ್ಪದು. ಹಳೆ ನೆಂಪುಗಳ ಪೆಟ್ಟಿಗೆಯ ಮುಚ್ಚಲು ತೆಗದರೆ ಚಳಿಕಾಲದ ಕತೆಗೊ ಸುಮಾರಿದ್ದು. ಚಳಿಕಾಲ ಹೇಳಿದರೆ ಧನು ಮಕರ ತಿಂಗಳಿನ ಸಮಯ. ತೋಟದ ಅಡಕ್ಕೆ ಎಲ್ಲ ಹಣ್ಣಾಗಿ ಬೀಳುವ ಕಾಲ. ಚಳಿಯ ಹನಿ ಪರದೆಯ ನಡೂಕೆ ಬೆಚ್ಚಂಗೆ ಕಂಬಳಿ ಹೊದಕೊಂಡು ಮನುಗುಲೆ ಮನಸ್ಸು ಆಶೆಪಡುವ ಉದೆಕಾಲದ ಹೊತ್ತಿನ ನೆಂಪೇ ಒಂದು ಮಧುರ ಅನುಭೂತಿ. ಹೊಗೆ ತುಂಬಿದ ಹಾಂಗೆ ಕಾಂಬ ಹನಿಯ ಪರದೆಯ ಎಡೇಲಿ ಸೂರ್ಯನ ಚಿನ್ನದ
Read More‘ ಗೋ ಉತ್ಪನ್ನಗಳ ಬಳಕೆಯಿಂದ ಪರಿಸರ ಸಂರಕ್ಷಣೆ ಸಾಧ್ಯ ‘ – ಕಮಲಾ ಮಂಜುನಾಥ ಹೆಗಡೆ ಕಡತೋಕ
” ಗೋಮಾತೆಯ ಒಡನಾಟ ನಮ್ಮಲ್ಲಿ ಸದಾ ಧನಾತ್ಮಕ ಅನುಭೂತಿಯನ್ನು ತುಂಬುತ್ತದೆ. ಗೋಮಾತೆಯ ಉತ್ಪನ್ನಗಳೆಲ್ಲವೂ ಮಂಗಳದಾಯಕ. ಪವಿತ್ರ ಹಾಗೂ ಪರಿಶುದ್ಧತೆಯ ಭಾವದಿಂದ ಅದನ್ನು ಬಳಸಬೇಕು. ದೇಶೀ ಗೋ ಉತ್ಪನ್ನಗಳ ನಿತ್ಯ ಉಪಯೋಗದಿಂದ ನಮ್ಮ ಪರಿಸರವೂ ಪರಿಶುದ್ಧಿಯಿಂದ ಕೂಡಿರುತ್ತದೆ. ಮಾತೃತ್ವಮ್ ಯೋಜನೆಯ ಮೂಲಕ ಶ್ರೀಗುರುಗಳು ತೋರಿದ ಗೋಮಾತೆಯ ಸೇವೆಯಲ್ಲಿ ಕೈಜೋಡಿಸುವ ಅವಕಾಶ ದೊರಕಿದ್ದು ಸುಕೃತ. ಮಾತೃತ್ವಮ್ ಯೋಜನೆಯಿಂದ ದೇಶೀಯ ಹಸುಗಳ ಮಹತ್ವವನ್ನು ಜನರು ಅರಿತು ಕೊಳ್ಳುತ್ತಿದ್ದಾರೆ ” ಎಂದವರು ಕುಮಟಾ ಮಂಡಲ, ಕೆಕ್ಕಾರು ವಲಯದ ಕಡತೋಕ ಹೆಗಡೆ ಮನೆಯ
Read Moreಹವಿ – ಸವಿ ತೋರಣ ೧೪ ಧನು ತಿಂಗಳ ವಿಶೇಷ
ನಮ್ಮ ಸಂಸ್ಕೃತಿಲಿ ಪ್ರತಿಯೊಂದು ತಿಂಗಳಿಂಗು ಒಂದೊಂದು ವಿಶೇಷತೆಗೊ ಇದ್ದು. ಅಂದರೂ ಧನು ತಿಂಗಳಿಂಗೆ ಮತ್ತೂ ವಿಶೇಷತೆ ಇದ್ದು. ಚಾಂದ್ರಮಾನ ತಿಂಗಳಿನ ಮಾರ್ಗಶಿರದ ಹಾಂಗೇ ಸೌರಮಾನದ ಧನು ತಿಂಗಳು. ಶ್ರೀಕೃಷ್ಣ ದೇವರು ಅರ್ಜುನಂಗೆ ಗೀತೋಪದೇಶ ಮಾಡಿ ಮಾರ್ಗಶಿರ ಮಾಸ ಅತ್ಯಂತ ಪವಿತ್ರ ಹೇಳಿ ಗೀತೆಲಿ ಹೇಳಿದ್ದ°. ಚಾಂದ್ರಮಾನದ ಮಾರ್ಗಶಿರ ಮಾಸವುದೆ ಸೌರಮಾನದ ಧನು ತಿಂಗಳುದೆ ಸಾಧಾರಣ ಒಟ್ಟೊಟ್ಟಿಂಗೆ ಬತ್ತು. ಹಾಂಗೇ ಧನು ತಿಂಗಳುದೇ ದೇವರ ಆರಾಧನೆಗೆ ವಿಶೇಷ. ಆಧ್ಯಾತ್ಮಿಕ ಸಾಧನೆಗೊಕ್ಕೆ, ಆತ್ಮಶುದ್ದಿಗೆ ಆದ್ಯತೆ ಕೊಡುವ ತಿಂಗಳಿದು. ಧನು
Read More‘ ಜನಮಾನಸದಲ್ಲಿ ಗೋವಿನ ಬಗ್ಗೆ ಸದ್ಭಾವ ಮೂಡಿಸಿದ ಯೋಜನೆ ಮಾತೃತ್ವಮ್ ‘ : ಶೈಲಜಾ ಮಾಂಬಾಡಿ
” ಸಮಾಜದ ಏಳಿಗೆಯನ್ನೇ ಗುರಿಯಾಗಿರಿಸಿಕೊಂಡು ನಮ್ಮ ಶ್ರೀಗುರುಗಳು ಕೈಗೊಂಡಿರುವ ವಿವಿಧ ಯೋಜನೆಗಳಲ್ಲಿ ಭಾಗಿಯಾಗುವುದು ಮನಸ್ಸಿಗೆ ಆನಂದದಾಯಕ ವಿಚಾರ. ಶ್ರೀಗುರು ಕರುಣೆಯ ಅಮೃತದ ಸವಿ ನಮ್ಮನ್ನು ಮತ್ತಷ್ಟು ಸೇವೆ ಮಾಡಲು ಪ್ರೇರೇಪಿಸುತ್ತದೆ ” ಎಂದವರು ಉಪ್ಪಿನಂಗಡಿ ಮಂಡಲ, ಪುತ್ತೂರು ವಲಯ ಕರ್ಮಲ ನಿವಾಸಿಗಳಾಗಿರುವ ವೇಣುಗೋಪಾಲ ಭಟ್ ಮಾಂಬಾಡಿ ಇವರ ಪತ್ನಿ ಶೈಲಜಾ. ತೆಂಕಬೈಲು ಚಕ್ರಕೋಡಿ ತಿರುಮಲೇಶ್ವರ ಶಾಸ್ತ್ರಿ, ಸರಸ್ವತಿ ದಂಪತಿಗಳ ಪುತ್ರಿಯಾಗಿರುವ ಇವರು ಈಗಾಗಲೇ ಐದು ಗೋವುಗಳ ಪೋಷಣೆಯ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ. ” ಶ್ರೀ ಮಠದ
Read Moreಹವಿ – ಸವಿ ತೋರಣ ೧೩ ಅಟ್ಟುಂಬೊಳದ ಸುದ್ದಿ
ಅಟ್ಟುಂಬೊಳ ಹೇಳಿದರೆ ಅಡಿಗೊಳ ಹೇಳಿ ನಮಗೆಲ್ಲ ಗೊಂತಿದ್ದು. ಅಟ್ಟು ( ಅಡಿಗೆ ಮಾಡಿ ) ಉಂಬ ಒಳ ಹೇಳುವ ಕಾರಣಕ್ಕೆ ಆ ಉಗ್ರಾಣಕ್ಕೆ ಅಟ್ಟುಂಬೊಳ ಹೇಳುವ ಹೆಸರು ಬಂದದು ಹೇಳ್ತವು. ಇಂದು ನಾವು ಬದಲಾವಣೆ ಆವ್ತಾ ಇಪ್ಪ ಅಟ್ಟುಂಬೊಳದ ಸುದ್ದಿ ಮಾತಾಡುವ°. ಊಟ ಬಲ್ಲವನಿಗೆ ರೋಗ ಇಲ್ಲ ‘ ಹೇಳುವ ಗಾದೆಮಾತಿನ ನಾವೆಲ್ಲ ಕೇಳಿದ್ದು. ನಮ್ಮೆಲ್ಲರ ಆರೋಗ್ಯದ ಗುಟ್ಟು ಈ ಅಟ್ಟುಂಬೊಳವೇ ಇಪ್ಪದು. ಮೊದಲಿಂಗೆ ಕೂಡು ಕುಟುಂಬ ಇಪ್ಪಗ ಹಳೇ ಕಾಲದ ಮನೆಗಳಲ್ಲಿ ಸೌದಿ ಒಲೆಗಳಲ್ಲಿ ಮಣ್ಣಳಗೆಲಿ
Read More‘ ದುಃಖದ ಕಾರ್ಮೋಡ ಸರಿಸುವ ಶಕ್ತಿ ಗೋಮಾತೆಯ ಸೇವೆಗಿದೆ ‘ : ಯಶೋದಾ ರಾಮಚಂದ್ರ ಭಟ್ ಶಿರಸಿ
” ಗೋ ಸೇವೆ, ಶ್ರೀಮಠದ ಸೇವೆ ಮಾಡಲು ಜನ್ಮಾಂತರದ ಪುಣ್ಯ ಬೇಕು. ಶ್ರೀರಾಮದೇವರ ಅನುಗ್ರಹದಿಂದ ನನಗೆ ಅಂತಹ ಸದವಕಾಶ ದೊರಕಿದೆ. ಬದುಕಿನ ನೋವುಗಳಲ್ಲಿ ಸಾಂತ್ವನದ ತಂಪಾಗಿ ಜೊತೆಗೆ ಇದ್ದಿದ್ದು ಶ್ರೀಗುರುಗಳ ಅನುಗ್ರಹ. ಆ ದುಃಖದಿಂದ ಹೊರ ಬರುವಂತೆ ಮಾಡಿ ಜೀವನೋತ್ಸಾಹ ಮೂಡಿಸಿದ್ದು ಗೋಮಾತೆಯ ಸೇವೆ ” ಎಂದವರು ಸಿದ್ದಾಪುರ ಮಂಡಲ ಅಂಬಾಗಿರಿ ವಲಯದ ಶಿರಸಿ ನಿವಾಸಿಗಳಾಗಿರುವ ರಾಮಚಂದ್ರ ಭಟ್ ಅವರ ಪತ್ನಿ ಯಶೋದಾ. ಹೊನ್ನಾವರ ಕರ್ಕಿಯ ವಿಠಲ ಹೆಗಡೆ, ಲಕ್ಷ್ಮಿ ದಂಪತಿಗಳ ಪುತ್ರಿಯಾದ ಯಶೋದಾ
Read Moreಶ್ರೀಗುರುಗಳ ಅನುಗ್ರಹ ಬದುಕಿಗೆ ಶ್ರೀ ರಕ್ಷೆ – ಉಮಾ ವಿಘ್ನೇಶ್ವರ ಕತಗಾಲ್
” ಶ್ರೀಗುರು ಕರುಣೆಯ ಅಮೃತದ ಸವಿ ಅನುಭವಿಸಿದವರು ಮಾತ್ರ ಬಲ್ಲರು. ಗುರು ಸ್ಮರಣೆ ಮಾತ್ರದಿಂದಲೇ ಬದುಕಿನ ಅಂಧಕಾರ ದೂರವಾಗುತ್ತದೆ. ಭಾವಪೂರ್ಣ ತನ್ಮಯತೆಯಿಂದ ಪ್ರಾರ್ಥಿಸಿದರೆ ನಮ್ಮ ಪ್ರಾರ್ಥನೆ ಫಲಿಸುತ್ತದೆ ” ಎಂದವರು ಕುಮಟಾ ಮಂಡಲ ಉಪ್ಪಿನಪಟ್ಟಣ ವಲಯದ ಉಮಾ ವಿಘ್ನೇಶ್ವರ ಕತಗಾಲ್ ಹೊನ್ನಾವರ ಸಮೀಪದ ಕಡ್ಲೆ ಗಜಾನನ ರಾಮ ಹೆಗಡೆ ಹಾಗೂ ಭಾಗೀರಥಿ ಗಜಾನನ ಹೆಗಡೆ ದಂಪತಿಗಳ ಪುತ್ರಿಯಾದ ಉಮಾ ಎರಡು ಗೋವುಗಳ ಗುರಿ ತಲುಪಿದ ಮಾಸದಮಾತೆಯಾಗಿದ್ದಾರೆ. ” ಈಶ್ವರಿ ಅಕ್ಕನ ಮಾತುಗಳಿಂದ ಮಾತೃತ್ವಮ್ ಬಗ್ಗೆ ಆಸಕ್ತಿ
Read Moreಹವಿ – ಸವಿ ತೋರಣ ೧೨ ಮರುಕಳಿಸಲಿ ಮನೆಮಾತು
ಭಾಷೆ ಹೇಳಿದರೆ ಬರೀ ಮಾತಾಡ್ಲೆ ಮಾಂತ್ರ ಇಪ್ಪದಲ್ಲ. ಅದರೊಟ್ಟಿಂಗೆ ತುಂಬಾ ಚೆಂದದ ಸಂಸ್ಕೃತಿಯೂ ಜೋಡಿಂಡಿದ್ದು. ನಮ್ಮ ಭಾಷೆ, ಸ೦ಸ್ಕೃತಿ ಒಳಿಯೆಕಾದರೆ ಮನೆಭಾಷೆಯ ಮಹತ್ವ ಗೊಂತಾಯೆಕು. ನಾವು ಮಾತಾಡುವ ಭಾಷೆಯೇ ಮನೆಭಾಷೆ ಅಥವಾ ಅಬ್ಬೆ ಭಾಷೆ ( ಮಾತೃ ಭಾಷೆ). ಅಬ್ಬೆಯತ್ರೆ ನಮಗೆ ಎಷ್ಟು ಪ್ರೀತಿಯೋ, ಅಷ್ಟೇ ಪ್ರೀತಿ, ಗೌರವ, ಅಭಿಮಾನ ಅಬ್ಬೆ ಭಾಷೆಯತ್ರೂ ಬೇಕು. ನಮಗೆಲ್ಲ ಅಬ್ಬೆ ಭಾಷೆಯ ಮಹತ್ವ ಅರಡಿಯೆಕು ಹೇಳುವ ಕಾರಣಕ್ಕೇ ನಮ್ಮ ಗುರುಗೊ ಕಳೆದ ಚಾತುರ್ಮಾಸ್ಯವನ್ನೇ ಸ್ವಭಾಷಾ ಚಾತುರ್ಮಾಸ್ಯ ಹೇಳುವ ಹೆಸರು ಮಡುಗಿ
Read Moreಕರಗಳಲ್ಲಿ ಕಲೆ ಅರಳಿಸುವ ಶ್ರೀಮಾತೆ – ಅರ್ಚನಾ ಸುಬ್ರಹ್ಮಣ್ಯ ಕಾನುಗೋಡು
ಕಲೆ, ಕಸೂತಿ, ಹೂವಿನ ಹಾರ, ರಂಗೋಲಿಯೇ ಮೊದಲಾದ ಕಲೆಗಳಲ್ಲಿ ವಿಶೇಷ ಪರಿಣತಿ ಪಡೆದು, ವೈಶಿಷ್ಟ್ಯಮಯ ವಿನ್ಯಾಸಗಳಿಂದಲೇ ಅವುಗಳಲ್ಲಿ ತಮ್ಮ ಛಾಪು ಒತ್ತಿರುವ ಅಪರೂಪದ, ಆಕರ್ಷಕ ವ್ಯಕ್ತಿತ್ವದ ಒಡತಿಯಾಗಿರುವ ಮಾಸದ ಮಾತೆ ಅರ್ಚನಾ ಸುಬ್ರಹ್ಮಣ್ಯ. ರಾಮಚಂದ್ರಾಪುರ ಮಂಡಲದ ಕಾನುಗೋಡು ವಲಯದ ಮಾತೃ ಪ್ರಧಾನೆಯೂ ಆಗಿರುವ ಅರ್ಚನಾ ಶಿರಸಿಯ ಸಮೀಪದ ವಡ್ಡಿನಕೊಪ್ಪ ದತ್ತಾತ್ರೇಯ ರಾಯ್ಸದ್ ಹಾಗೂ ಜಯಾ ರಾಯ್ಸದ್ ದಂಪತಿಗಳ ಪುತ್ರಿ. ” ಮದುವೆಯಾದ ಆರಂಭದಲ್ಲಿ ಹಳ್ಳಿಮನೆ ಸೇರಬೇಕಾಗಿ ಬಂತಲ್ಲಾ, ಹಸುಗಳ ಕೆಲಸ, ಹಟ್ಟಿ ಕೆಲಸ ಮಾಡಬೇಕಲ್ಲಾ ಎಂದೆನಿಸುತ್ತಿತ್ತು.
Read More“ಶ್ರೀಮಠದ ಸೇವೆ – ಗೋ ಸೇವೆ ಬದುಕಿನ ಅವಿಭಾಜ್ಯ ಅಂಗ ” – ಸ್ವಾತಿ ಯು. ಯಸ್. ಭಟ್ ಮಿತ್ತೂರು
” ಗೋವು ನಮ್ಮ ಜೀವನದ ಅವಿಭಾಜ್ಯ ಅಂಗ. ಗೋವಿನ ಜೊತೆ ಬಾಂಧವ್ಯವಿಲ್ಲದೆ ನಮ್ಮ ಬದುಕು ಸಂಪೂರ್ಣವಲ್ಲ. ದೇಶಿ ಗೋವಿನ ಉತ್ಪನ್ನಗಳು ನಮ್ಮ ಆರೋಗ್ಯವನ್ನು ಸಂರಕ್ಷಿಸುತ್ತವೆ. ಅನೇಕ ರೋಗಗಳಿಗೂ ಔಷಧವಾಗಿವೆ. ಇಂತಹ ಗೋವುಗಳನ್ನು ಸಂರಕ್ಷಿಸುವ ಮಹತ್ಕಾರ್ಯದ ದೀಕ್ಷೆ ತೊಟ್ಟಿರುವ ನಮ್ಮ ಗುರುಗಳ ಮಹತ್ವಪೂರ್ಣ ಯೋಜನೆಗೆ ಕೈಜೋಡಿಸುವ ಅವಕಾಶ ದೊರಕಿದ್ದು ಪೂರ್ವ ಜನ್ಮದ ಸುಕೃತ ” ಎನ್ನುತ್ತಾರೆ ಮಂಗಳೂರು ಮಂಡಲ, ಮಂಗಳೂರು ಮಧ್ಯ ವಲಯದ ಮಿತ್ತೂರು ಉದಯಶಂಕರ್ ಭಟ್ ಅವರ ಪತ್ನಿ ಸ್ವಾತಿ ಯು ಎಸ್ ಭಟ್. ಮೀಯಪದವು ನಾರಾಯಣ
Read Moreಹವಿ ಸವಿ ತೋರಣ – ೧೧ ‘ಜೋ..ಜೋ.. ಕೃಷ್ಣಾ ಪರಮಾನಂದಾ….’
ಜೋಗುಳ, ಲಾಲಿ’ ಈ ಪದಂಗೊಕ್ಕೆ ಎಂತಹ ಆಕರ್ಷಣೆ..! ನಾವೆಲ್ಲ ಸಣ್ಣಾದಿಪ್ಪಗ ಜೋಗುಳ ಕೇಳಿಂಡೇ ಒರಗಿಂಡಿದ್ದದಲ್ಲದೋ. ಪುಟ್ಟು ಪಾಪುವಿನ ತೊಟ್ಲಿಲ್ಲಿ ಮನುಶಿ ಜೋ.. ಜೋ..’ ಹೇಳುವ ಚೆಂದದ ಒಂದು ನೋಟ ಮನಸ್ಸಿಂಗೆ ಅದೆಷ್ಟು ಕೊಶಿ ಕೊಡ್ತು. ತೊಟ್ಲು ಅಥವಾ ತೊಟ್ಟಿಲು ಹೇಳುವ ಮಕ್ಕಳ ಮನುಶುವ ಉಯ್ಯಾಲೆಲಿ ಮಕ್ಕಳ ಒಪ್ಪಕೆ ಮನುಶಿ ಅಬ್ಬೆ ‘ಜೋ..ಜೋ..ಕೃಷ್ಣಾ….ಪರಮಾನಂದಾ….ಜೋ…ಜೋ..ದೇವಕಿ ಕಂದ ಮುಕುಂದಾ…ಜೋ…ಜೋ….’ ಹೇಳಿ ಜೋಗುಳ ಹಾಡಿದರೆ ಎಷ್ಟು ಗೆಂಟು ತರ್ಕ ಮಾಡಿ ಕೂಗುವ ಮಕ್ಕೊ ಕೂಡ ಕಣ್ಣು ಮುಚ್ಚಿ ಮನುಗುತ್ತವು. ತೊಟ್ಲಿಂಗು, ಜೋಗುಳಕ್ಕು
Read More” ಶ್ರೀಗುರು ಸೇವೆಯಿಂದ ಅನನ್ಯ ಫಲ ದೊರಕುತ್ತದೆ ” ಪರಮೇಶ್ವರಿ ಭಟ್ ಮಾನಸವನ
” ಶ್ರೀಮಠದ ಸೇವೆಯಲ್ಲಿ ಅಪಾರ ಶ್ರದ್ದೆ ಇರುವ ಕುಟುಂಬ ನಮ್ಮದು. ಶ್ರೀಗುರುಗಳು ಮೂರು ಬಾರಿ ನಮ್ಮ ಮನೆಗೆ ಚಿತ್ತೈಸಿದ್ದಾರೆ. ಶ್ರೀಮಠದ ವಿವಿಧ ಯೋಜನೆಗಳಲ್ಲಿ ನಮ್ಮ ಮನೆಯ ಸದಸ್ಯರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ತೊಡಗಿಸಿಕೊಂಡಿದ್ದೇವೆ. ನಮ್ಮವರು ಗುರಿಕ್ಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನನ್ನ ಮಗಳು, ಸೊಸೆ ಇಬ್ಬರೂ ಮಾಸದ ಮಾತೆಯರಾಗಿದ್ದಾರೆ. ಶ್ರೀಗುರು ಸೇವೆಯಿಂದ ಅನನ್ಯ ಫಲ ದೊರಕುತ್ತದೆ ಎಂಬುದು ನಮ್ಮ ಜೀವನದ ಅನುಭವ ” ಎಂದವರು ಉಪ್ಪಿನಂಗಡಿ ಮಂಡಲ, ಬೆಳ್ಳಾರೆ ವಲಯದ ಪೆರ್ಲಂಪಾಡಿ ಸಮೀಪದ ಅಲೆಕ್ಕಾಡಿ ಮಾನಸವನದ
Read Moreಹವಿ ಸವಿ ತೋರಣ – ೧೦ ಅಜ್ಜಿ ಹೇಳುವ ಕಥೆಗೊ
ಅಜ್ಜಿ ಹೇಳುಗ ಮನಸ್ಸಿಂಗೆ ಬಪ್ಪದೇ ಪ್ರೀತಿ ವಾತ್ಸಲ್ಯದ ಪ್ರತಿರೂಪದ ನೆಂಪು. ಅಜ್ಜ° ಅಜ್ಜಿಯ ಪ್ರೀತಿಗೆ ಸಮವಾದ್ದು ಯೇವದು ಇಲ್ಲೆ. ಪುಳ್ಳಿಯಕ್ಕಳ ಸುತ್ತುದೆ ಕೂರ್ಸಿ ಅವು ಕಥೆ ಹೇಳುವ ಚೆಂದವ ವರ್ಣಿಸುಲೆ ಎಡಿಯ. ಮಕ್ಕೋಗೆ ಕಥೆ ಕೇಳ್ಲೆ ಎಷ್ಟು ಕೊದಿ ಇರ್ತೋ ಅಷ್ಟೇ ಪ್ರೀತಿಲಿ ಅಜ್ಜಿ, ಅಜ್ಜ° ಕಥೆ ಹೇಳ್ತವು. ಮದಲಿಂಗೆ ಅಜ್ಜಿಯ ಕಥೆ ಕೇಳದ್ದೆ ದೊಡ್ಡಾದ ಮಕ್ಕೊ ತುಂಬಾ ಕಮ್ಮಿ ಇಕ್ಕಷ್ಟೇ. ಅಜ್ಜಿಯ ಕಥೆ ಕೇಳುವ ಪುಳ್ಳಿಯಕ್ಕಳ ಸಂಭ್ರಮ ಒಂದು ಬೇರೆಯೇ. ಎಲೆ ಬಾಯಿಗೆ ಹಾಕಿಂಡು,
Read More